ಭಾರತದಲ್ಲಿ ಹೆಚ್ಚು ಬಳಕೆಯಾದ ಪಾಸ್ವರ್ಡ್ಗಳು ಯಾವುದು ಗೊತ್ತಾ: ಇಲ್ಲಿದೆ ನೋಡಿ! ಸೈಬರ್ ಕ್ರೈಮ್ಗಳು ಎಂಬುದು ಈಗೀಗ ಸಾಮಾನ್ಯವಾಗಿ ಬಿಟ್ಟಿದೆ. ಈ ಡಿಜಿಟಲ್ ಜಮಾನದಲ್ಲಿ ಸೈಬರ್ ದಾಳಿಕೋರರು ಅಮಾಯಕನ್ನು ಬಲೆಗೆ ಕೆಡವಲು ನಾನಾ ರೀತಿಯಲ್ಲಿ ಹವಣಿಸುತ್ತಿರುತ್ತಾರೆ. ಜೊತೆಗೆ ಹ್ಯಾಕರ್ಗಳು ಸುಲಭವಾಗಿ ಜನರ ಮಾಹಿತಿಗೆ ಕನ್ನ ಹಾಕಿ ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಮೋಸದ ಜಾಲದಲ್ಲಿ ಸಿಲುಕಿ ನಲುಗಿದವರು ಅದೆಷ್ಟೋ ಮಂದಿ. ಈ ಸೈಬರ್ ಕ್ರಿಮಿನಲ್ಗಳ ಕಾಟಕ್ಕೆ ಸಾಕಷ್ಟು ಮಂದಿ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ ಎಂಬುದು ಕೂಡಾ ಸತ್ಯ. ನಿಮ್ಮ ವೈಯಕ್ತಿಕ, ಸಾಮಾಜಿಕ ಮಾಧ್ಯಮ ಅಥವಾ ಕೆಲಸದ ಖಾತೆಗಳನ್ನು ರಕ್ಷಿಸಲು ಸರಿಯಾದ ಮತ್ತು ಸದೃಢ ಪಾಸ್ವರ್ಡ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈ ವಿಷಯದಲ್ಲಿ ನಿರ್ಲಕ್ಷ್ಯ ತೋರಿದರೆ ಕಡಿಮೆ ಅವಧಿಯಲ್ಲಿಯೇ ಅಪಾಯಕ್ಕೆ ಗುರಿಯಾಗುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಯಾಕೆಂದರೆ ಸೈಬರ್ ಅಪರಾಧಿಗಳು ಸುಲಭವಾಗಿ ಹ್ಯಾಕ್ ಮಾಡಬಹುದಾದ ಪಾಸ್ವರ್ಡ್ ಅನ್ನು ಆಯ್ಕೆ ಮಾಡುವುದು ಜನರು ಮಾಡುವ ತಪ್ಪುಗಳಲ್ಲಿ ಒಂದಾಗಿದೆ. NordPassನ ವರದಿಯು ಭಾರತೀಯರು ಹೆಚ್ಚು ಬಳಸುವ 20…
Author: AIN Author
ಲೈಫ್ ಸರ್ಟಿಫಿಕೇಟ್ ಅಥವಾ ಜೀವ ಪ್ರಮಾಣಪತ್ರ ಸಲ್ಲಿಸಲು ನವೆಂಬರ್ 30ರವರೆಗೂ ಕಾಲಾವಕಾಶ ಇದೆ. ಇವತ್ತು ನವೆಂಬರ್ 28 ಆಗಿದ್ದು, ಇನ್ನು ಮೂರು ದಿನ ಮಾತ್ರವೇ ಬಾಕಿ ಇದೆ. ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರದ ಎಲ್ಲಾ ಉದ್ಯೋಗಿಗಳೂ ಕೂಡ ಲೈಫ್ ಸರ್ಟಿಫಿಕೇಟ್ ಕೊಡುವುದು ಕಡ್ಡಾಯವಾಗಿದೆ. ಒಂದು ವೇಳೆ ಜೀವನ್ ಪ್ರಮಾಣಪತ್ರ ಸಲ್ಲಿಸದಿದ್ದರೆ ಏನಾಗುತ್ತದೆ ಗೊತ್ತಾ ಇಲ್ಲಿದೆ ನೋಡಿ! ಫಲಾನುಭವಿಗಳು ಜೀವಂತವಾಗಿದ್ದಾರಾ ಎಂದು ಖಾತ್ರಿಪಡಿಸಿಕೊಳ್ಳಲು ಲೈಫ್ ಸರ್ಟಿಫಿಕೇಟ್ ಅನ್ನು ಪಡೆಯಲಾಗುತ್ತದೆ. ಸಾಕಷ್ಟು ಬಾರಿ ಪಿಂಚಣಿದಾರರು ಸಾವನ್ನಪ್ಪಿ, ಅವರ ಖಾತೆಗೆ ಪಿಂಚಣಿ ಪ್ರತೀ ತಿಂಗಳೂ ಜಮೆ ಆಗುತ್ತಲೇ ಇರುತ್ತಿತ್ತು. ಇದನ್ನು ತಪ್ಪಿಸಲು ಪ್ರತೀ ವರ್ಷ ಜೀವನ್ ಪ್ರಮಾಣಪತ್ರ ಸಲ್ಲಿಕೆಯನ್ನು ಕಡ್ಡಾಯ ಮಾಡಲಾಗಿದೆ. ನವೆಂಬರ್ 30ರೊಳಗೆ ಜೀವ ಪ್ರಮಾಣಪತ್ರ ಸಲ್ಲಿಸದಿದ್ದರೆ ಪಿಂಚಣಿ ಸ್ಥಗಿತಗೊಳ್ಳುತ್ತದೆ. ಹಾಗಂತ ಪಿಂಚಣಿ ಖಾಯಂ ಆಗಿ ನಿಂತುಹೋಗುವುದಿಲ್ಲ. ತಾತ್ಕಾಲಿಕವಾಗಿ ಮಾತ್ರ ಸ್ಥಗಿತಗೊಳ್ಳುತ್ತದೆ. ಮುಂಬರುವ ತಿಂಗಳ ಪಿಂಚಣಿ ಸಿಗುವುದಿಲ್ಲ. ನೀವು ತಡವಾಗಿ ಲೈಫ್ ಸರ್ಟಿಫಿಕೇಟ್ ಕೊಟ್ಟರೂ ಪಿಂಚಣಿ ಮತ್ತೆ ಸಕ್ರಿಯಗೊಳ್ಳುತ್ತದೆ. ಅದರ ಮುಂದಿನ…
ಚಿಕ್ಕಮಗಳೂರು :- ಜಿಲ್ಲೆಯ ಮೂಡಿಗೆರೆಯಲ್ಲಿ ಹಿಂದು ಯುವತಿಯೊಂದಿಗಿದ್ದ ಮುಸ್ಲಿಂ ಯುವಕ ಮತ್ತು ಅತನ ಸ್ನೇಹಿತನ ಮೇಲೆ ಹಲ್ಲೆ ನಡೆಸಿರುವ ಘಟನೆ ಜರುಗಿದೆ. ಯುವತಿಗೆ ಚಾಕೋಲೆಟ್ ನೀಡಿ ಪ್ರೀತಿ ನಿವೇದನೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಯುವಕನ ಮೇಲೆ ನೈತಿಕ ಪೊಲೀಸ್ಗಿರಿ ನಡೆದಿದೆ. ಮೂಡಿಗೆರೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದೆ. ಯುವತಿಗೆ ಲವ್ ಪ್ರಪೋಸ್ ಮಾಡುತ್ತಿದ್ದಾಗ ಯುವಕನಿಗೆ ಹಿಗ್ಗಾಮುಗ್ಗ ಥಳಿಸಲಾಗಿದೆ. ಹಲ್ಲೆ ನಡೆಸಿದವರು ಹಿಂದು ಸಂಘಟನೆಯಲ್ಲಿ ಗುರುತಿಸಿಕೊಂಡವರು ಎನ್ನಲಾಗಿದ್ದು, ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಾಲ್ಡೀವ್ಸ್ನ ಕೆಲ ಮಂತ್ರಿಗಳು ಮಾಡಿರುವ ಭಾರತ ವಿರೋಧಿ ಕಾಮೆಂಟ್ಗಳನ್ನು ಟೀಮ್ ಇಂಡಿಯಾದ ಹಲವು ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಕಟುವಾಗಿ ಖಂಡಿಸಿದ್ದಾರೆ. ಅಂದಹಾಗೆ ಸೋಷಿಯಲ್ ಮೀಟಿಯಾಗಳಲ್ಲಿ ಭಾರತೀಯರು ಮಾಲ್ಡೀವ್ಸ್ ಪ್ರವಾಸ ಕೈಗೊಳ್ಳುವುದನ್ನು ನಿಲ್ಲಿಸಬೇಕು ಎಂಬ ಅಭಿಯಾನ ಕೂಡ ಶುರುವಾಗಿದ್ದು, ಈ ಸಂದರ್ಭದಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಅವರ ಹೇಳಿಕೆಯ ಹಳೇ ವಿಡಿಯೋ ಒಂದು ಭಾರಿ ಸದ್ದು ಮಾಡುತ್ತಿದೆ. https://x.com/MrAnikrat/status/1744070553521279317?s=20 ಈ ಬಗ್ಗೆ ಎಂಎಸ್ ಧೋನಿ ಎಂದಿಗೂ ಕೂಡ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿ ಪ್ರತಿಕ್ರಿಯೆ ನೀಡಿದವರಲ್ಲ. ಆದರೆ, ಇದೇ ವಿಚಾರವಾಗಿ ಹಳೇ ವಿಡಿಯೋ ಒಂದರಲ್ಲಿ ಮಾತನಾಡಿದ್ದು ಇದೀಗ ವೈರಲ್ ಆಗಿದೆ. ಅವರ ವಿಡಿಯೋ ತುಣುಕಿನಲ್ಲಿ ಭಾರತದ ಲಕ್ಷದ್ವೀಪ ಮತ್ತು ಮಾಲ್ಡೀವ್ಸ್ ಎರಡರಲ್ಲಿ ಭಾರತೀಯರಿಗೆ ಯಾವುದು ಉತ್ತಮ ಎಂಬುದರ ಚರ್ಚೆಗೆ ಅತ್ಯುತ್ತಮ ಉತ್ತರ ಸಿಕ್ಕಿದೆ. ವಿಡಿಯೋದಲ್ಲಿ ತಮ್ಮ ಬಿಡುವಿನ ಸಮಯದಲ್ಲಿ ಕೈಗೊಳ್ಳುವ ಪ್ರವಾಸಗಳ ಕುರಿತಾಗಿ ಮಾತನಾಡಿರುವ ಧೋನಿ, ಮೊದಲಿಗೆ ಭಾರತದಲ್ಲಿನ ಪ್ರವಾಸಿ ತಾಣಗಳನ್ನು ನೋಡಿ ನಂತರ ವಿದೇಶಗಳ ಬಗ್ಗೆ ಆಲೋಚಿಸಿ ಎಂದಿದ್ದಾರೆ. ನಾನು…
ದಕ್ಷಿಣ ಆಫ್ರಿಕಾ ತಂಡದ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಹೆನ್ರಿಚ್ ಕ್ಲಾಸೆನ್ ಟೆಸ್ಟ್ ಕ್ರಿಕೆಟ್ ವೃತ್ತಿಬದುಕಿಗೆ ಹಠಾತ್ ನಿವೃತ್ತಿ ಘೋಷಿಸಿದ್ದಾರೆ. ವೈಟ್ಬಾಲ್ ಕ್ರಿಕೆಟ್ ಕಡೆಗೆ ಹೆಚ್ಚು ಗಮನ ನೀಡುವ ಉದ್ದೇಶದಿಂದ ರೆಡ್ ಬಾಲ್ ಕ್ರಿಕೆಟ್ಗೆ ವಿದಾಯ ಹೇಳುತ್ತಿರುವುದಾಗಿ 32 ವರ್ಷದ ಅನುಭವಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಹೇಳಿಕೊಂಡಿದ್ದಾರೆ. 2019ರಿಂದ 2023ರವರೆಗೆ ದಕ್ಷಿಣ ಆಫ್ರಿಕಾ ತಂಡದ ಪರ ಹೆನ್ರಿಚ್ ಕ್ಲಾಸೆನ್ ಕೇವಲ 4 ಟೆಸ್ಟ್ ಪಂದ್ಯಗಳನ್ನು ಮಾತ್ರವೇ ಆಡಿದ್ದಾರೆ. ವೆಸ್ಟ್ ಇಂಡೀಸ್ ಎದುರು ತಮ್ಮ ಕಟ್ಟ ಕಡೆಯ ಟೆಸ್ಟ್ ಆಡಿರುವ ಹೆನ್ರಿಚ್ ಕ್ಲಾಸೆನ್ ವೈಟ್ ಬಾಲ್ ಕ್ರಿಕೆಟ್ ಕಡೆಗೆ ಗಮನ ನೀಡಿದ್ದಾರೆ. ಇತ್ತೀಚೆಗೆ ನಡೆದ ಭಾರತ ವಿರುದ್ಧದ 2 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿ ಬಳಿಕ ಮಾಜಿ ನಾಯಕ ಡೀನ್ ಎಲ್ಗರ್ ನಿವೃತ್ತಿ ತೆಗೆದುಕೊಂಡಿದ್ದರು. ಇದರ ಬೆನ್ನಲ್ಲೇ ಕ್ಲಾಸೆನ್ ನಿವೃತ್ತಿ ಘೋಷಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡ 2024ರಲ್ಲಿ ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶ ಎದುರು ಟೆಸ್ಟ್ ಸರಣಿಯನ್ನು ಆಡಲಿದ್ದು, ಈ ಸರಣಿಗಳಿಗೆ ಹೆನ್ರಿಚ್ ಕ್ಲಾಸೆನ್ ಅವರನ್ನು ಪರಿಗಣಿಸುವುದಾಗಿ…
ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ನಟಿ ಇಶಾ ಕೊಪ್ಪಿಕರ್ (Isha Koppikar) ಕುರಿತಾಗಿ ಆಘಾತಕಾರಿ ಸುದ್ದಿಯೊಂದು ಬಂದಿತ್ತು. ಉದ್ಯಮಿಯೊಬ್ಬರನ್ನು ಮದುವೆಯಾಗಿದ್ದ ಇಶಾ, 14 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ ಎಂದು ಹೇಳಲಾಗಿತ್ತು. ಅದೀಗ ನಿಜವಾಗಿದೆ. ಇಶಾ ಜೊತೆಗಿನ ದಾಂಪತ್ಯ ಜೀವನವನ್ನು ಮುರಿದುಕೊಂಡಿರುವುದಾಗಿ ಸ್ವತಿ ಪತಿಯೇ ಸ್ಪಷ್ಟನೆ ನೀಡಿದ್ದಾರೆ. ಹದಿನಾಲ್ಕು ವರ್ಷಗಳ ಹಿಂದೆ ಉದ್ಯಮ ಟಮ್ಮಿ ನಾರಂಗ್ (Tammy Narang) ಅವರನ್ನು ಇಶಾ ಮದುವೆ ಆಗಿದ್ದರು. ಹಲವು ವರ್ಷಗಳಿಂದ ಈ ಜೋಡಿಯ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಮತ್ತೆ ಅದನ್ನು ಸರಿ ಮಾಡಲು ಸಾಧ್ಯವಾಗಲೇ ಇಲ್ಲವೆಂದು ಹೇಳಲಾಗುತ್ತಿದೆ. ಹಾಗಾಗಿ ಒಂಬತ್ತು ವರ್ಷದ ಹೆಣ್ಣು ಮಗುವನ್ನು ಕರೆದುಕೊಂಡು, ಗಂಡನ ಮನೆ ತೊರೆದಿದ್ದಾರಂತೆ ಇಶಾ. ಕನ್ನಡದಲ್ಲಿ ರವಿಚಂದ್ರನ್ ನಟನೆ ಓ ನನ್ನ ನಲ್ಲೆ, ವಿಷ್ಣುವರ್ಧನ್ ನಟನೆಯ ಸೂರ್ಯವಂಶ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ, ಬಾಲಿವುಡ್ ಸಿನಿಮಾ ರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದೀಗ ದಾಂಪತ್ಯ ಜೀವನಕ್ಕೆ ಅಂತ್ಯ ಹೇಳುವ ಮೂಲಕ ಅಭಿಮಾನಿಗಳಿಗೆ…
ಬೆಂಗಳೂರು: ಮುಂದಿನ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಹಾಸನ,ಕೊಡಗು, ಮೈಸೂರು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ಉಡುಪಿ, ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ,ಕಲಬುರಗಿ, ವಿಜಯಪುರ, ಬಳ್ಳಾರಿ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಕೋಲಾರ, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲೂ ಮಳೆಯಾಗಲಿದೆ. ಎಚ್ಎಎಲ್ನಲ್ಲಿ 23.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 23.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 19.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಮನೆಮದ್ದುಗಳಿವೆ. ಅದರಲ್ಲೂ ಕೂದಲಿನ ಬೆಳವಣಿಗೆಗೆ ಶುಂಠಿಯ ಪ್ರಯೋಜನಗಳ ಬಗ್ಗೆ ನೀವು ತಿಳಿದಿಯಲೇಬೇಕು. ಶುಂಠಿಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಸಂಯುಕ್ತಗಳು ಸಮೃದ್ಧವಾಗಿದ್ದು, ಇದು ತಲೆಗೆ ರಕ್ತದ ಹರಿವನ್ನು ಉತ್ತೇಜಿಸುವುದರಿಂದ ಕೂದಲಿನ ಬೆಳವಣಿಗೆಯನ್ನು ಸಹ ಉತ್ತೇಜಿಸುತ್ತದೆ. ನಿಮ್ಮ ಕೂದಲಿನ ಮೇಲೆ ಶುಂಠಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ನಾವೀಗ ನೋಡೋಣ. ಶುಂಠಿಯಲ್ಲಿ ಜಿಂಜರಾಲ್ ಅಂಶವಿದೆ. ಇದು ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಕೂದಲು ಕಿರುಚೀಲಗಳಿಗೆ ಪೋಷಕಾಂಶಗಳನ್ನು ಒದಗಿಸುತ್ತದೆ. ಶುಂಠಿಯು ಆಯಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿದ್ದು, ಇದು ತಲೆಹೊಟ್ಟು ಮತ್ತು ಕೂದಲಿನ ಬೆಳವಣಿಗೆಯನ್ನು ತಡೆಯುವ ಇತರ ನೆತ್ತಿಯ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ಆರೋಗ್ಯಕರ ನೆತ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಶುಂಠಿಯು ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಅದೇ ಸಮಯದಲ್ಲಿ ಇದು ಪ್ರತಿ ಕೂದಲು ಕೋಶಕವನ್ನು ಉತ್ತೇಜಿಸುತ್ತದೆ. ಇದರ ಫಲಿತಾಂಶ ಉದ್ದವಾದ ಹಾಗೂ ಬಲವಾದ ಕೂದಲು ನಿಮ್ಮದಾಗುತ್ತದೆ. ಶುಂಠಿಯಲ್ಲಿ ಹೇರಳವಾಗಿರುವ ಜೀವಸತ್ವಗಳು, ಖನಿಜಗಳು ಮತ್ತು ಕೊಬ್ಬಿನಾಮ್ಲಗಳು ನಿಮ್ಮ…
ಆರೋಗ್ಯವೇ ಸಂಪತ್ತು’, ಹೆಚ್ಚಿನ ಬಳಕೆಯು ಇದರ ಬಗ್ಗೆ ತಿಳಿದಿದೆ ಮತ್ತು ಸತ್ಯದ ಸತ್ಯವನ್ನು ನಂಬುತ್ತಾರೆ. ಆದಾಗ್ಯೂ, ನಮ್ಮಲ್ಲಿ ಹೆಚ್ಚಿನವರು ಈ ಸತ್ಯವನ್ನು ತಿಳಿದ ನಂತರವೂ ದೈನಂದಿನ ಆರೋಗ್ಯದ ಮಹತ್ವವನ್ನು ನಿರ್ಲಕ್ಷಿಸುತ್ತಾರೆ. ನಮ್ಮಲ್ಲಿ ಯಾರಾದರೂ ನಮ್ಮ ದೇಹ ಮತ್ತು ಮನಸ್ಸಿಗೆ ಆರೋಗ್ಯದ ಸರಿಯಾದ ಗುರಿಗಳನ್ನು ಸಾಧಿಸಲು ಬಯಸಿದರೆ, ದೈನಂದಿನ ದಿನಚರಿಯಲ್ಲಿ ಕೆಲವು ಆರೋಗ್ಯ ಸಲಹೆಗಳನ್ನು ಅನುಸರಿಸುವುದು ಬಹಳ ಮುಖ್ಯ. ಅದರಲ್ಲೂ ನಮ್ಮ ಅತ್ಯುತ್ತಮ ದೈನಂದಿನ ಆರೋಗ್ಯ ಸಲಹೆಗಳು ಇಲ್ಲಿವೆ ಹೀಗೆ ಮಾಡಿ 1. ನಿಮ್ಮ ಬೆಳಗಿನ ಉಪಾಹಾರ: ಬೆಳಗಿನ ಉಪಾಹಾರವು ನಿಮ್ಮನ್ನು ದಪ್ಪವಾಗಿಸುತ್ತದೆ ಮತ್ತು ಅದನ್ನು ಬಿಟ್ಟುಬಿಡುವುದು ನಿಮ್ಮ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎಂಬ ಸ್ಟೀರಿಯೊಟೈಪ್ನಿಂದ ನಿಮ್ಮನ್ನು ನೀವೇ ಮುರಿಯಿರಿ. ಇದು ಆಗುವುದಿಲ್ಲ! ಬೆಳಗಿನ ಉಪಾಹಾರವು ಅತ್ಯಂತ ಪೌಷ್ಠಿಕಾಂಶವನ್ನು ಹೊಂದಿರಬೇಕಾದ ಪ್ರಮುಖ ಆಹಾರವಾಗಿದೆ ಮತ್ತು ಪ್ರತಿ ದಿನವೂ ತೆಗೆದುಕೊಳ್ಳಬೇಕು. ಇದು ಏಕಾಗ್ರತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಪ್ರತಿದಿನ ಶಕ್ತಿಯುತವಾಗಿರಲು ನಿಮಗೆ ಸಹಾಯ ಮಾಡುತ್ತದೆ. ಉತ್ತಮ ಆರೋಗ್ಯಕ್ಕಾಗಿ ಅನುಸರಿಸಬೇಕಾದ ಸರಿಯಾದ ಸಲಹೆಗಳು. 2. ನೈರ್ಮಲ್ಯವನ್ನು…
ಹೊಸ ಅಧ್ಯಯನ ಒಂದರಲ್ಲಿ ಸಾಮಾನ್ಯ ಪ್ಲಾಸ್ಟಿಕ್ ಬಾಟಲಿಯಲ್ಲಿ 1 ಲೀಟರ್ನಲ್ಲಿ 2 ಲಕ್ಷಕ್ಕೂ ಹೆಚ್ಚು ತುಣುಕು ಕಂಡು ಬಂದಿದೆ. 1 ಮೈಕ್ರೊಮೀಟರ್ಗಿಂತ ಕಡಿಮೆ ಉದ್ದ ಮತ್ತು ಮಾನವನ ಕೂದಲಿನ ಅಗಲಕ್ಕಿಂತ 1/70ರಷ್ಟು ಅಗಲವಿರುವ ಪ್ಲಾಸ್ಟಿಕ್ನ ತುಂಡುಗಳನ್ನು ‘ನ್ಯಾನೊಪ್ಲಾಸ್ಟಿಕ್ಸ್’ ಎಂದು ಕರೆಯಲಾಗುತ್ತದೆ. ಬ್ಲೂಮ್ಬರ್ಗ್ ವರದಿಯ ಪ್ರಕಾರ, ಬಾಟಲ್ ನೀರಿನಲ್ಲಿ ಹಿಂದೆ ಅಂದಾಜಿಸಲಾಗಿದ್ದಕ್ಕಿಂತ 100 ಪಟ್ಟು ಹೆಚ್ಚು ಪ್ಲಾಸ್ಟಿಕ್ ಕಣಗಳು ಇರಬಹುದು ಎಂದು ಅಧ್ಯಯನದ ಫಲಿತಾಂಶಗಳು ತೋರಿಸುತ್ತವೆ. ಹಿಂದಿನ ಅಧ್ಯಯನಗಳು ಮೈಕ್ರೋಪ್ಲಾಸ್ಟಿಕ್ಗಳು ಅಥವಾ 1 ರಿಂದ 5,000 ಮೈಕ್ರೋಮೀಟರ್ಗಳ ನಡುವಿನ ತುಣುಕುಗಳನ್ನು ಮಾತ್ರ ಎಣಿಕೆ ಮಾಡಿತ್ತು. ನ್ಯಾನೊಪ್ಲಾಸ್ಟಿಕ್ ಮಾನವನ ದೇಹಕ್ಕೆ ಮೈಕ್ರೊಪ್ಲಾಸ್ಟಿಕ್ಗಿಂತ ಹೆಚ್ಚು ಅಪಾಯಕಾರಿ ಏಕೆಂದರೆ ಅದು ತುಂಬಾ ಚಿಕ್ಕದಾಗಿದ್ದು, ಸುಲಭವಾಗಿ ಮಾನವ ಜೀವಕೋಶಗಳಿಗೆ ಪ್ರವೇಶಿಸಬಹುದು, ರಕ್ತನಾಳಗಿಗೂ ಪ್ರವೇಶಿಸಬಹುದು ಹಾಗೂ ಈ ಮೂಲಕ ಅಂಗಗಳ ಮೇಲೆ ಪರಿಣಾಮ ಬೀರಬಹುದು. ನ್ಯಾನೊಪ್ಲಾಸ್ಟಿಕ್ಗಳು ಜರಾಯುವಿನ ಮೂಲಕ ಹುಟ್ಟಲಿರುವ ಶಿಶುಗಳ ದೇಹಕ್ಕೆ ಹೋಗಬಹುದು. ವಿಜ್ಞಾನಿಗಳು ಬಾಟಲ್ ನೀರಿನಲ್ಲಿ ಇರುವುದು ಬಹಳ ಹಿಂದೆಯೇ ಶಂಕಿಸಿದ್ದಾರೆ ಆದರೆ ನ್ಯಾನೊಪರ್ಟಿಕಲ್ಗಳನ್ನು ಗುರುತಿಸಲು ಯಾವುದೇ…