Author: AIN Author

ವಯಸ್ಸಾದ ಮೇಲೆ ಮನೆಯಲ್ಲಿ ಮೊಮ್ಮಮ್ಮಕ್ಕಳನ್ನು ಆಡಿಸುತ್ತಾ, ದೇವರ ಧ್ಯಾನದಲ್ಲಿ ಕಾಲಕಳೆಯುವವರೇ ಹೆಚ್ಚು ಮಂದಿ. ವಯಸ್ಸಾದಂತೆ ಕುಂದುವ ಶಕ್ತಿ, ಉತ್ಸಾಹಗಳು ಇದಕ್ಕೆ ಕಾರಣವಿರಬಹುದು. ಲಿನೆ ಜೆಕಿಸ್ ಎಂಬ 73 ವರ್ಷದ ಮಹಿಳೆ ಎಲ್ಲ ವೃದ್ಧರಂತಲ್ಲ. ಈಕೆ ತನ್ನ ಇಳಿವಯಸ್ಸಿನಲ್ಲೂ ಇನ್ನಿಲ್ಲದ ಉತ್ಸಾಹವನ್ನು ಹೊಂದಿದ್ದಾಳೆ. ಈಕೆ ಸಾಂಪ್ರದಾಯಿಕ ಅಜ್ಜಿಯರಿಗಿಂತ ಭಿನ್ನವಾಗಿದ್ದಾಳೆ. ಈ ಅಜ್ಜಿಯ ಗ್ಲಾಮರ್ ಲುಕ್ ಯಾವ ಯುವತಿಯರಿಗೂ ಕಡಿಮೆಯಿಲ್ಲ. ಕಾಲು ನೋವು, ಸೊಂಟ ನೋವು, ಖಾಯಿಲೆ ಎಂದು ಕೂರುವ ವಯಸ್ಸಿನಲ್ಲಿ ಈ ಅಜ್ಜಿ ಮಿನಿ ಸ್ಕರ್ಟ್ ಧರಿಸಿ ಪಬ್, ಕ್ಲಬ್ ಗಳನ್ನು ಸುತ್ತುತ್ತಿದ್ದಾಳೆ. ಈ ಅಜ್ಜಿಯ ಜೀವನಶೈಲಿಯನ್ನು ನೋಡಿದ ಜನ ಬೆರಗಾಗಿರುವುದಂತೂ ನಿಜ. ಈಗಿನ ದಿನದಲ್ಲಿ ವಯಸ್ಸನ್ನು ಮರೆಮಾಚಲು ಅನೇಕ ರೀತಿಯ ಕಸರತ್ತುಗಳನ್ನು ಮಾಡುತ್ತಾರೆ. ಬೆಳ್ಳಗಾದ ಕೂದಲಿಗೆ ಬಣ್ಣ ಹಾಕುತ್ತಾರೆ, ಮುಖಕ್ಕೆ ಅನೇಕ ರೀತಿಯ ಮಸಾಜ್, ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ. ಅದಕ್ಕಾಗಿಯೇ ಅನೇಕ ರೀತಿಯ ಸೌಂದರ್ಯ ವರ್ಧಕಗಳು, ಸರ್ಜರಿಗಳು ಕೂಡ ಇವೆ. ಆದರೆ ಇದ್ಯಾವುದರ ಹಂಗಿಲ್ಲದೇ ಸಹಜ ಸೌಂದರ್ಯ ಹೊಂದಿರುವವರು ತೀರ ವಿರಳ. ಅಂತವರಲ್ಲಿ…

Read More

ಬೆಂಗಳೂರು: ಮೆಟ್ರೋ ಬೆಂಗಳೂರು ಜನರ ಸಂಚಾರಿ ವ್ಯವಸ್ಥೆಯ ಜೀವನಾಡಿ.ಮೆಟ್ರೋ ಸ್ಟೇಷನ್ನಲ್ಲಿ ಟೈಟ್ ಸೆಕ್ಯೂರಿಟಿ ಇರುತ್ತೆ. ಇಂತಹ ಮೆಟ್ರೋ ನಿಲ್ದಾಣದಲ್ಲೇ ಪದೇ ಪದೇ ಸೂಸೈಟ್ ದುರಂತಗಳು ನಡೆಯುತ್ತಿವೆ.750 ಹೈವೋಲ್ಟೇಜ್ ಇದೆ ಅಂತ ಗೊತ್ತಿದ್ರೂ ಜನ ನಿರ್ಲಕ್ಷ್ಯ ತೋರ್ತಿದ್ದಾರೆ. ಇಷ್ಟೇಲ್ಲಾ ಅದ್ಮೇಲೆ ಕೊನೆಗೂ ಎಚ್ಚೆತ್ತ BMRCL ಹೊಸ ಪ್ಲಾನ್ ಒಂದನ್ನ ರೂಪಿಸಿದೆ. ಈ ಹಿಂದೆ ಮಾಡಿದ ದೊಡ್ಡ ತಪ್ಪು ಸರಿಪಡಿಸಿಕೊಳ್ಬೇಕಂತ ಅಂತ ನಿಲ್ದಾಣಗಳಲ್ಲಿ ಕೋಟಿ ಕೋಟಿ ಸುರಿದು ಸೇಫ್ಟಿ ಮಾಡಲು ಮುಂದಾಗಿದೆ ಒಂದ್ಕಡೆ ಫುಲ್ ರಷ್…ಮೆಟ್ರೋ ಇಳಿಯೋಕೆ ಹತ್ತೋಕೆ ತಿಕ್ಕಾಟ ನೂಕಾಟ…ಜನ್ರನ್ನ ನಿಯಂತ್ರಿಸೋಕೆ ಹರಸಾಹಸ ಪಡ್ತಿರೋ ಸೆಕ್ಯುರಿಟಿ ಸಿಬ್ಬಂದಿ.. ಇದು ಮೆಟ್ರೋ ನಿರ್ಮಾಣ ವೇಳೆ ನಮ್ಮ ಮೆಟ್ರೋ ನಿಗಮ ಮಾಡಿದ ಕೊಂಚ ಎಡವಟ್ಟಿನ ಪರಿಣಾಮ..ಅಂದು ನಮ್ಮಲ್ಲಿಗೇನು ಸ್ಕ್ರೀನ್ ಡೋರ್ ಬೇಡ ಅಂತ ತೀರ್ಮಾನಿಸಿದ್ದ ಮೆಟ್ರೋ ಹಾಗೆ ಎಲ್ಲೋ ಲೈನ್ ಎಳೆದು ಸೆಕ್ಯುರಿಟಿ ನಿಲ್ಲಿಸಿ ಜನ್ರ ನಿಯಂತ್ರಣಕ್ಕೆ ಮುಂದಾಗಿತ್ತು. ಆದ್ರೆ ಈಗ ಆ ತಪ್ಪಿನ ಪರಿಣಾಮ ರಷ್ ಆದ ವೇಳೆ ಜನ್ರನ್ನ ನಿಯಂತ್ರಿಸೋಕೆ ಮೆಟ್ರೋಗೆ ಕಷ್ಟವಾಗ್ತಿದೆ.…

Read More

ಧಾರವಾಡ: ಕೊಳಚೆ ಅಭಿವೃದ್ಧಿ ನಿಗಮದಲ್ಲಿ ತಾಂತ್ರಿಕ ನಿರ್ದೇಶಕರಾಗಿರುವ “ಶ್ರೀ ಮಾರುತಿ ಲಂಬಾಣಿ” ಇಂಜಿನಿಯರ್ ವ್ಯಾಸಂಗ ಮಾಡದ “ಫಣಿರಾಜ್” ಎಂಬ ವ್ಯಕ್ತಿಯಿಂದ 28 ಲಕ್ಷ ಪಡೆದು ಇಂಜಿನಿಯರ್ ಆಗಿ ನೇಮಕ ಮಾಡಿದ ಆರೋಪಕ್ಕೆ ಆಗ್ರಹಿಸಿ ಪ್ರತಿಭಟನೆ ಧಾರವಾಡ ಕೊಳಚೆ ಅಭಿವೃದ್ಧಿ ನಿಗಮದ ಮುಂಬಾಗ ಬೃಹತ್ ಪ್ರತಿಭಟನೆ ಮಾತನಾಡಿದ ರಾಘವೇಂದ್ರ ಎಸ್, ಆರ್ ರಾಜ್ಯ ಅಧ್ಯಕ್ಷರು ಭಾರತ ದೇಶದಲ್ಲಿ ಆಡಳಿತ ಪಾರದರ್ಶಕತೆ ತರಲು ಸಂವಿಧಾನದ ಮೂಲಕ ರಚನೆ ಯಾಗಿದ್ದು ಆದರೆ ಅದು ನೆಪ ಮಾತ್ರಕ್ಕೆ ಪುಸ್ತಕ, ಕಾಯ್ದೆ, ಕಾನೂನು ಮತ್ತು ಇನ್ನಿತರೆ ದಾಖಲೆಗಳಿಗೆ ಮಾತ್ರ ಸೀಮಿತ ಎಂಬುವ ರೀತಿಯಲ್ಲಿ ಕೆಲವು ಸರ್ಕಾರಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಇಂಥವರ ಸಾಲಿಗೆ ಸೇರಿದ ಒಬ್ಬ ಸರ್ಕಾರಿ ಅಧಿಕಾರಿ ಧಾರವಾಡದ ಕೊಳಚೆ ಅಭಿವೃದ್ಧಿ ನಿಗಮದಲ್ಲಿ ತಾಂತ್ರಿಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ‘ಶ್ರೀ ಮಾರುತಿ ಲಂಬಾಣಿ” ಎಂಬ ಭ್ರಷ್ಟ ಲಂಚಬಾಕನು ಇಂಜಿನಿಯರ್ ವ್ಯಾಸಂಗ ಮಾಡದ ” ಫಣಿರಾಜ್” ಎಂಬ ವ್ಯಕ್ತಿಯಿಂದ 28 ಲಕ್ಷ ಪಡೆದು ಇಂಜಿನಿಯ‌ರ್ ಆಗಿ ನೇಮಕ ಮಾಡಿ, 50…

Read More

ಬೆಂಗಳೂರು: ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರಿಗೆ  ಜೈಲಿನಿಂದ ಬಿಡುಗಡೆಯ ಭಾಗ್ಯ ಸಿಗುವುದೇ ತುಂಬಾ ಕಷ್ಟ ಆಗಿ ಬಿಟ್ಟಿದೆ. ಒಂದು ಕಡೆ ಜಾಮೂನು ಮಂಜೂರಾಗಿ ಹೊರಬರುತ್ತಿದ್ದಂತೆ ಮತ್ತೊಂದು ಕಡೆ ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ . ನಾರಾಯಣಗೌಡ ಅವರಿಗೆಸಂಕಷ್ಟಗಳು ಎದುರಾಗುತ್ತಲೇ ಇವೆ. ಜಾಮೀನು ಪಡೆದುಕೊಂಡು ಜೈಲಿನಿಂದ ಆಚೆ ಬರುತ್ತಿದ್ದಂತೆಯೇ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಎರಡು ಪ್ರಕರಣಗಳಲ್ಲಿ ನಾರಾಯಣಗೌಡ ಅವರು ಜಾಮೀನು ಪಡೆದುಕೊಂಡು  ಜೈಲಿನಿಂದ ಹೊರಬರುತ್ತಿದ್ದಂತೆಯೇ ಇದೀಗ ಹಲಸೂರು ಗೇಟ್​ ಠಾಣೆ ಪೊಲೀಸರು ನಾರಾಯಣಗೌಡನನ್ನು ಮತ್ತೆ ವಶಕ್ಕೆ ಪಡೆದುಕೊಂಡಿದ್ದಾರೆ. 2020 ರಲ್ಲಿ ದಾಖಲಾಗಿದ್ದ ಪ್ರಕರಣ ಕೇಸ್‌ ಆಗಿದ್ದು  ಕೊರೊನಾ ಅವಧಿಯಲ್ಲಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದ ನಾರಾಯಣಗೌಡ ಹಾಗೆ ಕೊರೊನಾ ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ NDMA ಅಡಿಯಲ್ಲಿ ಪ್ರಕರಣ ದಾಖಲಿಸಿದ್ದ ಪೊಲೀಸರು.

Read More

ಹುಬ್ಬಳ್ಳಿ: ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಗಳಿಸಬಹುದೆಂದು ನಂಬಿಸಿದ ಅಪರಿಚಿತರು, ಇಲ್ಲಿಯ ಭವಾನಿ ನಗರದ ಮಹಿಳೆಯೊಬ್ಬರಿಂದ ಬರೋಬ್ಬರಿ 32.11 ಲಕ್ಷ ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ವಾಟ್ಸ್‌ಆ್ಯಪ್‌ನಲ್ಲಿ ಮಹಿಳೆಯನ್ನು ಸಂಪರ್ಕಿಸಿದ ಅಪರಿಚಿತರು, ಲಾಭ ಗಳಿಸುವುದಕ್ಕೆ ಸಂಬಂಧಿಸಿದಂತೆ ವಾಟ್ಸ್ ಆ್ಯಪ್‌ಗೆ ಟೆಲಿಗ್ರಾಂ ಲಿಂಕ್ ನಂತರ ಮಾಹಿತಿ ಪಡೆದುಕೊಂಡಿದ್ದಾರೆ. ವಿವಿಧ 11 ಬ್ಯಾಂಕ್ ಖಾತೆಗಳಿಂದ 32,11,659 ರೂ. ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಹುಬ್ಬಳ್ಳಿ: ಕಲಘಟಗಿ ತಾಲೂಕಿನಲ್ಲಿನ ದನಕರುಗಳಿಗೆ ಮೇವು ಒದಗಿಸಲು ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ಅವರಿಗೆ ಮನವಿ ಸಲ್ಲಿಸಿದರು. ಕಲಘಟಗಿ ತಾಲೂಕನ್ನು ಬರಪೀಡಿತವೆಂದು ಘೋಷಿಸಿ, ಮೂರು ತಿಂಗಳು ಕಳೆಯುತ್ತ ಬಂದರೂ ಬರ ಪರಿಹಾರ ರೈತರ ಕೈ ಸೇರಿಲ್ಲ. ಮುಂಗಾರು ಹಂಗಾಮಿನಲ್ಲಿ ಸಮರ್ಪಕ ಮಳೆಯಾಗದೆ ನಿರೀಕ್ಷೆಯಂತೆ ಬೆಳೆ ಬಾರದಿರುವುದರಿಂದ ದನಕರುಗಳಿಗೆ ಮೇವಿನ ಅಭಾವ ಸೃಷ್ಟಿಯಾಗಿದೆ. ಆದ್ದರಿಂದ, ಸರ್ಕಾರ ಈ ಕೂಡಲೇ ಹೋಬಳಿ ಕೇಂದ್ರದಲ್ಲಿ ಮೇವು ಬ್ಯಾಂಕ್ ಸ್ಥಾಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ತಾಲೂಕು ಅಧ್ಯಕ್ಷ ಅಲ್ಲಾವುದ್ದೀನ್ ಅಡ್ಲಿ, ಉಪಾಧ್ಯಕ್ಷ ಈಶ್ವರ ನಾಡಗೇರ, ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ, ಜಿಲ್ಲಾ ಉಪಾಧ್ಯಕ್ಷ ಹನುಮೇಶ ಹುಡೇದ, ಉಳವಪ್ಪ ಬಳಿಗೇರ, ಸಂತೋಷ ಘೋರ್ಪಡೆ, ಮಹಾವೀರ ಧೂಳಿಕೊಪ್ಪ , ದೇವರಾಜ ಮಂಗಳಗಟ್ಟಿ, ಹನುಮಂತಪ್ಪ ಕೊಪ್ಪದ, ಶಿವಪ್ಪ ಕೋಟಿ, ಗಂಗಯ್ಯ ಹಿರೇಮಠ ಇದ್ದರು.

Read More

ದೆಹಲಿ: ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಮಹತ್ವದ ರಾಮಮಂದಿರ (Ayodhya Ram Mandir) ಪ್ರಾಣಪ್ರತಿಷ್ಠಾಪನೆ ಸಮಾರಂಭಕ್ಕಾಗಿ ಭಾರತ ಮಾತ್ರವಲ್ಲದೆ ಜಗತ್ತು ಎದುರು ನೋಡುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿ (Narendra Modi) ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದು ಈ ಸಂದರ್ಭದಲ್ಲಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ವಿಶೇಷ ಸಂದೇಶವನ್ನು ನೀಡಿದ್ದಾರೆ. ರಾಮಮಂದಿರ ನಿರ್ಮಾಣವು ಕೋಟಿ ಕೋಟಿ ರಾಮಭಕ್ತರ ನಂಬಿಕೆ ಮತ್ತು ತ್ಯಾಗದ ಆಚರಣೆಯಾಗಿದೆ, ಲೋಕಸಭಾ ಚುನಾವಣೆಯೂ ಅನತಿ ದೂರದಲ್ಲಿ ಇರುವುದರಿಂದ ಎಲ್ಲ ಸಚಿವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹಾಜರಿರಬೇಕು, ಯಾರು ಯಾವುದೇ ವಿವಾದಾತ್ಮಕ ಹೇಳಿಕೆಗಳು ನೀಡದಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ತಮ್ಮ ಸಹೋದ್ಯೋಗಿಗಳಿಗೆ ಹೇಳಿದ್ದಾರೆ. ಪ್ರತಿಪಕ್ಷಗಳ ಹೇಳಿಕೆಗಳಿಂದ ಯಾರೂ ಪ್ರಚೋದನೆಗೆ ಒಳಗಾಗಬಾರದು. ಅಂತಹ ಯಾವುದೇ ಗಿಮಿಕ್‍ಗೆ ಸಿಕ್ಕಿಹಾಕಿಕೊಳ್ಳಬೇಡಿ, ಬಹುನಿರೀಕ್ಷಿತ ಸಮಾರಂಭದ ಪೂರ್ವದಲ್ಲಿ ಕೋಮು ಘರ್ಷಣೆಗಳು ಭುಗಿಲೆದ್ದಿರುವ ಬಗ್ಗೆ ಹಲವಾರು ವಿರೋಧ ಪಕ್ಷದ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ. ಇಂತಹ ಹೇಳಿಕೆಗೆ ಪ್ರತಿಕ್ರಿಯಿಸಿಬೇಡಿ ಎಂದು…

Read More

ಬೆಂಗಳೂರು :ನಾವು ಸತ್ಯ ಹೇಳಿ ರಾಜಕೀಯ ಲಾಭವನ್ನು ಪಡೆಯುವ ಪ್ರಯತ್ನ ಮಾಡಬೇಕು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರ ಸಭೆಯಲ್ಲಿ ಅವರು ಮಾತನಾಡಿದರು. ಗ್ಯಾರಂಟಿಗಳನ್ನು ಅಪಹಾಸ್ಯ, ಅವಹೇಳನ ಮಾಡಿದವರೇ ಈಗ ಮೋದಿ ಗ್ಯಾರಂಟಿ ಎಂದು ಶುರುಮಾಡಿದ್ದಾರೆ. ನಾವು ಜನರಿಗೆ ಸತ್ಯವನ್ನು ಹೇಳಬೇಕು. ಭಾರತದ ಇತಿಹಾಸದಲ್ಲಿ ಯಾವ ಸರ್ಕಾರವೂ ಈ ರೀತಿಯ ಗ್ಯಾರಂಟಿಗಳನ್ನು ಕಾರ್ಯಕ್ರಮಗಳನ್ನು ಜಾರಿ ಮಾಡಿಲ್ಲ. ಇದರಿಂದ ಬಡವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬಲು ಸಾಧ್ಯವಾಗುತ್ತದೆ. ದಲಿತರು , ಹಿಂದುಳಿದವರು , ಮಹಿಳೆಯರಿಗೆ ಅನುಕೂಲವಾಗಲಿದೆ. ಶಕ್ತಿ, ಅನ್ನಭಾಗ್ಯ, ಗೃಹ ಜ್ಯೋತಿ, ಗೃಹಲಕ್ಷ್ಮೀ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆ ಎಂದರು. ನಮ್ಮವರೇ ಅಪಪ್ರಚಾರ ಮಾಡುವುದನ್ನು ಬಿಡಬೇಕು. ಸರ್ಕಾರದಲ್ಲಿ ಹಣವಿಲ್ಲ ಎನ್ನುವ ಅಪಪ್ರಚಾರವನ್ನು ಸೋಲಿಸಿ. ಇಷ್ಟು ದೊಡ್ಡ ದೊಡ್ಡ ಕಾರ್ಯಕ್ರಮಗಳು ಹಣವಿಲ್ಲದೆ ನಡೆಯುತ್ತಿದೆಯೇ ಎಂದು ಪ್ರಶ್ನಿಸಿದ ಸಿಎಂ, ನಮ್ಮವರೇ ಬಿಜೆಪಿಯವರ ಅಪಪ್ರಚಾರವನ್ನು ಸೋಲಿಸಲು ಮುಂದಾಗಬೇಕು.…

Read More

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ  ಹೊಸ ವರ್ಷ ಮಾಡಲು ಎಲ್ಲರು ಸಜ್ಜಾಗಿದ್ದರು, ಅವರದ್ದೇ ಆದ ಶೈಲಿಯಲ್ಲಿ ಪಾರ್ಟಿ ಮಾಡಲು ಕೂಡ ಜನ ರೆಡಿ ಇದ್ದರು ಆದರೆ ಇಲ್ಲೊಬ್ಬ  ನ್ಯೂ ಇಯರ್ ಪಾರ್ಟಿ ಮಾಡಲು ಹಣಕ್ಕಾಗಿ ವ್ಯಕ್ತಿಯನ್ನೇ ಕಿಡ್ನಾಪ್‌ ಮಾಡಿ ಕೊಲೆ ಮಾಡರುವ ಘಟನೆ ನಡೆದಿದೆ. ಗುರುಸಿದ್ದಪ್ಪ, ಕೊಲೆಯಾದ ವ್ಯಕ್ತಿಯಾಗಿದ್ದು ಸಂಜಯ್ ,ಆನಂದ್ ಎಂಬುವರಿಂದ ಕೊಲೆಯಾಗಿದ್ದು  ಇದೀಗ  ಜ್ಞಾನ ಭಾರತಿ ಠಾಣೆ ಪೊಲೀಸರಿಂದ ಆರೋಪಿಗಳನ್ನ ಬಂಧಿಸಿದ್ದಾರೆ. ಆರೋಪಿಗಳಿಗೆ ಪರಿಚಿತನಾಗಿದ್ದ ಗುರು ಸಿದ್ದಪ್ಪ ಡಿಸೆಂಬರ್ 30 ರಂದು ಕಿಡ್ನಾಫ್ ಮಾಡಿ ಗುರುಸಿದ್ದಪ್ಪನ ಹೆಂಡತಿಯಿಂದ ಐದು ಲಕ್ಷ ಪಡೆದಿದ್ದರು ನಂತರ ಗುರು ಸಿದ್ದಪ್ಪ ಪೊಲೀಸರಿಗೆ ಮಾಹಿತಿ ನೀಡಬಹುದು ಎಂದು ಹಲ್ಲೆ ಮಾಡಿ ಕೊಲೆ ಮಾಡಿದ್ದ ಆರೋಪಿಗಳು ಆ ನಂತರ ನ್ಯೂ ಇಯರ್ ಪಾರ್ಟಿ ಮಾಡಲು ಗೋವಾಗೆ ಹೋಗಿದ್ದ ಆರೋಪಿಗಳು.

Read More

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು ಕನ್ನಡಿಗರಿಗೆ ಹೆಜ್ಜೆ ಹೆಜ್ಜೆಗೂ ಅನ್ಯಾಯ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೇಸರಿಸಿದ್ದಾರೆ. ನಗರದಲ್ಲಿ ಮಾತನಾಡಿದ  ಅವರು, ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪಾಲ್ಗೊಳ್ಳಬೇಕಿದ್ದ ರಾಜ್ಯದ ಸ್ಥಬ್ದಚಿತ್ರಕ್ಕೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ. ಈ ಮೂಲಕ ಕೇಂದ್ರ ಸರ್ಕಾರವು ಮತ್ತೊಮ್ಮೆ ಒಕ್ಕೂಟ ವ್ಯವಸ್ಥೆಗೆ ಮಸಿ ಬಳಿದಿದೆ ಎಂದು ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಕನ್ನಡಿಗರಿಗೆ ಹೆಜ್ಜೆ ಹೆಜ್ಜೆಗೂ ಅನ್ಯಾಯ ಮಾಡುತ್ತಿದೆ. ಬರ ಪರಿಹಾರ ನೀಡದೆ ಬರಿಗೈನಲ್ಲಿ ವಾಪಸ್‌ ಕಳಿಸಿದರು. ತೆರಿಗೆ ಪಾಲಿನಲ್ಲೂ ಅನ್ಯಾಯ, ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡದೆ ಅನ್ಯಾಯ. ಇನ್ನೂ ಅದೆಷ್ಟು ಅನ್ಯಾಯವನ್ನು ಕನ್ನಡಿಗರು ಅವಡು ಕಚ್ಚಿಕೊಂಡು ಸಹಿಸಿಕೊಳ್ಳಬೇಕು? ಎಂದು ಪ್ರಶ್ನಿಸಿದ್ದಾರೆ. ನವ ಕರ್ನಾಟಕದ ನಿರ್ಮಾತೃ, ಸಾಮಾಜಿಕ ನ್ಯಾಯದ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರನ್ನು ದೇಶಕ್ಕೆ ಪರಿಚಯಿಸುವ ಉದ್ದೇಶವಿತ್ತು. ಅಲ್ಲದೆ, ಬ್ರ್ಯಾಂಡ್‌ ಬೆಂಗಳೂರನ್ನು ವಿಶ್ವವ್ಯಾಪಿ ಪ್ರಸಿದ್ಧಗೊಳಿಸುವ ಹಾಗೂ ಕಿತ್ತೂರು ಚೆನ್ನಮ್ಮಳ ಕೀರ್ತಿಯನ್ನು ಸ್ಥಬ್ದಚಿತ್ರಗಳ ಮೂಲಕ…

Read More