ಹುಬ್ಬಳ್ಳಿ:- ಶ್ರೀಕಾಂತ ಪೂಜಾರಿಯನ್ನು ಅರೆಸ್ಟ್ ಮಾಡಲು ಯಾವ ದಾಖಲೆ ಇರಲಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಮಜನ್ಮಭೂಮಿ ಹೋರಾಟದ ಕೇಸ್ನಲ್ಲಿ ಆರೋಪಿಯಾಗಿರುವ ಕರಸೇವಕ ಶ್ರೀಕಾಂತ ಪೂಜಾರಿಯನ್ನು ಅರೆಸ್ಟ್ ಮಾಡಲು ಯಾವ ದಾಖಲೆ ಇರಲಿಲ್ಲ. ಹೀಗಾಗಿ ಕೋರ್ಟ್ ಬಿಡುಗಡೆ ಮಾಡಿದೆ. ನಾವು ಪ್ರತಿಭಟನೆ ಮಾಡದೇ ಹೋಗಿದ್ದರೆ ಇನ್ನು ಅನೇಕ ಹಿಂದೂ ಕಾರ್ಯಕರ್ತರನ್ನು ಬಂಧಿಸುತ್ತಿದ್ದರು ಎಂದರು. ಶ್ರೀಕಾಂತ್ ಪೂಜಾರಿ ವಿರುದ್ದ ಅಸಭ್ಯವಾಗಿ ಮಾತಾಡಿರುವುದಕ್ಕೆ ನೀವು ರಾಜ್ಯಕ್ಕೆ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ. ಈ ಕೇಸ್ನ ಎಫ್ಐಆರ್ ಕಾಪಿ ಕೂಡ ಇಲ್ಲ ಎಂದು ಹೇಳಿದ್ದಾರೆ. ಬಿಜೆಪಿ ಕಾಲದಲ್ಲಿ ರಾಮ ಮಂದಿರ ಆಗುತ್ತಿದೆ ಎಂಬ ಕಾರಣಕ್ಕೆ ಹೊಟ್ಟೆ ಕಿಚ್ಚಿನಿಂದ ಅರೆಸ್ಟ್ ಮಾಡಿದ್ದಾರೆ. ಹಿಂದೂ ದ್ವೇಷದಿಂದ ಅರೆಸ್ಟ್ ಮಾಡಿದ್ದೀರಿ ತಾನೆ ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಕಾನೂನು ರೀತಿ ನಡೆದುಕೊಂಡಿದ್ದೇವೆ ಎಂದಿತ್ತು. ನಾವು ಹಿಂದೂ ವಿರೋಧಿ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದರು. ನಾನು ಸಿದ್ದರಾಮಯ್ಯ…
Author: AIN Author
ಬೆಂಗಳೂರು:-ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ಆರೋಪಿಗಳು ಜನವರಿ 3ರಂದು ಮುಂಬೈನ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಕಚೇರಿಗೆ ಕರೆ ಮಾಡಿ, ಬೆಂಗಳೂರಿನ ಕಚೇರಿಯಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿದ್ದಾರೆ. ಕೂಡಲೇ ಮುಂಬೈನ ಎನ್ಎಸ್ಇ ಕಚೇರಿ ಅಧಿಕಾರಿಗಳು ಮಧ್ಯರಾತ್ರಿ ಒಂದು ಗಂಟೆಗೆ ಸುಮಾರಿಗೆ ವಿಧಾನಸೌಧ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಪೊಲೀಸರು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಯಾವುದೇ ಸ್ಪೋಟಕವಸ್ತು ಪತ್ತೆಯಾಗಿಲ್ಲ. ಸದ್ಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬರದ ನಡುವೆ ಬಹುನಿರೀಕ್ಷೆಯಲ್ಲಿ ಸಾಹಸಪಟ್ಟು ಜಿಲ್ಲೆಯ 30ರಿಂದ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆದಿದ್ದು, ಶೇ.30 ರಿಂದ ಶೇ.40 ರಷ್ಟು ಪ್ರಮಾಣದ ಭತ್ತ ಕೊಯ್ಲುಬಾಕಿ ಇದೆ. ಸಕಲೇಶಪುರ, ಆಲೂರು ತಾಲೂಕಿನಲ್ಲಿ ಹೆಚ್ಚು ಹಾಗೂ ಬೇಲೂರು ತಾಲೂಕಿನ ಅರೇಹಳ್ಳಿ ಭಾಗ ಮತ್ತು ಹೊಳೆನರಸೀಪುರ, ಅರಕಲಗೂಡು ತಾಲೂಕಿನಲ್ಲಿ ನೀರಾವರಿ ಸೌಲಭ್ಯ ಹೊಂದಿದವರು ಮಾತ್ರ ಭತ್ತ ಬೆಳೆದಿದ್ದಾರೆ. ಉತ್ತಮ ಬೆಳೆಗೆ ನಿರೀಕ್ಷೆ ಮೀರಿದ ಬೆಲೆ ಸಿಗಲಿದೆ ಎಂಬ ಸಂತಸದಲ್ಲಿದ್ದ ರೈತರಿಗೆ ಗುರುವಾರ ಮುಂಜಾನೆಯಿಂದ ಸಂಜೆವರೆಗೆ ದಿನವಿಡೀ ಸುರಿದ ತುಂತುರು ಮಳೆ ನಿರಾಸೆ ಮೂಡಿಸಿದೆ. ಬೆಳೆದು ನಿಂತಿದ್ದ ಭತ್ತ ಕೊಯ್ಲು ಮಾಡಲು ಹೊರಟಿದ್ದವರನ್ನು ಮಳೆ ಕಂಗೆಡಿಸಿದೆ. ಗದ್ದೆಯಲ್ಲಿ ನೀರು ನಿಂತಿದ್ದು, ತೀವ್ರ ತಂಡಿಗಾಳಿ ವಾತಾವರಣ ಸೃಷ್ಟಿಯಾಗಿ ಭತ್ತ ತೋಯುತ್ತಿದೆ. ಒಂದೆರಡು ದಿನ ಮಳೆ ಮುಂದುವರಿದದ್ದೇ ಆದರೆ ಭತ್ತ ಉದುರಿ ನೆಲಕಚ್ಚುವುದು ನಿಶ್ಚಿತ ಗದ್ದೆಯಲ್ಲಿ ನೀರು ನಿಂತಿದ್ದು, ಭತ್ತ ತೋಯ್ದಿದೆ. ಹೀಗಾಗಿ ಯಂತ್ರದ ಮೂಲಕ ಭತ್ತ ಕೊಯ್ಲು ಮಾಡಲು ಆಗಲ್ಲ. ಹೀಗೆ ಮಳೆ ಮುಂದುವರೆದರೆ ಉದುರಿ ಹೋಗುತ್ತದೆ…
ನೀವು ಹೊಸ ಸಿಮ್ ಕಾರ್ಡ್ (Sim Card) ಖರೀದಿ ಮಾಡುತ್ತೀರಾ? ಹಾಗಾದ್ರೆ ಇನ್ಮುಂದೆ ಕೆಲ ಕಠಿಣ ನಿಯಮಗಳನ್ನು ಪಾಲಿಸಬೇಕು. ಗ್ರಾಹಕರು ಮಾತ್ರವಲ್ಲ ಸಿಮ್ ವಿತರಿಸುವ ಡೀಲರ್ಗಳು ಸಹ ಕಠಿಣ ನಿಯಮಗಳನ್ನು ಪಾಲಿಸಲೇಬೇಕು. ನಿಯಮ ಪಾಲಿಸದೇ ಉಲ್ಲಂಘನೆ ಮಾಡಿದರೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಗಂಭೀರ ಪ್ರಕರಣವಾದಲ್ಲಿ ಜೈಲು (Jail) ಶಿಕ್ಷೆಯನ್ನು ವಿಧಿಸಲಾಗುತ್ತದೆ. ಬಹುತೇಕ ಸೈಬರ್ ಅಪರಾಧಗಳು ಮತ್ತು ದೇಶವಿರೋಧಿ ಕೃತ್ಯಗಳನ್ನು ಸುಳ್ಳು ದಾಖಲೆಗಳೊಂದಿಗೆ ಜೋಡಿಸಲಾದ ಮೊಬೈಲ್ ಸಂಖ್ಯೆಗಳನ್ನು (Mobile Sim) ಬಳಸುತ್ತಿರುವ ಹಿನ್ನೆಲೆಯಲ್ಲಿ ಇವುಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಈಗ ಕಠಿಣ ಕ್ರಮ ಕೈಗೊಂಡಿದೆ. ಹೊಸ ನಿಯಮಗಳು ಏನು? ವ್ಯಾಪಾರಸ್ಥರು/ ಕಂಪನಿಗಳಿಗೆ ಮಾತ್ರ ಸಿಮ್ ಕಾರ್ಡ್ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಲು ಅನುಮತಿ ನೀಡಲಾಗಿದೆ. ಸಾಮಾನ್ಯ ಬಳಕೆದಾರರು ಒಂದು ಗುರುತಿನಿಂದ ಗರಿಷ್ಠ 9 ಸಿಮ್ಗಳನ್ನು ಮಾತ್ರ ಪಡೆಯಬಹುದು ಸಿಮ್ ಕಾರ್ಡ್ ರದ್ದು/ ನಿಷ್ಕ್ರಿಯಗೊಳಿಸಿದ 90 ದಿನಗಳ ನಂತರ ಆ ಸಂಖ್ಯೆಯನ್ನು ಬೇರೆ ಗ್ರಾಹಕರಿಗೆ ನೀಡಲಾಗುತ್ತದೆ. ಸಿಮ್ ಕಾರ್ಡ್ಗಳನ್ನು ಖರೀದಿಸುವ ಗ್ರಾಹಕರು…
Moto G34 5G ಭಾರತದ ಬಿಡುಗಡೆಯು ಜನವರಿ 9 ರಂದು ನಡೆಯಲಿದೆ. Motorola, ಅದರ ಅಧಿಕೃತ ವೆಬ್ಸೈಟ್ ಮತ್ತು ಫ್ಲಿಪ್ಕಾರ್ಟ್ನಲ್ಲಿ ಮೀಸಲಾದ ಮೈಕ್ರೋಸೈಟ್ ಮೂಲಕ, ಹೊಸ G ಸರಣಿಯ ಸ್ಮಾರ್ಟ್ಫೋನ್ನ ವಿಶೇಷಣಗಳನ್ನು ಲೇವಡಿ ಮಾಡುತ್ತಿದೆ. Moto G34 5G ಯ ಭಾರತೀಯ ರೂಪಾಂತರದ ಬಣ್ಣ ಆಯ್ಕೆಗಳನ್ನು ಈಗ ಬಹಿರಂಗಪಡಿಸಲಾಗಿದೆ. ಹ್ಯಾಂಡ್ಸೆಟ್ 50-ಮೆಗಾಪಿಕ್ಸೆಲ್ ಕ್ವಾಡ್ ಪಿಕ್ಸೆಲ್ ಕ್ಯಾಮೆರಾ ಸೇರಿದಂತೆ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕವನ್ನು ಹೊಂದಿದೆ ಎಂದು ದೃಢಪಡಿಸಲಾಗಿದೆ. ಇದು ಸ್ನಾಪ್ಡ್ರಾಗನ್ 695 SoC ನಲ್ಲಿ ರನ್ ಆಗುತ್ತದೆ, ಜೊತೆಗೆ 8GB RAM ಮತ್ತು 128GB ಆನ್ಬೋರ್ಡ್ ಸ್ಟೋರೇಜ್. Moto G34 5G ಅನ್ನು ಕಳೆದ ವರ್ಷ ಡಿಸೆಂಬರ್ನಲ್ಲಿ ಚೀನಾದ ಮಾರುಕಟ್ಟೆಯಲ್ಲಿ ಪರಿಚಯಿಸಲಾಯಿತು. Moto G34 5G ನ ಛಾಯೆಗಳನ್ನು ಬಹಿರಂಗಪಡಿಸಲು Lenovo-ಮಾಲೀಕತ್ವದ ಬ್ರ್ಯಾಂಡ್ X (ಹಿಂದೆ Twitter) ನಲ್ಲಿ ಕಿರು ಟೀಸರ್ ವೀಡಿಯೊವನ್ನು ಹಂಚಿಕೊಂಡಿದೆ. ಇದು ಮೂರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ ಎಂದು ದೃಢಪಡಿಸಲಾಗಿದೆ – ಚಾರ್ಕೋಲ್ ಬ್ಲ್ಯಾಕ್, ಐಸ್ ಬ್ಲೂ…
ಅವರೆಕಾಳಿನಲ್ಲಿ ಹಲವು ವಿಟಮಿನ್ಗಳಿವೆ. ಅಲ್ಲದೇ ಖನಿಜಾಂಶಗಳು, ಪ್ರೋಟೀನ್ ಮತ್ತು ನಾರಿನಾಂಶವು ಇದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಅವರೆಕಾಳು ವಿಟಮಿನ್ ಬಿಯಿಂದ ಸಮೃದ್ಧವಾಗಿದ್ದು, ಇದು ದೇಹದ ಅಂಗಾಂಶಗಳಿಗೆ ಬೇಕಾಗಿರುವಂತಹ ಶಕ್ತಿ ನೀಡುತ್ತದೆ.ಅವರೆ ಕಾಳು ದೇಹಕ್ಕೆ ಅಗತ್ಯವಿರುವಂತಹ ಶಕ್ತಿ ಒದಗಿಸುವುದರೊಂದಿಗೆ ಮೆದುಳು ಮತ್ತು ನರಕೋಶಗಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಹಕಾರಿ ಆಗಿವೆ. ನಿದ್ರಾಹೀನತೆ ತಗ್ಗಿಸಲು ಸಹಕಾರಿ ಅವರೆಕಾಳನ್ನು ಸೇವಿಸುವುದರಿಂದ ಅಥವಾ ಆಹಾರದಲ್ಲಿ ಬಳಸುವುದರಿಂದ ಹಲವು ಉಪಯೋಗಗಳಿವೆ. ಅವುಗಳಲ್ಲಿ ನಿದ್ರಾಹೀನತೆ ತಗ್ಗಿಸುವುದು ಸಹ ಒಂದಾಗಿದೆ. ಅವರೆಕಾಳನ್ನು ಸೇವನೆ ಮಾಡುವುದರಿಂದಾಗಿ ಇದರಲ್ಲಿ ಇರುವ ಪೋಷಕಾಂಶಗಳು ಮೆದುಳಿಗೆ ಒಳ್ಳೆಯದು. ಅವರೆಕಾಳಿನಲ್ಲಿರುವ ಮೆಗ್ನಿಶಿಯಂ ಅಂಶವು ಮನಸ್ಥಿತಿ ಸುಧಾರಣೆ ಮಾಡುವುದು. ಮೆಗ್ನಿಶಿಯಂ ನಿದ್ರಾಹೀನತೆಯನ್ನು ತಗ್ಗಿಸುವುದು. ಇದನ್ನು ಸೇವನೆ ಮಾಡಿದರೆ ಅದರಿಂದ ರಾತ್ರಿ ವೇಳೆ ಒಳ್ಳೆಯ ನಿದ್ರೆ ಬರುತ್ತದೆ ಎನ್ನುವುದು ವರದಿಗಳಲ್ಲಿ ಸಾಬೀತಾಗಿದೆ. ರಕ್ತದೊತ್ತಡ ತಗ್ಗಿಸಲು ಅನುಕೂಲಕರ ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರಿಗೆ ಅವರೆ ಕಾಳು ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುವುದು. ಇದರಲ್ಲಿ ಉತ್ತಮ ಪ್ರಮಾಣದ ಪೊಟಾಶಿಯಂ ಅಂಶವಿದ್ದು,…
2023ರ ವರ್ಷದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನ ತೋರಿದ ಆಟಗಾರರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪಟ್ಟಿಯಲ್ಲಿ ನಾಲ್ವರು ಆಟಗಾರರು ಅವಕಾಶ ಪಡೆದಿದ್ದು, ಟೀಮ್ ಇಂಡಿಯಾದ ಮಿಸ್ಟರ್ 360 ಡಿಗ್ರಿ ಆಟಗಾರ ಸೂರ್ಯಕುಮಾರ್ ಯಾದವ್ ಅವರು ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ ಎನಿಸಿಕೊಂಡಿದ್ದಾರೆ. ಸಿಕಂದರ್ ರಾಜಾ 2023ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಆಫ್ರಿಕಾ ಪ್ರಾಂತ್ಯದ ಅರ್ಹತಾ ಸುತ್ತಿನ ಪಟ್ಟಿಯಲ್ಲಿ ನಮೀಬಿಯಾ ಮತ್ತು ಉಗಾಂಡ ಬಳಿಕ ಮೂರನೇ ಸ್ಥಾನ ಪಡೆಯುವ ಮೂಲಕ ಜಿಂಬಾಬ್ವೆ ತಂಡ, 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಆದರೆ, ಕಳೆದ ಸಿಕಂದರ್ ರಾಜಾ ಅವರು ಟಿ20 ಸ್ವರೂಪದಲ್ಲಿ ಅತ್ಯುತ್ತಮ ಆಲ್ರೌಂಡರ್ ಪ್ರದರ್ಶನವನ್ನು ತೋರಿದ್ದಾರೆ. ಆಲ್ಪೇಶ್ ರಾಮಾಂಜಿ 2023ರ ಐಸಿಸಿ ಪುರುಷರ ಟಿ20 ವಿಶ್ವಕಪ್ ಆಫ್ರಿಕಾ ಪ್ರಾಂತ್ಯದಿಂದ ಎರಡನೇ ಸ್ಥಾನ ಪಡೆಯುವ ಮೂಲಕ ಉಗಾಂಡ ತಂಡ ಇತಿಹಾಸ ಬರೆದಿತ್ತು. ಉಗಾಂಡ ತಂಡದ ಈ ಸಾಧನೆಯಲ್ಲಿ ಆಲ್ಪೇಶ್ ರಾಮಾಂಜಿ ಅವರ ಪಾತ್ರ ಪ್ರಮುಖ ಪಾತ್ರವಹಿಸಿತ್ತು…
ನ್ಯಾಷನಲ್ ಸ್ಟಾರ್ ಯಶ್ ಅವರ 19ನೇ ಸಿನಿಮಾ ಯಾವುದು ಎಂಬುದಕ್ಕೆ ಈಗಾಗಲೇ ಉತ್ತರ ಸಿಕ್ಕಿದೆ. ‘ಕೆಜಿಎಫ್ 2’ ಸಕ್ಸಸ್ ಬಳಿಕ ‘ಟಾಕ್ಸಿಕ್’ (Toxic) ಚಿತ್ರಕ್ಕೆ ಯಶ್ (Yash) ಕೈಹಾಕಿದ್ದಾರೆ. ಈಗ ಚಿತ್ರದ ನಾಯಕಿ ಬಗ್ಗೆ ಚರ್ಚೆ ಶುರುವಾಗಿದೆ. ಯಶ್ ಸಿನಿಮಾದಲ್ಲಿ ಕರೀನಾ ಕಪೂರ್ (Kareena Kapoor) ಕನ್ನಡಕ್ಕೆ ಬರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಇದೇ ತಿಂಗಳು ಜನವರಿ 8ಕ್ಕೆ ಯಶ್ ಹುಟ್ಟುಹಬ್ಬವಿದೆ. ಅದೇ ದಿನ ‘ಟಾಕ್ಸಿಕ್’ ಚಿತ್ರದ ಟೀಸರ್ ರಿಲೀಸ್ ಮಾಡುವ ಬಗ್ಗೆ ಟಾಕ್ ಇದೆ. ಇದರ ಜೊತೆಗೆ ಈ ಚಿತ್ರಕ್ಕೆ ಬಾಲಿವುಡ್ ನಟಿಗೆ ಚಿತ್ರತಂಡ ಮಣೆ ಹಾಕುತ್ತಿದ್ದಾರೆ. ಸಂದರ್ಶನವೊಂದರಲ್ಲಿ ನಾನು ‘ಕೆಜಿಎಫ್’ (KGF) ಗರ್ಲ್ ಎಂದು ಯಶ್ ಬಗ್ಗೆ ಹಾಡಿಹೊಗಳಿದ್ದ ನಟಿ ಕರೀನಾ ಕಪೂರ್, ಈ ಹೇಳಿಕೆ ನೀಡಿದ ಒಂದೇ ತಿಂಗಳಲ್ಲೇ ಗುಡ್ ನ್ಯೂಸ್ ಸಿಕ್ಕಿದೆ. ಯಶ್ ಸಿನಿಮಾಗೆ ಕರೀನಾ ಕಪೂರ್ ಸಾಥ್ ನೀಡೋದು ಖಚಿತ ಎಂಬ ಸುದ್ದಿ ಇದೆ.
ಈ ಬಾಲಿವುಡ್ ನಟಿಯರು ಮದುವೆಯಾಗುವ ಮೊದಲು ಹೊಟ್ಟೆಯಲ್ಲಿ ಮಕ್ಕಳನ್ನು ಹೊಂದಿದ್ದರು ಮತ್ತು ನಂತರ ಹಗರಣವನ್ನು ತಪ್ಪಿಸಲು ಈ ನಟಿಯರು ಮದುವೆಯಾದರು. ಮೊದಲಿಗೆ, ಯಾರೋ ಮೂರು ತಿಂಗಳ, ಐದು ತಿಂಗಳ ಮತ್ತು ಏಳು ತಿಂಗಳ ಮಗುವನ್ನು ಹೊಂದಿದ್ದರು. ಮತ್ತು ಅವರಲ್ಲಿ ಒಬ್ಬರು ಮದುವೆಗೆ ಮೊದಲು ಇಬ್ಬರು ಮಕ್ಕಳನ್ನು ಹೊಂದಿದ್ದ ನಟಿಯರು ಅಂತೆಲ್ಲಾ ನೋಡೋಣ! ಆಲಿಯಾ ಭಟ್. ಆಲಿಯಾ ಭಟ್ ಬಾಲಿವುಡ್ ಚಿತ್ರರಂಗದ ಅತ್ಯುತ್ತಮ ಯುವ ನಟಿಯರಲ್ಲಿ ಒಬ್ಬರು. ಹಿಂದೆ, ಅವರು ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಡೇಟಿಂಗ್ ಮಾಡುತ್ತಿದ್ದರು ಮತ್ತು ನಂತರ, ಅವರು ರಣಬೀರ್ ಕಪೂರ್ ಜೊತೆ ಸಂಬಂಧವನ್ನು ಪ್ರಾರಂಭಿಸಿದರು. ಬಾಲಿವುಡ್ ಚಿತ್ರರಂಗದ ಬಹುತೇಕ ಎಲ್ಲ ನಾಯಕಿಯರನ್ನೂ ಟೈಮ್ ಟ್ರೈ ಮಾಡಿದೆ. ಇಬ್ಬರೂ ದೀರ್ಘಕಾಲ ಡೇಟಿಂಗ್ ಮಾಡಿದರು ಮತ್ತು ಪರಸ್ಪರ ಸಮಯ ಕಳೆದರು ಮತ್ತು ಅವರು 14ನೇ ಏಪ್ರಿಲ್ 2022 ರಂದು ವಿವಾಹವಾದರು. ಅದೇ ವರ್ಷದ ನವೆಂಬರ್ನಲ್ಲಿ, ಅವರ ಮದುವೆಯಾದ ಆರು ತಿಂಗಳ ನಂತರ. ನಂತರ ಇಬ್ಬರೂ ನಟರು ಮಗಳ ಪೋಷಕರಾದರು. ಮದುವೆಗೂ ಮುನ್ನವೇ…
ಗರ್ಭಾಶಯದ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾದ ಸ್ತ್ರೀರೋಗ ಶಾಸ್ತ್ರದ ಕ್ಯಾನ್ಸರ್ಗಳಲ್ಲಿ ಒಂದಾಗಿದೆ. ಕಳೆದ ಎರಡು ದಶಕಗಳಲ್ಲಿ US ನಲ್ಲಿ ಮರಣ ಮತ್ತು ಘಟನೆಗಳ ದರದಲ್ಲಿ ಹೆಚ್ಚಳ ಕಂಡುಬಂದಿದೆ, ಇದರ ಪರಿಣಾಮವಾಗಿ 65,950 ಕ್ಕೂ ಹೆಚ್ಚು ಹೊಸ ಪ್ರಕರಣಗಳು ಮತ್ತು 12,550 ಸಾವುಗಳು 2022 ರಲ್ಲಿ ನಿರೀಕ್ಷಿಸಲಾಗಿದೆ. ಈಸ್ಟ್ರೊಜೆನ್ಗೆ ಹೆಚ್ಚಿನ ಮಾನ್ಯತೆ ಮತ್ತು ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್ನ ಹಾರ್ಮೋನುಗಳ ಅಸಮತೋಲನವು ವರದಿಯಾಗಿದೆ ಗರ್ಭಾಶಯದ ಕ್ಯಾನ್ಸರ್ಗೆ ಗಮನಾರ್ಹ ಅಪಾಯಕಾರಿ ಅಂಶಗಳು. ಆದ್ದರಿಂದ, ಎಂಡೋಕ್ರೈನ್-ಡಿಸ್ರಪ್ಟಿಂಗ್ ಕೆಮಿಕಲ್ಸ್ (EDCs) ನಂತಹ ಸಂಶ್ಲೇಷಿತ ಈಸ್ಟ್ರೊಜೆನಿಕ್ ಸಂಯುಕ್ತಗಳು ಗರ್ಭಾಶಯದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಲು ಸೂಚಿಸಲಾಗಿದೆ ಏಕೆಂದರೆ ಅವು ಹಾರ್ಮೋನುಗಳ ಕ್ರಿಯೆಗಳನ್ನು ಬದಲಾಯಿಸಬಹುದು. ಕೂದಲಿನ ಉತ್ಪನ್ನಗಳಲ್ಲಿ ವಿವಿಧ EDC ಗಳ ಬಳಕೆಯು ಅಂಡಾಶಯ ಮತ್ತು ಸ್ತನ ಕ್ಯಾನ್ಸರ್ನಂತಹ ಹಾರ್ಮೋನ್-ಸೂಕ್ಷ್ಮ ಕ್ಯಾನ್ಸರ್ಗಳಿಗೆ ಸಂಬಂಧಿಸಿದೆ. ಇದರ ಜೊತೆಯಲ್ಲಿ, ಕೂದಲಿನ ಉತ್ಪನ್ನಗಳ ಘಟಕಗಳಾದ ಫಾರ್ಮಾಲ್ಡಿಹೈಡ್-ಬಿಡುಗಡೆ ಮಾಡುವ ರಾಸಾಯನಿಕಗಳು ಮತ್ತು ಕೂದಲು ಸ್ಟ್ರೈಟ್ನರ್ಗಳಲ್ಲಿನ ಫಾರ್ಮಾಲ್ಡಿಹೈಡ್, ಹಾಗೆಯೇ 4-ಅಮಿನೋಫೆನಿಲ್ ಮತ್ತು ಫೆನೈಲೆನೆಡಿಯಮೈನ್ ಕೂಡ ಕ್ಯಾನ್ಸರ್ ಬೆಳವಣಿಗೆಗೆ ಕೊಡುಗೆ ನೀಡಬಹುದು. ಯುನೈಟೆಡ್…