Author: AIN Author

ಬೆಂಗಳೂರು:- ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ರಂಜಾನ್ ಹಬ್ಬಕ್ಕೂ ಮುನ್ನ ಹಣ ಕಳೆದುಕೊಂಡವರಿಗೆ ಪರಿಹಾರ ಕೊಡಲಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡರು ಹೇಳಿದ್ದಾರೆ. ಸಂತ್ರಸ್ತರಿಗೆ ಯಾವಾಗ ಮತ್ತು ಹೇಗೆ ಹಣ ಹಿಂತಿರುಗಿಸಬೇಕು? ಎಂಬ ಕುರಿತು ಸೋಮವಾರ ವಿಕಾಸಸೌಧ ಕಚೇರಿಯಲ್ಲಿ ಸಭೆ ನಡೆಸಿ ಚರ್ಚಿಸಲಾಗಿದೆ. ಸಭೆಯಲ್ಲಿ ಸಚಿವರಾದ ಜಮೀರ್ ಅಹ್ಮದ್, ಶಾಸಕರಾದ ರಿಜ್ವಾನ್ ಅರ್ಷದ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರ ಜೊತೆಗೆ ಐಎಂಎ ಹಗರಣದಿಂದ ಹಣ ಕಳೆದುಕೊಂಡ ಹಲವರು ಭಾಗಿಯಾಗಿದ್ದರು. ಈ ವೇಳೆ ಸಂತ್ರಸ್ತರಿಗೆ ಭರವಸೆ ನೀಡಿದ ಅವರು, ರಂಜಾನ್ ಹಬ್ಬಕ್ಕೂ ಹತ್ತು ದಿನ ಮೊದಲೇ ಐಎಂಎ ನಲ್ಲಿ ಹಣ ಹೂಡಿ ಮೋಸ ಹೋದವರಿಗೆ ಅವರ ಹೂಡಿಕೆಯ ಅನುಪಾತದ ಆಧಾರದಲ್ಲಿ ಪರಿಹಾರ ನೀಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ ಹಣ ಡಬ್ಲಿಂಗ್ ಆಸೆಯಿಂದಾಗಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಠೇವಣಿದಾರರ ಖಾತೆಗಳ ಮೂಲಕ 3213.58 ಕೋಟಿ ರೂ.ಗಳನ್ನು ಐಎಂಎ ಕಂಪೆನಿಯಲ್ಲಿ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ. ಕಂಪೆನಿಯ ಒಟ್ಟು ಠೇವಣಿದಾರರ ಸಂಖ್ಯೆ…

Read More

ಮಂಡ್ಯ:- ಮಂಡ್ಯದಲ್ಲಿ ಪುಡಿರೌಡಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೀಸೆ ಚಿಗುರದ ಅಪ್ರಾಪ್ತ ಬಾಲಕರ ಕ್ರೌರ್ಯ ಜಿಲ್ಲೆಯ ಜನರನ್ನ ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಅಂದಹಾಗೆ ಯುವತಿಯೊಬ್ಬಳ ವಿಚಾರವಾಗಿ ಮಂಡ್ಯದಲ್ಲಿ ಇತ್ತೀಚಿಗೆ ಎರಡು ಗುಂಪುಗಳ ನಡುವೆ ವಾರ್ ನಡೆದಿದೆ. https://ainlivenews.com/rape-case-constable-who-committed-raped-on-a-girl/ ಮಂಡ್ಯದಲ್ಲಿ ಐಟಿಐ ಮಾಡುತ್ತಿದ್ದ ಮೈಸೂರು ಜಿಲ್ಲೆಯ ಟೀ ನರಸಿಪುರ ಮೂಲದ 19 ವರ್ಷದ ಯುವಕನೊಬ್ಬನನ್ನ ಸುಮಾರು ಏಳೆಂಟು ಅಪ್ರಾಪ್ತ ಬಾಲಕರು ಮಂಡ್ಯದ ಹೊರವಲಯದ ಸ್ಮಶಾನಕ್ಕೆ ಕರೆದುಕೊಂಡು ಹೋಗಿ ಲಾಂಗ್​ನಿಂದ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಕಾಲಿನಿಂದ ಒದ್ದು, ಅವಾಚ್ಯ ಶಬ್ಧಗಳಿಂದ ಬೈದು ಬೆದರಿಕೆ ಹಾಕುವ ಜೊತೆಗೆ ಫೇಸ್ ಬುಕ್​ ಲೈವ್ ಮಾಡಿದ್ದಾರೆ. ಸಂತ್ರಸ್ತ ಯುವಕ ‌ಪರಿಪರಿಯಾಗಿ ಬೇಡಿಕೊಂಡರು ಬಿಡದ ಅಪ್ರಾಪ್ತರು ಕ್ರೌರ್ಯ ಮೆರೆದಿದ್ದಾರೆ. ಅಂದಹಾಗೆ ಫೇಸ್ ಬುಕ್​ನಲ್ಲಿ ಲೈವ್ ಆದ ಕ್ರೌರ್ಯದ ವಿಡಿಯೋ ಆನಂತರ ಜಿಲ್ಲೆಯಾದ್ಯಂತ ವೈರಲ್ ಆಗಿದೆ. ಮೀಸೆ ಚಿಗುರದ ಅಪ್ರಾಪ್ತರ ಅಟ್ಟಹಾಸ ಬೆಚ್ಚಿ ಜನತೆಯನ್ನ ಬೀಳುವಂತೆ ಮಾಡಿದೆ. ಇನ್ನು ಘಟನೆ ಸಂಬಂಧ ಸಂತ್ರಸ್ತ ಯುವಕ ದೂರು‌ ನೀಡಲು ಹಿಂದೇಟು…

Read More

ಬೆಂಗಳೂರು:- ದೂರು ನೀಡಲು ಠಾಣೆಗೆ ಬಂದ ಅಪ್ರಾಪ್ತೆ ವಯಸ್ಸಿನ ಹುಡುಗಿಗೆ ಸಹಾಯ ಮಾಡುವ ನೆಪದಲ್ಲಿ ಆಕೆಯನ್ನು ಲೈಂಗಿಕವಾಗಿ ಬಳಿಸಿಕೊಂಡಿದ್ದಾನೆ ಎಂದು ಬೊಮ್ಮನಹಳ್ಳಿ ಠಾಣೆಯ ಕಾನ್ ಸ್ಟೇಬಲ್ ಅರುಣ್ ವಿರುದ್ಧ ಗಂಭೀರ ಆರೋಪ ಬಂದಿದ್ದು, ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸರು, ಕಾನ್​ಸ್ಟೇಬಲ್ ಸೇರಿ ಇಬ್ಬರನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. https://ainlivenews.com/rachins-century-new-zealand-win-pakistan-from-the-tournament-bangladesh-out/ ತಮಗಾದ ಅನ್ಯಾಯ ಬಗ್ಗೆ ಬಾಲಕಿ ಹಾಗೂ ಬಾಲಕಿ ತಾಯಿ ದೂರು ನೀಡಲು ಠಾಣೆಗೆ ಹೋಗಿದ್ದು, ಬೊಮ್ಮನಹಳ್ಳಿ ಪೋಲಿಸ್ ಠಾಣಾ ಪೇದೆ ಬಾಲಕಿಯ ನಂಬರ್ ಪಡೆದು ಆಕೆಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ವೆಸಗಿದ್ದಾನೆಂದು ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಆರೋಪಿಗಳಾದ ಪೇದೆ ಅರುಣ್ ಹಾಗೂ ವಿಕ್ಕಿ ಎಂಬುವ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಸಂತ್ರಸ್ಥೆ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದಳು. ಈ ವೇಳೆ ನೆರೆಮನೆ ನಿವಾಸಿ ವಿವಾಹಿತ ವ್ಯಕ್ತಿಯ ಪರಿಚಯವಾಗಿದೆ. ಬಳಿಕ ಪ್ರೀತಿಸಿ ಮದುವೆ ಮಾಡಿಕೊಳ್ಳುವುದಾಗಿ ಪುಸಲಾಯಿಸಿ ಬಾಲಕಿ ಮೇಲೆ ಆತ್ಯಾಚಾರವೆಸಗಿ ಹಲ್ಲೆ ಮಾಡಿದ್ದಾನೆ. ಇದರಿಂದ…

Read More

ಬಾಂಗ್ಲಾ ವಿರುದ್ಧದ ಚಾಂಪಿಯನ್ ಟ್ರೋಫಿ ಪಂದ್ಯದಲ್ಲಿ ನ್ಯೂಜಿಲೆಂಡ್‌ ಜಯದೊಂದಿಗೆ ಟೂರ್ನಿಯಿಂದಲೇ ಬಾಂಗ್ಲಾದೇಶ ಮತ್ತು ಅತಿಥೇಯ ಪಾಕಿಸ್ತಾನ ನಿರ್ಗಮಿಸಿದೆ. https://ainlivenews.com/wpl-2025-up-warriors-won-against-rcb/ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾದೇಶ 50 ಓವರ್‌ಗಳಲ್ಲಿ 236 ರನ್‌ ಗಳಿಸಿತು. ಸುಲಭ ಸವಾಲನ್ನು ಪಡೆದ ನ್ಯೂಜಿಲೆಂಡ್‌ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡರೂ ಅಂತಿಮವಾಗಿ 46.1 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 240 ರನ್‌ ಹೊಡೆದು ಸೆಮಿಫೈನಲ್‌ ಪ್ರವೇಶಿಸಿತು. ಪಂದ್ಯ ಬಾಂಗ್ಲಾದೇಶ ಮತ್ತು ಪಾಕಿಸ್ತಾನಕ್ಕೆ ನಿರ್ಣಾಯಕವಾಗಿತ್ತು. ಪಂದ್ಯದಲ್ಲಿ ಬಾಂಗ್ಲಾದೇಶ ಗೆದ್ದು, ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ಭಾರತ ಜಯಗಳಿಸಿ ಬಾಂಗ್ಲಾ ವಿರುದ್ಧ ಪಾಕ್‌ ಗೆದ್ದಿದ್ದರೆ ರನ್‌ ರೇಟ್‌ ಆಧಾರದಲ್ಲಿ ತಂಡಗಳು ಸೆಮಿಫೈನಲ್‌ ಪ್ರವೇಶಿಸಬೇಕಿತ್ತು. ಆದರೆ ಈಗ ಬಾಂಗ್ಲಾ ಸೋಲುವ ಮೂಲಕ ನ್ಯೂಜಿಲೆಂಡ್‌ ಮತ್ತು ಭಾರತ ಅಧಿಕೃತವಾಗಿ ಸೆಮಿಫೈನಲ್‌ ಪ್ರವೇಶಿಸಿವೆ. ನ್ಯೂಜಿಲೆಂಡ್‌ ಪರ ಡಿವೋನ್ ಕಾನ್ವೇ 45 ಎಸೆತಗಳಲ್ಲಿ 6 ಬೌಂಡರಿ ನೆರವಿಂದ 30 ರನ್‌, ರಚಿನ್ ರವೀಂದ್ರ 105 ಎಸೆತಗಳಲ್ಲಿ 1 ಸಿಕ್ಸರ್‌, 12 ಬೌಂಡರಿ ನೆರವಿನಿಂದ 112 ರನ್‌ ಹೊಡೆದರು.…

Read More

RCB ವಿರುದ್ಧ ಯುಪಿ ವಾರಿಯರ್ಸ್ ಗೆದ್ದು ಬೀಗಿದೆ. ಮಹಿಳಾ ಪ್ರೀಮಿಯರ್‌ ಲೀಗ್‌ ಇತಿಹಾಸದಲ್ಲಿ ನಡೆದ ಮೊದಲ ಸೂಪರ್‌ ಓವರ್‌ನಲ್ಲಿ ಯುಪಿ ವಾರಿಯರ್ಸ್‌ ಆರ್‌ಸಿಬಿ ವಿರುದ್ಧ ಗೆದ್ದು ಬೀಗಿದೆ. ಸೋಫಿ ಎಕ್ಲೆಸ್ಟೋನ್ ಅವರ ಆಲ್‌ರೌಂಡರ್‌ ಆಟದ ಪ್ರದರ್ಶನದಿಂದ ತವರಿನಲ್ಲಿ ಆರ್‌ಸಿಬಿ ಸೋತಿದೆ. https://ainlivenews.com/young-man-killed-in-wild-elephant-attack-in-hassan-family-members-in-shock/ ಪಂದ್ಯದಲ್ಲಿ ಟಾಸ್ ಗೆದ್ದ ಯುಪಿ ವಾರಿಯರ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಎಲ್ಲಿಸ್ ಪೆರ್ರಿ ಅದ್ಭುತ ಇನ್ನಿಂಗ್ಸ್ ಆಡಿದರು. ಇದರಿಂದಾಗಿ ಆರ್‌ಸಿಬಿ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 180 ರನ್ ಗಳಿಸಿತು. ಎಲ್ಲಿಸ್ ಪೆರ್ರಿ 56 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ ಅಜೇಯ 90 ರನ್ ಗಳಿಸಿದರು. ಅವರಲ್ಲದೆ, ಡ್ಯಾನಿ ವ್ಯಾಟ್ ಕೂಡ 57 ರನ್‌ಗಳ ಕೊಡುಗೆ ನೀಡಿದರು. ಪೆರ್ರಿ ಡ್ಯಾನಿ ವ್ಯಾಟ್ ಜೊತೆ ಅರ್ಧಶತಕದ ಪಾಲುದಾರಿಕೆಯನ್ನು ಹಂಚಿಕೊಂಡರು. ಮತ್ತೊಂದೆಡೆ, ಈ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ 20 ಓವರ್‌ಗಳಲ್ಲಿ…

Read More

ಹಾಸನ:- ಹಾಸನದಲ್ಲಿ ಕಾಡಾನೆ ದಾಳಿಗೆ ಯುವಕ ಬಲಿಯಾಗಿರುವ ಘಟನೆ ಜರುಗಿದೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. https://ainlivenews.com/did-parameshwara-decide-to-leave-the-home-ministry-after-his-visit-to-delhi-what-is-the-real-secret/ ಬೇಲೂರು ತಾಲೂಕಿನ ಬ್ಯಾದನೆ ಗ್ರಾಮದಲ್ಲಿ ಘಟನೆ ಜರುಗಿದೆ. 28 ವರ್ಷದ ಅನಿಲ್ ಮೃತ ಯುವಕ. ಮೃತ ಅನಿಲ್​ ಕೆಲಸ ಮುಗಿಸಿ ಅಣ್ಣಾಮಲೈ ಎಸ್ಟೇಟ್‌ನಿಂದ ಹೋಗುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ. ಸೊಂಡಲಿನಿಂದ ಎತ್ತಿ ಬಿಸಾಕಿ ತುಳಿದು ಸಾಯಿಸಿದೆ. ಸದ್ಯ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮೃತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Read More

ಬೆಂಗಳೂರು :- ರಾಜ್ಯದಲ್ಲಿ ಒಂದು ಕಡೆ ಸಿಎಂ ಬದಲಾವಣೆಯ ಸುದ್ದಿ ಸದ್ದು ಮಾಡುತ್ತಿದೆ.. ಜೊತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಚರ್ಚೆಯೂ ಕಾವೇರಿಸಿದೆ.. ಇದೆಲ್ಲದರ ಮಧ್ಯೆ ತೇಲಿಬಂದ ಗೃಹಸಚಿವ ಜಿ.ಪರಮೇಶ್ವರ್ ರಾಜೀನಾಮೆ ಮಾತು ಇದೀಗ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ. ಪರಮೇಶ್ವರ್ ದಿಢೀರ್ ರಾಜಕೀಯ ಮಾತನ್ನಾಡಿರೋದು ಏಕೆ.. ಏನಿದರ ಅಸಲಿ ಮರ್ಮ.. ಅದನ್ನು ನೋಡೋಣ. https://ainlivenews.com/mahakumbh-mela-reaches-final-stage-along-with-the-specials-there-are-plenty-of-disasters/ ಎಸ್.. ರಾಜ್ಯ ಕಾಂಗ್ರೆಸ್ನಲ್ಲಿ ಪಟ್ಟಕ್ಕಾಗಿ ಫೈಟ್ ನಡೀತಿದೆ.. ಒಂದು ಕಡೆ ಸಿಎಂ ಕುರ್ಚಿ.. ಇನ್ನೊಂದ್ಕಡೆ ಕೆಪಿಸಿಸಿ ಅಧ್ಯಕ್ಷ ಗಾದಿ ಎರಡು ಕುರ್ಚಿಗಳಿಗೋಸ್ಕರ ಭಾರೀ ಲಾಬಿಯೇ ನಡೀತಿದೆ.. ಒಂದು ಕಡೆ ಜಾರಕಿಹೊಳಿ ಟೀಂ ಅಧ್ಯಕ್ಷ ಗಾದಿಗೆ ಸರ್ಕಸ್ ಮಾಡ್ತಿದ್ರೆ, ಇತ್ತ ಕೆಎನ್ ರಾಜಣ್ಣ ಸಹ ಕೆಪಿಸಿಸಿ ಅಧ್ಯಕ್ಷ ಕುರ್ಚಿ ಮೇಲೆ ನಾನು ಇದ್ದೀನಿ ಸ್ವಾಮಿ ಅಂತಾ ಟವಲ್ ಹಾಕಿದ್ದಾರೆ. ಇಷ್ಟು ದಿನದವರೆಗೂ ಸಿಎಂ ಕುರ್ಚಿ ಹತ್ತೋಕೆ ಬಿಗಿಪಟ್ಟು ಹಿಡಿದಿದ್ದ ಡಿಕೆಶಿವಕುಮಾರ್ ಇದೀಗ ವರಸೆ ಬದಲಾಯಿಸಿ, ನನ್ನ ನೇತೃತ್ವದಲ್ಲಿ ಮುಂದಿನ ಚುನಾವಣೆ ಅಂತೀದ್ದಾರೆ.. ಇದೆಲ್ಲಾ ಗೊಂದಲದ ನಡುವೆ ಪರಮೇಶ್ವರ್…

Read More

ಪ್ರಯಾಗ್‌ ರಾಜ್‌ನ ಮಹಾಕುಂಭಮೇಳ ಇದೀಗ ಅಂತಿಮ ಘಟ್ಟ ತಲುಪಿದೆ. ಜ.13ರಂದು ಆರಂಭಗೊಂಡಿರುವ ಮಹಾಕುಂಭವು ಇದೀಗ ಫೆ.26ರಂದು ಅಂತ್ಯಗೊಳಲಿದ್ದು, ಈ ಬಾರಿಯ ಮಹಾಕುಂಭ ಹಲವು ವಿಶೇಷತೆಗಳಿಂದ ಗಮನ ಸೆಳೆದಿದ್ದು ಉಂಟು.. ಹಲವು ಅಪಘಾತಗಳ ಕಾರಣಕ್ಕೆ ಸುದ್ದಿಯಾಗಿದ್ದು ಉಂಟು.. https://ainlivenews.com/hubballi-assault-on-transport-staff-case-appeal-to-igp-for-legal-action/ ಆದರೆ ಈ ಬಾರಿಯ ಕುಂಭಮೇಳ ಕೆಲವರಿಗೆ ಹೊಸ ಹೊಸ ಬ್ಯುಸಿನೆಸ್‌ ಐಡಿಯಾಗಳನ್ನು ಕೊಟ್ಟಿದ್ದಂತೂ ಸುಳ್ಳಲ್ಲ.. ಮಹಾಕುಂಭಮೇಳದಲ್ಲಿ ಚಹಾ ಅಂಗಡಿ ಇಟ್ಕೊಂಡು ದುಡ್ಡು ಮಾಡಿದೋರು ಇದ್ದಾರೆ.. ಹಲ್ಲು ಉಜ್ಜೋಕೆ ಬೇವಿನ ಕಡ್ಡಿ ಮಾರಿ ದಿನಕ್ಕೆ ಸಾವಿರ ಗಟ್ಟಲೇ ಲಾಭ ಗಳಿಸೋದರು ಇದ್ದಾರೆ.. ಈ ಮಧ್ಯೆ ಇಲ್ಲೊಬ್ಬ ವ್ಯಕ್ತಿಯು ಡಿಜಿಟಲಸ್‌ ಸ್ನಾನದ ಮೂಲಕ ಹೊಸ ಬ್ಯುಸಿನೆಸ್‌ ಆರಂಭಿಸಿದ್ದಾನೆ.. ಎಸ್.‌. ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ತ್ರಿವೇಣಿಸಂಗಮದಲ್ಲಿ ಪುಣ್ಯ ಸ್ನಾನ ಮಾಡಬೇಕು ಅನ್ನೋದು ಎಲ್ಲರ ಮಹದಾಸೆ.. ಆದರೆ ಕೆಲವರಿಗೆ ಹಣ ಅಥವಾ ಸಮಯ ಹೀಗೆ.. ಯಾವುದೋ ಕಾರಣಕ್ಕೆ ಅಲ್ಲಿಗೆ ಹೋಗೋದಕ್ಕೆ ಆಗ್ತಿರಲ್ಲ.. ಇದನ್ನೇ ಬಂಡವಾಳವಾಗಿಟ್ಟುಕೊಂಡ ವ್ಯಕ್ತಿಯೊಬ್ಬ ಹೊಸ ಐಡಿಯಾ ಮಾಡಿದ್ದಾನೆ.. ನಿಮ್ಮ ಫೋಟೋವನ್ನು ವಾಟ್ಸಪ್‌ ಮಾಡಿದರೆ ಅದರ ಪ್ರಿಂಟ್‌…

Read More

ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು ಕ್ಷುಲ್ಲಕ ಕಾರಣಗಳಿಗಾಗಿ ಹಲ್ಲೆಗೈದ 63 ಪ್ರಕರಣಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬೆಳಗಾವಿ ಉತ್ತರ ವಲಯ ಐಜಿಪಿ ಚೇತನ್ ಸಿಂಗ್ ರಾಠೋಡ್​​​ ಅವರಿಗೆ ವಾಯುವ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರಿಯಾಂಗ್ ಎಂ ಮನವಿ ಸಲ್ಲಿಸಿದರು. ಸಂಸ್ಥೆಯ ಚಾಲಕ, ನಿರ್ವಾಹಕರು ದೈನಂದಿನ ಕರ್ತವ್ಯ ನಿರ್ವಹಿಸುವಾಗ ಸಾರ್ವಜನಿಕರಿಂದ ದೌರ್ಜನ್ಯಕ್ಕೆ ಒಳಗಾಗಿದ್ದು, 63 ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. https://ainlivenews.com/virat-kohli-is-an-rss-worker-laxmans-clarification-on-the-post-is-as-follows/ ಚಾಲಕರಿಗೆ ದಾರಿ ಬಿಡದಿರುವುದು, ಜೋರಾಗಿ ಹಾರ್ನ್ ಬಳಕೆ ಮಾಡಿರುವುದು, ನಿರ್ವಾಹಕರಿಗೆ ಚಿಲ್ಲರೆ ಕೊಡುವಾಗ ಸಂಬಂಧಿಸಿದ ಅಸಮಾಧಾನ, ನಿಗದಿತ ಸ್ಥಳದಲ್ಲಿ ಇಳಿಸದಿರುವುದು, ಲಗೇಜು ದರ ವಿಚಾರ ಸೇರಿದಂತೆ ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವೆ ವಾಗ್ವಾದ ಉಂಟಾಗಿ ಜಗಳಗಳಾಗಿದ್ದು, ಹಲ್ಲೆಗೂ ತಲುಪಿವೆ. ಕೆಲವೊಮ್ಮೆ ಗಂಭೀರ ಘರ್ಷಣೆಯಾಗಿ ಪೊಲೀಸ್ ಠಾಣೆಯವರೆಗೂ ತಲುಪುತ್ತಿದೆ. ಪೊಲೀಸ್​ ಇಲಾಖೆಯ ವತಿಯಿಂದ ಸಾಕ್ಷ್ಯ ಸಂಗ್ರಹದ ಕೊರತೆಯೋ ಅಥವಾ ಇತರ ಕಾರಣಗಳಿಂದ ಈ ಪ್ರಕರಣಗಳು ‘ಬಿ’…

Read More

ವಿರಾಟ್ ಕೊಹ್ಲಿ ಒಬ್ಬ RSS ಕಾರ್ಯಕರ್ತ ಎಂಬ ತಮ್ಮ ಹೆಸರಿನಲ್ಲಿ ಹಾಕಿದ ಪೋಸ್ಟ್ ಬಗ್ಗೆ ಕಾಂಗ್ರೆಸ್ ಮುಖಂಡ ಲಕ್ಷ್ಮಣ್ ಸ್ಪಷ್ಟನೆ ಕೊಟ್ಟಿದ್ದಾರೆ. https://ainlivenews.com/what-is-the-right-age-to-lose-your-virginity-girls-know-this/ ತಮ್ಮ ಹೆಸರಿನಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಆಕ್ಷೇಪಾರ್ಹ ರೀತಿಯ ಹೇಳಿಕೆಯ ಪೋಸ್ಟ್ ಬಗ್ಗೆ ಸ್ಪಷ್ಟನೆ ನೀಡಿದ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ, ಬಿಜೆಪಿಯವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ. ಈ ರಾಜ್ಯದ ಜನತೆಗೆ ಬರೀ ಸುಳ್ಳನ್ನ ಹೇಳುತ್ತಾ ಬಂದಿದ್ದಾರೆ. ಅದಕ್ಕೆ ಇದೊಂದು ಸಣ್ಣ ಉದಾಹರಣೆ. ನನ್ನ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿಯ ಹೆಸರನ್ನು ಬಳಸಿಕೊಂಡು ಹಿಂದುಗಳ ಭಾವನೆಯನ್ನು ಕೆಣಿಸುವಂತಹ ಪೋಸ್ಟ್‌ಗಳನ್ನು ಹಾಕಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ/ ಸದ್ಯದಲ್ಲೇ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡುವ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು

Read More