Author: AIN Author

ಬೆಂಗಳೂರು: ಮೆಟ್ರೋ ರೈಲು ಮುಂದೆ ಹಾರಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಮೆಟ್ರೋ ರೈಲು ಹಳಿಗೆ ಧುಮುಕಿದ ಯುವಕನ ಗುರುತು ಪತ್ತೆಯಾಗಿದೆ. ಕೇರಳ ಮೂಲದ 23 ವರ್ಷದ ಶಾರೋನ್‌ ರಾತ್ರಿ 7.12ರ ವೇಳೆಗೆ ರೈಲು ಬಂದಾಗ ಉದ್ದೇಶಪೂರ್ವಕವಾಗಿಯೇ ರೈಲು ಹಳಿಗೆ ಹಾರಿದ್ದಾನೆ ಎನ್ನಲಾಗಿದೆ. ಏನಾಯ್ತು..?: ಕೇರಳ (Kerala) ಮೂಲದ ಯುವಕ ಶಾರೋನ್‌ ಸ್ನೇಹಿತನ ಜೊತೆ ಜಾಲಹಳ್ಳಿ ಮೆಟ್ರೋ ನಿಲ್ದಾಣಕ್ಕೆ (Jalahalli Metro Station) ಬಂದಿದ್ದ. ಮೆಜೆಸ್ಟಿಕ್ ಗೆ ಹೋಗಲು ಟಿಕೆಟ್ ಸಹ ಪಡೆದುಕೊಂಡಿದ್ದ. ಆದರೆ ಮೆಟ್ರೋ ಟ್ರೈನ್ ಬಂದಾಗ ಏಕಾಏಕಿ ಹಳಿಗೆ ಧುಮುಕಿದ್ದಾನೆ, ಈ ವೇಳೆ ಮೆಟ್ರೊ ಟ್ರೈನ್ ಶಾರೋನ್‌ಗೆ ಡಿಕ್ಕಿ ಹೊಡೆದಿದೆ. ಸ್ನೇಹಿತನ ಜೊತೆ ಬಂದು ಉದ್ದೇಶಪೂರ್ವಕವಾಗಿ ಹಳಿಗೆ ಧುಮುಕಿದ ಯುವಕನ ಸ್ಥಿತಿ ಗಂಭೀರವಾಗಿದೆ. ಘಟನೆ ನಡೆದ ತಕ್ಷಣ ಯುವಕನನ್ನು ಮೆಟ್ರೋ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಸಪ್ತಗಿರಿ ಆಸ್ಪತ್ರೆಯ ಐಸಿಯುವಿನಲ್ಲಿ ಯುವಕ ಶಾರೋನ್‍ಗೆ ಚಿಕಿತ್ಸೆ ನೀಡುತ್ತಿದ್ದಾರೆ. ರೈಲು ಡಿಕ್ಕಿಯಾದ ಹಿನ್ನೆಲೆಯಲ್ಲಿ ಯುವಕನ ಕಾಲು ಫ್ರ್ಯಾಕ್ಚರ್…

Read More

ಇತ್ತೀಚೆಗಷ್ಟೇ ಕಿರುತೆರೆ ಲೋಕಕ್ಕೆ ಸೇರ್ಪಡೆಯಾಗಿರುವ ‘ಆಸೆ’ (Ase Serial) ಧಾರಾವಾಹಿಯು ತನ್ನ ವಿನೂತನ ಕಥಾ ಹಂದರದಿಂದ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೊಂದು ಸಾಮಾನ್ಯ ಜನರ ಅಸಮಾನ್ಯ ಕಥೆಯಾಗಿದೆ. ಚಂದನವನದ ಖ್ಯಾತ ನಟ ರಮೇಶ್ ಅರವಿಂದ್ (Ramesh Aravind) ರವರು ತುಂಬಾ ಇಷ್ಟ ಪಡುತ್ತಿರುವ ಕಥೆ ಇದಾಗಿದ್ದು, ಆಸೆ ಸೀರಿಯಲ್‌ ತಂಡಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಸೆ’ ಎಂಬ ಹೊಸ ಸೀರಿಯಲ್ ಸದ್ಯ ಕಿರುತೆರೆ ಲೋಕದಲ್ಲಿ ಮೋಡಿ ಮಾಡುತ್ತಿದೆ. ಹೀರೋ ಸೂರ್ಯ ಪಾತ್ರದಲ್ಲಿ ‘ನಾಗಿಣಿ 2’ ಖ್ಯಾತಿಯ ನಿನಾದ್ ಹರಿತ್ಸ (Ninaad Harithsa) ಜೀವತುಂಬಿದ್ದಾರೆ. ನಾಯಕಿ ಮೀನಾ ಪಾತ್ರದಲ್ಲಿ ‘ಪುಣ್ಯವತಿ’ ಖ್ಯಾತಿಯ ಪ್ರಿಯಾಂಕಾ (Priyanka) ನಟಿಸಿದ್ದಾರೆ. ಸಾಮಾನ್ಯವಾಗಿ ಬಡಕುಟುಂಬದಲ್ಲಿ ನಡೆಯುವಂತಹ ಕಷ್ಟ, ನೋವು, ಸಂಕಟ, ಆಸೆ ಎಲ್ಲವನ್ನು ಮನಮುಟ್ಟುವಂತೆ ಈ ಧಾರಾವಾಹಿಯಲ್ಲಿ ಹೇಳಲಾಗಿದೆ. ಸುಂದರ ತಾರಾ ಬಳಗವನ್ನು ಹೊಂದಿರುವ ಈ ಸೀರಿಯಲ್‌ನಲ್ಲಿ ಕಲಾವಿದರಂತೂ ಅತ್ಯದ್ಭುತವಾಗಿ ನಟಿಸುತ್ತಿದ್ದಾರೆ. ಪ್ರತಿಯೊಂದು ಪಾತ್ರವು ಅದರದ್ದೇ ಆದ ತೂಕ ಹೊಂದಿದೆ. ತಂದೆ ಪಾತ್ರದಲ್ಲಿ ನಟ ಮಂಡ್ಯ ರಮೇಶ್ ಕಾಣಿಸಿಕೊಂಡಿದ್ದಾರೆ. ‘ಆಸೆ’…

Read More

ಕನ್ನಡದಲ್ಲಿ ಮಾತ್ರವಲ್ಲ, ತಮಿಳಿನಲ್ಲೂ ಶಿವರಾಜ್ ಕುಮಾರ್ (Shivaraj Kumar) ಮಿಂಚುತ್ತಿದ್ದಾರೆ. ಈಗಾಗಲೇ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ಅಬ್ಬರಿಸಿದ್ದ ಶಿವಣ್ಣ, ಇದೀಗ ಧನುಷ್ ಜೊತೆಗೆ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಹಾಡು ಬಿಡುಗಡೆ ಸಮಾರಂಭ ಚೆನ್ನೈನಲ್ಲಿ (Chennai) ನಡೆದಿದೆ. ಈ ಸಮಾರಂಭದಲ್ಲಿ ಶಿವರಾಜ್ ಕುಮಾರ್ ಅವರನ್ನು ಹಾಡಿಹೊಗಳಿದ್ದಾರೆ ಧನುಷ್. ತಂದೆಯ ಹೆಸರು ಉಳಿಸಲು ನಿಮ್ಮನ್ನು ನಾವು ಮಾದರಿಯಾಗಿ ಇಟ್ಟುಕೊಳ್ಳಬೇಕು ಎಂದಿದ್ದಾರೆ. ಧನುಷ್ (Dhanush) ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟನೆಯ ಕ್ಯಾಪ್ಟನ್ ಮಿಲ್ಲರ್ (Captain Miller) ಸಿನಿಮಾ ಫಸ್ಟ್ ಲುಕ್ ಹಾಗೂ ಟೀಸರ್ ಮೂಲಕ ಬಹಳ ಸದ್ದು ಮಾಡ್ತಿದೆ. ರಜನಿಕಾಂತ್ ಜೈಲರ್ ನಲ್ಲಿ ನರಸಿಂಹ ಆಗಿ ದರ್ಶನ ಕೊಟ್ಟು ಕ್ರೇಜ್ ಕ್ರಿಯೇಟ್ ಮಾಡಿದ್ದ ಟಗರು ಶಿವನ ಹೊಸ ಅವತಾರ ನೋಡೋದಿಕ್ಕೆ ಫ್ಯಾನ್ಸ್ ಕಾತುರರಾಗಿದ್ದಾರೆ. ಇತ್ತ ಧನುಷ್ 49ನೇ ಚಿತ್ರ ಇದಾಗಿದ್ದು, ಹೀಗಾಗಿ ಸಹಜವಾಗಿ ನಿರೀಕ್ಷೆ ಹೆಚ್ಚಿದೆ. ಸದ್ಯ ಕ್ಯಾಪ್ಟನ್ ಮಿಲ್ಲರ್ ಬಿಡುಗಡೆಗೆ ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಚಿತ್ರತಂಡ…

Read More

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್. ಹೈಜೆನಿಕ್, ನೀಟ್ನೆಸ್ ಇರುತ್ತೆ ಅಂತಲೇ ಸಾಕಷ್ಟು ಮಂದಿ ಅಲ್ಲಿ ಊಟಕ್ಕೆ ಹೋಗ್ತಾರೆ. ಆದ್ರೆ ಇಂತ ಹೋಟೆಲ್ನ ಊಟದಲ್ಲಿ ಜಿರಳೆ ಸಿಕ್ಕಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಅಷ್ಟಕ್ಕೂ ಅಲ್ಲಾಗಿದ್ದೇನು ಅಂತ ಹೇಳ್ತೀವಿ ನೋಡಿ. ರಾಜಧಾನಿಯಲ್ಲಿ ಮನೆ ಊಟಕ್ಕಿಂತ ಹೋಟೆಲ್ ಊಟ ನೆಚ್ಚಿಕೊಂಡವರೇ ಹೆಚ್ಚು. ಅದರಲ್ಲೂ ಆರೋಗ್ಯದ ದೃಷ್ಠಿಯಿಂದ ಶುಚಿಯಾಗಿ ಅಡುಗೆ ಮಾಡೋ ಹೋಟೆಲ್ಗಳ ಕಡೆಯೇ ಜನರು ಹೆಚ್ಚಾಗಿ ಹೋಗ್ತಾರೆ.ಆದ್ರೆ ಇಂತ ಹೈಜೆನಿಕ್, ನೀಟ್ನೆಸ್ ಇದೆ ಅನ್ಕೊಂಡು ಹೈಕೋರ್ಟ್ ವಕೀಲೆಯೊಬ್ಬರು ಪ್ರತಿಷ್ಠಿತ ಹೋಟೆಲ್ಗೆ ಊಟಕ್ಕೆಂದು ಹೋದಾಗ ಆಗಿದ್ದೇ ಬೇರೆ. ಹೌದು . ಬೆಂಗಳೂರಿನ ಹೃದಯಭಾಗದಲ್ಲಿರೋ ಕ್ಯಾಪಿಟಲ್ ಹೋಟೆಲ್ನಲ್ಲಿ ಊಟದ ವಿಚಾರಕ್ಕೆ ಹೈಡ್ರಾಮಾವೇ ನಡೆದಿದೆ. ನಿನ್ನೆ ಮದ್ಯಾನ ಊಟಕ್ಕೆಂದು ಹೈಕೋರ್ಟ್ ವಕೀಲೆ ಶೀಲಾ ದೀಪಕ್ ತಮ್ಮ ಸಹೋದ್ಯೋಗಿ ಜೊತೆ ಕ್ಯಾಪಿಟಲ್ ಹೋಟೆಲ್ಗೆ ಹೋಗಿದ್ದಾರೆ. ಬಳಿಕ ಕೆಲವು ಐಟಂಗಳ ಜೊತೆ ಪನ್ನಿರ್ ಬಟರ್ ಮಸಾಲ ಕೂಡ ಆರ್ಡರ್ ಮಾಡಿದ್ರು. ಆದ್ರೆ ಊಟ ಮಾಡುವ ವೇಳೇ ಪನ್ನೀರ್ ಬಟರ್ ಮಸಾಲದಲ್ಲಿ ಜಿರಳೆ ಪತ್ತೆಯಾಗಿದೆ.…

Read More

ಬೆಂಗಳೂರು: ತೆರೆಯಲ್ಲಿ ಕುಳಿತಿರೊ ಕಿರಾತಕರು ಅಟ್ಟಹಾಸ ಮೆರಿತಿದ್ದಾರೆ.ಪೊಲೀಸರ ಜೊತೆಗೆ ಕಣ್ಣಾಮುಚ್ಚಾಲೆ ಆಟ ಆಡ್ತಿದ್ದಾರೆ.ಸಾರ್ವಜನಿಕರಲ್ಲಿ ಭಯ ಹುಟ್ಟಿಸ್ತಿದ್ದಾರೆ..ಸಿಲಿಕಾನ್ ಸಿಟಿಯಲ್ಲಿ ಮತ್ತದೆ ಹುಸಿಬಾಂಬ್ ಇ-ಮೇಲ್ ಸದ್ದು ಮಾಡ್ತಿದೆ.ಹಾಗಾದ್ರೆ ಈ ಬಾರಿ ಬಾಂಬ್ ಬೆದರಿಕೆ ಬಂದಿದ್ದು ಎಲ್ಲಿಗೆ ಅದನ್ನೇ ತೋರಿಸ್ತೀವಿ ನೋಡಿ.. ಇದು ಕಸ್ತೂರಬಾ ರಸ್ತೆಯಲ್ಲಿರೊ ಸರ್.ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂ..ಬೆಂಗಳೂರಿನ ಪ್ರಮುಖ‌ ಪ್ರವಾಸಿ ಸ್ಥಳ ಹಾಗೂ ಅತ್ಯುನ್ನತ ವಸ್ತು ಸಂಗ್ರಹಾಲಯದಲ್ಲಿ ಇದು ಒಂದು.ಇದು ವಿವಿಧ ವೈಜ್ಞಾನಿಕ ಪ್ರಯೋಗಗಳನ್ನು ಮತ್ತು ಎಂಜಿನ್ಗಬಳನ್ನು ಒಳಗೊಂಡಿದೆ.ಪ್ರತಿ ದಿನ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಈ ಪ್ರಯೋಗಾಲಯಕ್ಕೆ ಭೇಟಿ ನೀಡ್ತಾರೆ.ಆದ್ರೆ ಇದೇ ಪ್ರಯೋಗಾಲಯದಲ್ಲಿ ಇವತ್ತು ಆತಂಕದ ವಾತಾವರಣ ಸೃಷ್ಟಿಯಾಗಿಬಿಟ್ಟಿತ್ತು.ಅಧಿಕಾರಿಗಳೇ ಒಂದು ಕ್ಷಣ ನಡುಗಿ ಹೋಗಿದ್ರು..ಹೌದು..ಎಂದಿನಂತೆ ಇವತ್ತು ಬೆಳಗ್ಗೆ 9 ಗಂಟೆಗೆ ಸರ್.ಎಂ.ವಿಶ್ವೇಶ್ವರಯ್ಯ ಮ್ಯೂಸಿಯಂ ಗೇಟ್ ಓಪನ್ ಮಾಡಿದ ಸಿಬ್ಬಂದಿ ಇ-ಮೇಲ್ ಪರಿಶೀಲಿಸಿದ್ದಾರೆ.ಅದ್ರಲ್ಲಿನ ಒಂದು ಇ-ಮೇಲ್ ನೋಡ್ತಿದ್ದಂತೆ ಬೆವತು ಹೋಗಿದ್ರು..Morgue999lol ಎಂಬ ಇ-ಮೇಲ್ ಐಡಿಯಿಂದ ವಿಶ್ವೇಶ್ವರಯ್ಯ ಮ್ಯೂಸಿಯಂ ಗೆ ಬಾಂಬ್ ಇಟ್ಟಿರೋದಾಗಿ ಉಲ್ಲೇಖವಾಗಿತ್ತು..ಹಾಗಾದ್ರೆ ಆ ಮೇಲ್ ನಲ್ಲಿ ಏನಿತ್ತು ಅನ್ನೋದನ್ನೇ ನೋಡೋದಾದ್ರೆ.. ಮ್ಯೂಸಿಯಂ ಒಳಗೆ…

Read More

ಮೊನ್ನೆಯಷ್ಟೇ ಕೆಡಿ ಸಿನಿಮಾದ ಶೂಟಿಂಗ್ ಮುಕ್ತಾಯವಾದ ಸುದ್ದಿಯನ್ನು ನಿರ್ದೇಶಕ ಪ್ರೇಮ್ ಬಹಿರಂಗ ಪಡಿಸಿದ್ದರು. ಇದೀಗ ಇದೇ ಸಿನಿಮಾದ ಮತ್ತೊಂದು ಸುದ್ದಿ ಹೊರ ಬಿದ್ದಿದ್ದು, ತಮಿಳಿನ ಹೆಸರಾಂತ ನಟ ವಿಜಯ್ ಸೇತುಪತಿ (Vijay Sethupathi) ಈ ಸಿನಿಮಾದಲ್ಲಿ ನಟಿಸಲಿದ್ದಾರಂತೆ. ಕೆಡಿ ಸಿನಿಮಾ ಎರಡು ಭಾಗವಾಗಿ ಮೂಡಿ ಬರಲಿದ್ದು, ಮೊದಲ ಭಾಗದಲ್ಲಿ ಕ್ಲೈಮ್ಯಾಕ್ಸ್ ನಲ್ಲಿ ಸೇತುಪತಿ ಕಾಣಿಸಿಕೊಂಡರೆ, ಎರಡನೇ ಭಾಗದಲ್ಲಿ ಹೆಚ್ಚು ಸ್ಕ್ರೀನ್ ಸ್ಪೆಸ್ ಹೊಂದಲಿದ್ದಾರಂತೆ. ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಧ್ರುವ ಸರ್ಜಾ ನಟನೆಯ ಮಾರ್ಟಿನ್ (Martin) ಸಿನಿಮಾ ತೆರೆಗೆ ಬರಬೇಕಿತ್ತು. ಕೆಲ ತಿಂಗಳ ಹಿಂದೆ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ಮಾಡಿ, ಮಾರ್ಟಿನ್ ಚಿತ್ರದ ಕೆಲವು ಅಪ್ ಡೇಟ್ ನೀಡಿತ್ತು ಚಿತ್ರತಂಡ. ಈಗ ಮತ್ತೆ ಅದರ ಅಪ್ ಡೇಟ್ ಕೇಳುತ್ತಿದ್ದಾರೆ ಫ್ಯಾನ್ಸ್. ಈ ನಡುವೆ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾದ ಶೂಟಿಂಗ್ ಕೂಡ ಮುಗಿದಿದೆ. ಇದೇ ವರ್ಷ ರಿಲೀಸ್ ಮಾಡುವುದಾಗಿ ನಿರ್ದೇಶಕ ಪ್ರೇಮ್ ಘೋಷಣೆ ಮಾಡಿದ್ದಾರೆ. ಹೊಸ ವರ್ಷದ ದಿನದಂದು ಕೆಡಿ…

Read More

ಬಿಗ್ ಬಾಸ್ ಮನೆಗೆ (Bigg Boss Show) ಬರುವ ಸ್ಪರ್ಧಿಗಳಿಗೆ ಕೆಲವೊಂದು ರೂಲ್ಸ್ ಇದೆ. ಅದರಲ್ಲಿ ಮ್ಯಾನ್ ಹ್ಯಾಂಡ್ಲಿಂಗ್ ಮಾಡುವಂತೆ ಇಲ್ಲ. ಸಹಸ್ಪರ್ಧಿಗಳಿಗೆ ಹೊಡೆದ ಸ್ಪರ್ಧಿಗೆ ಸೂಕ್ತ ಕ್ರಮಗೊಳ್ಳಲಾಗುತ್ತದೆ. ಅಂಥ ಸ್ಪರ್ಧಿಗಳನ್ನು ಎಲಿಮಿನೇಟ್ ಮಾಡಲಾಗುತ್ತದೆ. ಬಿಗ್ ಬಾಸ್ ಸೀಸನ್ 17 (Bigg Boss Hindi 17) ಹಿಂದಿ ರಿಯಾಲಿಟಿ ಶೋನಲ್ಲಿ ಈ ರೀತಿಯ ಘಟನೆಯೊಂದು ನಡೆದಿದೆ. ಅಭಿಷೇಕ್ ಕುಮಾರ್ (Abhishek Kumar) ಮತ್ತು ಸಮರ್ಥ್ ಜ್ಯುರೆಲ್ (Samarth Jurel) ಮಧ್ಯೆ ಬಿಗ್ ಫೈಟ್ ನಡೆದಿದೆ. ಜಗಳ ಅತಿರೇಕಕ್ಕೆ ಹೋಗಿ ಅಭಿಷೇಕ್ ಅವರು ಸಮರ್ಥ್‌ಗೆ ಹೊಡೆದಿದ್ದಾರೆ. ಈ ಪರಿಣಾಮ, ಮನೆಯಿಂದ ಅಭಿಷೇಕ್‌ರನ್ನ ಹೊರಹಾಕಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಸಣ್ಣ ಸಣ್ಣ ಮಾತಿನಿಂದ ದೊಡ್ಡ ಮಟ್ಟದ ಜಗಳ ಆದ ಉದಾಹರಣೆ ಇದೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಅಭಿಷೇಕ್ ಅವರು ಸಿಟ್ಟಿನಿಂದ ಸಮರ್ಥ್‌ಗೆ ಹೊಡೆದಿದ್ದಾರೆ. ಅಭಿಷೇಕ್ ಅವರನ್ನು ಮನೆಯಲ್ಲಿ ಉಳಿಸಿಕೊಳ್ಳಬೇಕೆ ಅಥವಾ ಬೇಡವೇ ಎನ್ನುವ ನಿರ್ಧಾರವನ್ನು ಮನೆಯ ಕ್ಯಾಪ್ಟನ್ ಅಂಕಿತಾ…

Read More

ಎರಡು ದಿನಗಳ ಹಿಂದೆಯಷ್ಟೇ ಪುತ್ರಿ ಇರಾ ಖಾನ್ ಮದುವೆ ಮಾಡಿರುವ ಬಾಲಿವುಡ್ ನಟ ಆಮೀರ್ ಖಾನ್ (Aamir Khan), ಇದೀಗ ಮುಂಬೈನಲ್ಲಿ ಆರತಕ್ಷತೆ (Reception) ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಮಗಳ ಮದುವೆಗೆ ಕೆಲವೇ ಕೆಲವು ಗಣ್ಯರನ್ನು ಆಮೀರ್ ಆಮಂತ್ರಿಸಿದ್ದರು. ಜೊತೆಗೆ ಎರಡೂ ಕುಟುಂಬಗಳ ಸದಸ್ಯರು ಇದ್ದರು. ಆದರೆ, ಆರತಕ್ಷತೆಯಲ್ಲಿ ಭಾರತೀಯ ಸಿನಿಮಾ ರಂಗದ ನಾನಾ ದಿಗ್ಗಜರು ಭಾಗಿ ಆಗಲಿದ್ದಾರಂತೆ. ಜನವರಿ 13ಕ್ಕೆ ಅದ್ಧೂರಿಯಾಗಿಯೇ ಮಗಳ ಆರತಕ್ಷತೆ ಕಾರ್ಯಕ್ರಮವನ್ನು ಆಮೀರ್ ಆಯೋಜನೆ ಮಾಡಿದ್ದಾರಂತೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಜೊತೆಗೆ ಬಾಲಿವುಡ್ ನ ಬಹುತೇಕ ಸ್ಟಾರ್ ನಟರು ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಜನವರಿ 3ರಂದು ಇರಾ ಖಾನ್ ಮದುವೆಯಾಗಿದೆ. ಇರಾ ಖಾನ್ (Ira Khan) ಮತ್ತು ನೂಪುರ್ ಶಿಖಾರೆ (Nupur Shikhare) ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ. ಫೋಟೋ ವೈರಲ್ ಆಗಲು ಕಾರಣ, ನೂಪುರ್ ಧರಿಸಿರುವ ಕಾಸ್ಟ್ಯೂಮ್ ಸಾಮಾನ್ಯವಾಗಿ ಮದುವೆಯಲ್ಲಿ ಲಕ್ಷಾಂತರ ಬೆಲೆ ಬಾಳು ಸೂಟ್…

Read More

ತೆಲುಗು ಚಿತ್ರೋದ್ಯಮಕ್ಕೆ ಎಂಟ್ರಿ ಕೊಟ್ಟಿರುವ ಬಾಲಿವುಡ್ ನ ಖ್ಯಾತ ನಟಿ ಜಾಹ್ನವಿ ಕಪೂರ್ (Jahnavi Kapoor) , ಪದೇ ಪದೇ ತಿರುಪತಿ ತಿಮ್ಮಪ್ಪನ (Tirupati Timmappa) ದರ್ಶನ ಮಾಡುತ್ತಿದ್ದಾರೆ. ಪ್ರತಿ ಬಾರಿಯೂ ಒಬ್ಬರೇ ದರ್ಶನ ಮಾಡುತ್ತಿದ್ದವರು, ಈ ಬಾರಿ ಗೆಳೆಯ ಶಿಖರ್ ಪಹರಿಯಾ (Shikhar Paharia) ಜೊತೆ ತಿರುಪತಿಗೆ ಬಂದಿದ್ದರು. ಶುಕ್ರವಾರ ಬೆಳಗ್ಗೆ ಗೆಳೆಯನ ಜೊತೆ ಆಗಮಿಸಿದ್ದ ಅವರು, ಜೊತೆಯಾಗಿ ದರ್ಶನ ಮಾಡಿದ್ದಾರೆ. ಹೊಸ ವರ್ಷವನ್ನು ಅವರು ತಿರುಪತಿಗೆ ತಿಮ್ಮಪ್ಪನ ಆಶೀರ್ವಾದ ಪಡೆಯುವ ಮೂಲಕ ಆಚರಿಸಿದ್ದಾರೆ. 2024 ಅನ್ನು ಹೊಸ ಕನಸಿನೊಂದಿಗೆ ಆರಂಭಿಸುತ್ತಿದ್ದೇನೆ ಎಂದು ಅವರು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಗೋಲ್ಡನ್ ಕಲರ್ ಸೀರೆಯುಟ್ಟು, ದೇವಸ್ಥಾನದ ಮುಂದೆ ನಿಂತು ಫೋಟೋ ತೆಗೆದುಕೊಂಡಿದ್ದಾರೆ ಳೆಯ ಶಿಖರ್ ಪಹರಿಯಾ ಬಗ್ಗೆ ಜಾ‍ಹ್ನವಿ ಹಲವಾರು ಬಾರಿ ಮಾತನಾಡಿದ್ದಾರೆ. ಡೇಟಿಂಗ್ ವಿಚಾರ ಬಂದಾಗ, ಶಿಖರ್ ನನ್ನ ಇಡೀ ಕುಟುಂಬಕ್ಕೆ ಪರಿಚಿತರು ಎಂದು ಹೇಳುವ ಮೂಲಕ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಇದೀಗ ಬಹಿರಂಗವಾಗಿಯೇ ಗೆಳೆಯನ ಜೊತೆ ದೇವಸ್ಥಾನಕ್ಕೂ ಬಂದಿದ್ದಾರೆ.

Read More

ಬೆಂಗಳೂರು ಮೆಟ್ರೋ ನಿಲ್ದಾಣಗಳು ಎಷ್ಟು ಸೇಫ್  ಸೂಸೈಡ್ ಸ್ಪಾಟ್ ಗಳು ಆದ್ವಾ ನಮ್ಮ ಮೆಟ್ರೋ ಸ್ಟೇಷನ್ಸ್ ಎಂದು ಎಲ್ಲರಲ್ಲೂ ಈಗ ಪ್ರಶ್ನೆ ಕಾಡಲಾರಂಭಿಸಿದೆ. ಪದೆ ಪದೇ ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಸೂಸೈಡ್ ಅವಾಂತರಗಳು ಆಗುತ್ತಲೇ ಇವೆ ಮೊದಲ ಹಂತ ಮೆಟ್ರೋ ಕಾಮಗಾರಿ ವೇಳೆ ಹಣ ಉಳಿಸಿದ್ದಕ್ಕೆ ಬ್ಯಾಕ್ ಟು ಬ್ಯಾಕ್ ದುರಂತಕ್ಕೆ ಕಾರಣನಾ..? ಬಿಎಂಆರ್ಸಿಲ್ ನಿರ್ಲಕ್ಷ್ಯ ದಿಂದ್ಲೇ ನಿಲ್ದಾಣಗಳಲ್ಲಿ ಸೂಸೈಟ್ ಆಗ್ತಿವಿಯಾ..? ಮೆಟ್ರೋ ಸ್ಟೇಷನ್ ಗಳಲ್ಲಿ ಪದೇ ಪದೇನಡೆಯುತ್ಗಿರೋ ಸೂಸೈಟ್ ಬಳಿಕವೂ ಎಚ್ಚೆತ್ತುಕೊಂಡಿಲ್ಲ ಬಿಎಂಆರ್ಸಿಲ್ ಎಂದು ಎಲ್ಲರನ್ನು ಕಾಡುತ್ತಿದೆ. ಮೆಟ್ರೋ ‌ನಿಗಮದ ಕೊಂಚ ಎಡವಟ್ಟಿಗೆ ಮೆಟ್ರೋದಲ್ಲಿ ಪದೇ ಪದೇ ಅವಾಂತರ ಆದ್ರೂ ಮೆಟ್ರೋ ಮೊದಲ ಹಾಗೂ ಎರಡನೇ ಹಂತ ಸ್ಟೇಷನ್ ಗಳಲ್ಲಿ ಇಲ್ಲ ಸೇಫ್ಟಿ ಮೆಟ್ರೋ ಪ್ಲಾಟ್ ಪಾರಂಗಳಲ್ಲಿ ಪದೇ ಪದೇ ಹಳಿಗೆ ಹಾರಿ ಆತ್ಮಹತ್ಯೆ ಗೆ ಯತ್ಮ 2012 ರಲ್ಲಿ ಎಂ.ಜಿ ರಸ್ತೆ ನಿಲ್ದಾಣದಲ್ಲಿ ಓರ್ವ ಬಾಲಕ ಹಳಿಗೆ ಹಾರಿ ಆತ್ಮಹತ್ಯೆ ಯತ್ನ  ಹಾಗೆ 2019 ರಲ್ಲಿ ನ್ಯಾಷನಲ್ ಕಾಲೇಜ್…

Read More