ಬೆಂಗಳೂರು:- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಅಕ್ಷರಶಃ ದರ್ಶನ್ ಗೆ ಮುಳುವಾಗಿದೆ.
ಮತ್ತೊಂದು ಮೈಲಿಗಲ್ಲು ಸಾಧಿಸಿದ ನಮ್ಮ ಮೆಟ್ರೋ: ಸುರಂಗ ಕೊರೆದು ಹೊರ ಬಂದ ಟಿಬಿಎಂ ತುಂಗಾ!
ಕೊಲೆ ಸಂಬಂಧ ಇಂದು ಚಾರ್ಜ್ಶೀಟ್ ಸಲ್ಲಿಕೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ದರ್ಶನ್ ಮತ್ತು ಸಹಚರರನ್ನು ತನಿಖೆ ನಡೆಸಿ ಹಲವು ಸಾಕ್ಷಿ ಸಂಗ್ರಹಿಸಿದ್ದಾರೆ. ಸುಮಾರು 3991 ಪುಟಗಳ ಚಾರ್ಜ್ಶೀಟನ್ನು ಪೊಲೀಸರು ಸಲ್ಲಿಸಲಿದ್ದಾರೆ. ಆದರೆ ಚಾರ್ಜ್ಶೀಟ್ನಲ್ಲಿ ಕೆಲವೊಂದು ಅಚ್ಚರಿಯ ಸಂಗತಿಗಳು ಬಯಲಾಗಿದ್ದು, ದರ್ಶನ್ ಗೆ ಅಷ್ಟು ಸುಲಭವಾಗಿ ಜಾಮೀನು ದೊರೆಯಲು ಸಾಧ್ಯವಿಲ್ಲ.
ಚಾರ್ಜ್ಶೀಟ್ನಲ್ಲಿನ ಇಂಟೆಸ್ಟಿಂಗ್ ಸಂಗತಿಗಳು:-
ಜೂನ್ 8 ರಂದು ಆರ್ ಆರ್ ನಗರದ ಪಟ್ಟಣಗೆರೆಯಲ್ಲಿ ಹತ್ಯೆಯಾಗಿದ್ದ ರೇಣುಕಾಸ್ವಾಮಿ
ಹತ್ಯೆಯಾದ ಬಳಿಕ ಮೃತದೇಹವನ್ನ ಅದೇ ದಿನ ರಾತ್ರಿ ವಿಲೇವಾರಿ ಮಾಡಿದ್ದ ಆರೋಪಿಗಳು
ಕೇಶವ್, ಕಾರ್ತಿಕ್ ಜೊತೆ ಸೇರಿ ನಿಖಿಲ್ ನಾಯಕ್ ಶವ ಬೀಸಾಕಿದ್ರು
ಸುಮ್ಮನಹಳ್ಳಿಯ ಮೋರಿ ಬಳಿ ಶವ ಎಸೆದಿದ್ರು
ಶವ ಎಸೆದ ಬಳಿಕ ಜೂನ್ 9 ರಂದು RR ನಗರದಲ್ಲಿ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿ ಎಣ್ಣೆ ಪಾರ್ಟಿ ಮಾಡಿದ್ರು
ಜೂನ್ 10 ರಂದು ಹಣಕಾಸಿನ ವಿಚಾರಕ್ಕೆ ರೇಣುಕಾಸ್ವಾಮಿಯನ್ನ ಹತ್ಯೆ ಮಾಡಿರೋದಾಗಿ ಹೇಳಿಕೊಂಡು ಸರೆಂಡರ್ ಆಗಿದ್ದ ಆರೋಪಿಗಳು
ಕೇಶವ್ ಕಾರ್ತಿಕ್ ಜೊತೆಗೆ ನಿಖಿಲ್ ನಾಯಕ್ ಕಾಮಾಕ್ಷಿಪಾಳ್ಯ ಠಾಣೆಗೆ ಸೆರಂಡರ್
ರೇಣುಕಾಸ್ವಾಮಿ ಹತ್ಯೆ ನಂತರ ಒಂದೇ ಬಟ್ಟೆಯಲ್ಲಿ ಮೂರು ದಿನ ಕಳೆದಿದ್ದ ಆರೋಪಿ
ಬಟ್ಟೆ ಬದಲಾಯಿದೇ ಓಡಾಟ. ಬಟ್ಟೆ ಬದಲಾಯಿಸದೇ ಎಣ್ಣೆ ಪಾರ್ಟಿ
ಶವ ಬೀಸಾಕಿದ್ದಗಿನಿಂದ ಒಂದೇ ಬಟ್ಟೆ ಧರಿಸಿದ್ದ ಆರೋಪಿ ನಿಖಿಲ್ನಾಯಕ್
ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್ ವಿಚಾರಣೆ ವೇಳೆ ಕೇಶವ್, ಕಾರ್ತಿಕ್ ಕೃತ್ಯದ ವೇಳೆ ಧರಿಸಿದ್ದ ಬಟ್ಟೆಯನ್ನ RR ನಗರದ ಹೋಟಲ್ನಲ್ಲಿ ಬದಲಾಯಿಸಿದ್ದಾಗಿ ಹೇಳಿಕೆ
ನಿಖಿಲ್ ನಾಯಕ್ ಕಳೆದ ಮೂರು ದಿನದಿಂದ ಕೃತ್ಯದ ವೇಳೆಯೂ ಇದೇ ಬಟ್ಟೆಯಲ್ಲೇ ಇದ್ದೇನೆ ಎಂದು ಹೇಳಿಕೆ.
ಆರೋಪಿಗೆ ಬೇರೆ ಬಟ್ಟೆ ಕೊಟ್ಟು ನಿಖಿಲ್ ನಾಯಕ್ ಧರಿಸಿದ್ದ ಬಟ್ಟೆಯನ್ನ ವಶಕ್ಕೆ ಪಡೆದಿದ್ದ ಇನ್ಸ್’ಪೆಕ್ಟರ್ ಗಿರೀಶ್ ನಾಯ್ಕ್