ಜ್ಯೋತಿಷ್ಯ ಶಾಸ್ತ್ರದ ಪ್ರಕಾರ… ಕೆಲವು ವಸ್ತುಗಳಳನ್ನು ಕೆಲವು ಸಮಯದಲ್ಲಿ ಖರೀದಿಸಬಾರದು. ಅವುಗಳಲ್ಲಿ ಒಂದು ಬೂಟ್, ಚಪ್ಪಲಿ. ಪ್ರತಿಯೊಬ್ಬರೂ ತಮ್ಮ ಸೌಕರ್ಯದ ಅವಶ್ಯಕತೆಗೆ ಅನುಗುಣವಾಗಿ ಪಾದರಕ್ಷೆ ಮತ್ತು ಚಪ್ಪಲಿಗಳನ್ನು ಖರೀದಿಸುತ್ತಾರೆ, ಆದರೆ ಶಾಸ್ತ್ರದ ಪ್ರಕಾರ ಅವುಗಳನ್ನು ಅಮವಾಸ್ಯೆ, ಮಂಗಳವಾರ, ಶನಿವಾರ, ಗ್ರಹಣ ದಿನದಂದು ಖರೀದಿಸಬಾರದು. ಈ ರೀತಿ ಮಾಡಿದರೆ ದುರಾದೃಷ್ಟ ಎನ್ನುತ್ತಾರೆ ವಿದ್ವಾಂಸರು. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿಯು ಪಾದಗಳಿಗೆ ಸಂಬಂಧಿಸಿದೆ..ಆದ್ದರಿಂದ ಶನಿವಾರದಂದು ಶೂ ಮತ್ತು ಚಪ್ಪಲಿಗಳನ್ನು ಖರೀದಿಸಬೇಡಿ ಎಂದು ಹೇಳಲಾಗುತ್ತದೆ. ಶನಿವಾರದಂದು ಶೂ ಮತ್ತು ಬೂಟುಗಳನ್ನು ಖರೀದಿಸುವುದು ವ್ಯಕ್ತಿಗೆ ಶನಿ ದೋಷವನ್ನು ತರುತ್ತದೆ. ಇದು ಶನಿ ದೇವರನ್ನು ಕೋಪಗೊಳಿಸುತ್ತದೆ ಮತ್ತು ಮನೆಯಲ್ಲಿ ದುಃಖ ಮತ್ತು ಬಡತನವನ್ನು ತರುತ್ತದೆ. ವಾಸ್ತುಶಾಸ್ತ್ರವು ಹೊಸ ಪಾದರಕ್ಷೆಗಳನ್ನು ಖರೀದಿಸಲು ಮತ್ತು ಧರಿಸಲು ಸರಿಯಾದ ದಿನದ ಬಗ್ಗೆ ಹೇಳುತ್ತದೆ. ಶುಕ್ರವಾರ ಹೊಸ ಬೂಟುಗಳನ್ನು ಖರೀದಿಸುವುದು ಮತ್ತು ಶುಕ್ರವಾರ ಹೊಸ ಬೂಟುಗಳನ್ನು ಧರಿಸುವುದು ಉತ್ತಮ ಎಂದು ಹೇಳಲಾಗುತ್ತದೆ. ಹಳೆಯ ಅಥವಾ ಬಳಸದ ಪಾದರಕ್ಷೆಗಳನ್ನು ಎಸೆಯಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ನಂಬಿಕೆಯ…
Author: AIN Author
ಅಥಣಿ:- ತಾಲೂಕಿನ ಸಂಬರಗಿ ಗ್ರಾಮದಲ್ಲಿ ಸ್ಕೂಟಿ ಕೀ ವಿಚಾರಕ್ಕೆ ಯುವಕನೊಬ್ಬ ತನ್ನ ಸ್ವಂತ ದೊಡ್ಡಮ್ಮನನ್ನೆ ಬಲಿ ತೆಗೆದುಕೊಂಡ ಅಮಾನವೀಯ ಘಟನೆ ನಡೆದಿದೆ. ನಿನ್ನೆ ರಾತ್ರಿ 11: ಗಂಟೆ ಸುಮಾರಿಗೆ ಹೊಸ ಸ್ಕೂಟಿ ವಿಚಾರವಾಗಿ ಸಂಬಂಧಿಯಿಂದಲೇ ಮಹಿಳೆ ದಾರುಣ ಸಾವು ಗ್ರಾಮದಲ್ಲಿ ಆತಂಕ ಹುಟ್ಟಿಸಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಸಂಶಯಿತ ಆರೋಪಿ ಸಂಜಯ ಸಾವರ್ಡೇಕರ್ ಕುಡಿದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ದೊಡ್ಡಮ್ಮನನ್ನೆ ರಾಡ್ ನಿಂದ ಹೊಡೆದು ಹತ್ಯ ಮಾಡಿದ್ದಾನೆ ಎಂದು ಪ್ರತ್ಯಕ್ಷದರ್ಶಿ ಸಾವಿಗೆಡಾದ ಮಹಿಳೆಯ ಸೊಸೆ ತಿಳಿಸಿದ್ದಾರೆ. ಶ್ರೀಮತಿ ಮಂಗಲ ತುಕಾರಾಮ ಸಾವರ್ಡೆಕರ (56) ಸೋಮವಾರ ರಾತ್ರಿ ಬಾಹಿರ್ದಸೆಗೆ ಹೋಗಿ ಬರುತ್ತಿದ್ದಾಗ ಸಂಶಯಿತ ಆರೋಪಿ ಸಂಜಯ ರಾಜಾರಾಮ ಸಾವರ್ಡೆಕರ ಇವನು ಕಬ್ಬಣದ ರಾಡ್ (ಸಲಾಕೆ) ಕೈಯಲ್ಲಿ ಹಿಡಿದು ಮೃತ ಮಹಿಳೆ ಮಂಗಲ ಈತಳಿಗೆ ಹೊಡೆದಿದ್ದಾನೆ ಮಂಗಲನ ಮಗ ಚಂದ್ರಕಾಂತ ಈತನು ಮನೆಯಲ್ಲಿ ಸ್ಕೂಟಿ ತಂದು ತನ್ನ ಮಡದಿಗೆ ಕಲಿಸುತ್ತಿದ್ದನು ಆ ನಂತರ ಸೊಸೆ ಸುಜಾತ ಸೆಡ್ಡಿನಲ್ಲಿ ಸ್ಕೂಟಿ ಹಚ್ಚಿ…
ಸಾನ್ಮರಿನೋ: ದೇಶದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವುದನ್ನು ಕೇಳಿದ್ದೇವೆ. ಆದ್ರೆ ಜನರಿಗಿಂತ ಹೆಚ್ಚು ವಾಹನಗಳನ್ನು ಹೊಂದಿರುವುದನ್ನು ಕೇಳಿರಲ್ಲಿಕ್ಕಿಲ್ಲ. ಅಂತಹ ಪಟ್ಟಿಗೆ ಸೇರಿದೆ ಸಾನ್ ಮರಿನೋ ರಾಷ್ಟ್ರ. ಹೌದು. ವಿಶ್ವದ ಅತಿ ಪುಟ್ಟ ಸ್ವತಂತ್ರ ರಾಷ್ಟ್ರಗಳಲ್ಲಿ ಒಂದಾದ ಈ ದೇಶದಲ್ಲಿ ಜನರು ಕಡಿಮೆ. ವಾಹನಗಳು ಜಾಸ್ತಿ ಇವೆ. ಈ ರಾಷ್ಟ್ರದಲ್ಲಿ ಸುಮಾರು 34 ಸಾವಿರ ಜನರಿದ್ದಾರೆ. ಅಂಕಿ ಅಂಶಗಳ ಪ್ರಕಾರ ಈ ರಾಷ್ಟ್ರದ ಸರಾಸರಿ 1 ಸಾವಿರ ಜನರಿಗೆ 1,263 ವಾಹನಗಳಿವೆ. ಮಾತ್ರವಲ್ಲದೇ ಈ ದೇಶ ಒಟ್ಟು ಜಿಡಿಪಿಯಲ್ಲೂ ಶ್ರೀಮಂತವಾಗಿದೆ. ಸಾನ್ ಮರಿನೋ ಹಾಗೂ ವಾಟಿಕನ್ ಸಿಟಿ ಈ ಎರಡೂ ರಾಷ್ಟ್ರಗಳು ಸಂಪೂರ್ಣವಾಗಿ ಇಟಲಿಯ ಒಳಗೆ ಹುದುಗಿಕೊಂಡಿವೆ. ಇನ್ನು ಮೂರನೇ ರಾಷ್ಟ್ರವಾದ ಲೆಸ್ತೋ ಸಂಪೂರ್ಣವಾಗಿ ದಕ್ಷಿಣ ಆಫ್ರಿಕಾದಿಂದ ಸುತ್ತುವರಿದಿದೆ.
ಕನ್ನಡದ ಹೆಸರಾಂತ ನಟ ದರ್ಶನ್ ಸದ್ಯ ದುಬೈನಲ್ಲಿದ್ದಾರೆ. ಅವರ ನಟನೆಯ ಕಾಟೇರ ಸಿನಿಮಾ ದುಬೈನಲ್ಲೂ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನಲ್ಲಿ ದರ್ಶನ್ ಕುರಿತಂತೆ ನಾನಾ ಬೆಳವಣಿಗೆಗಳು ನಡೆಯುತ್ತಿದೆ. ಎರಡನ್ನೂ ಮಿಕ್ಸ್ ಮಾಡಿ ಎಕ್ಸ್ (ಟ್ವೀಟ್) ವೊಂದನ್ನು ಮಾಡಿದ್ದಾರೆ ದರ್ಶನ್. ‘ಕಾಟೇರನ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಪ್ರೀತಿಯ ಸೆಲೆಬ್ರಿಟಿಸ್ ಹಾಗೂ ನಾಡಿನ ಜನತೆಗೆ ಹೃದಯಪೂರ್ವಕ ವಂದನೆಗಳು. ದುಬೈನಲ್ಲಿ ನೀವು ನೀಡಿದ ಪ್ರೀತಿಗೆ ಹಾಗೂ ಇತರ ದೇಶಗಳಲ್ಲಿಯೂ ಸಹ ಜನರು ನೀಡುತ್ತಿರುವ ಅಭಿಮಾನಕ್ಕೆ ಆಭಾರಿಯಾಗಿದ್ದೇವೆ. ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು: ನೀವು ಏನೇ ಮಾಡಿದರೂ ನಾನು ಕೋಪ ಮಾಡ್ಕೊಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ. ಕಾಲಾಯ ತಸ್ಮಯ್ ನಮಃ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ದೇಶ ವಿದೇಶಗಳಲ್ಲಿ ಕಾಟೇರ ಗೆಲುವು ಸಾಧಿಸುತ್ತಿದ್ದರೆ, ದರ್ಶನ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಅತೀ ಶೀಘ್ರದಲ್ಲೇ ಕಾಟೇರ ಸಿನಿಮಾವನ್ನು ಕಿಚ್ಚ ಸುದೀಪ್ (Sudeep) ನೋಡಲಿದ್ದಾರಂತೆ. ಸೆಲೆಬ್ರಿಟಿ ಶೋಗೆ ಬರುವಂತೆ ಸುದೀಪ್ ಅವರಿಗೆ ಕಾಟೇರ…
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿಯಾಗಿರುವ ಅಕ್ಷತಾ ಕಳೆದ ವರ್ಷ ಕಂಪನಿ ಯಲ್ಲಿ 3.89 ಕೋಟಿ ಷೇರುಗಳನ್ನು ಹೊಂದಿದ್ದರು. ಪ್ರತಿ ಷೇರಿನ ಮೇಲೆ ಅವರು 17.50ರೂ. ಗಳಿಸಲಿದ್ದು, ಜೂನ್ 2ರ ವೇಳೆಗೆ 68.17 ಕೋಟಿ ರೂ. ಗಳಿಸಲಿದ್ದಾರೆ. ಇದಕ್ಕಾಗಿ ಅವರು ತನ್ನ ಷೇರುಗಳನ್ನು ಹಿಡಿದಿಟ್ಟುಕೊಳ್ಳುವುದು ಅಗತ್ಯ. ಕಳೆದ ವರ್ಷ ಅಕ್ಷತಾ ಮೂರ್ತಿ ಗಳಿಸಿದ ಡಿವಿಡೆಂಟ್ ಸೇರಿಸಿದರೆ ಅವರ ಒಟ್ಟು ಆದಾಯ 132.4 ಕೋಟಿ ರೂ. ಕಳೆದ ಅಕ್ಟೋಬರ್ ನಲ್ಲಿ ಇನ್ಫೋಸಿಸ್ ಪ್ರತಿ ಷೇರಿನ ಮೇಲೆ 16.50ರೂ. ಮಧ್ಯಂತರ ಡಿವಿಡೆಂಡ್ ಘೋಷಿಸಿತ್ತು. ಇನ್ಫೋಸಿಸ್ ಜನವರಿ -ಮಾರ್ಚ್ ತ್ರೈಮಾಸಿಕದ ಹಣಕಾಸು ಫಲಿತಾಂಶ ಪ್ರಕಟಿಸಿತ್ತು. 6,128 ಕೋಟಿ ರೂ. ಲಾಭ ಗಳಿಸಿದೆ. ಹಾಗೆಯೇ ಪ್ರತಿ ಷೇರಿಗೆ 17.50ರೂ. ಡಿವಿಡೆಂಡ್ ಘೋಷಿಸಿತ್ತು.ಕಳೆದ ವರ್ಷ ಮೂರ್ತಿ ಪ್ರತಿ ಷೇರಿನ ಮೇಲೆ 31ರೂ. ಡಿವಿಡೆಂಡ್ ಪಡೆದಿದ್ದರು. ಇದರಿಂದ ಆಕೆಗೆ 120.76 ಕೋಟಿ ರೂ. ಸಿಕ್ಕಿತ್ತು. ಇನ್ಫೋಸಿಸ್ ನಲ್ಲಿರುವ ಆಕೆಯ ಷೇರುಗಳ ಮೌಲ್ಯ 5400 ಕೋಟಿ ರೂ. ಅಕ್ಷತಾ ಮೂರ್ತಿ…
ಆಹಾರ ತಯಾರಿಸಿ, ಉಳಿದ ಆಹಾರವನ್ನು ಫ್ರಿಡ್ಜ್ ನಲ್ಲಿಟ್ಟು, ಅದೇ ಆಹಾರವನ್ನು ಮತ್ತೆ ಬಿಸಿ ಮಾಡಿ ನಂತರ ಸೇವಿಸುವುದು ಇಂದಿನ ದಿನಗಳಲ್ಲಿ ಸಾಮಾನ್ಯ. ಆದರೆ, ಇದು ಆಹಾರವನ್ನು ನಿಜವಾಗಿಯೂ ವಿಷಯುಕ್ತವನ್ನಾಗಿ ಮಾಡುತ್ತದೆ! ಹೌದು, ಲ ಆಹಾರಗಳನ್ನು ಮತ್ತೆ ಮತ್ತೆ ಬಿಸಿಮಾಡಿ ತಿಂದರೆ, ಅದು ಆರೋಗ್ಯಕ್ಕೆ ಹಾನಿಕರವಾಗಿ ಮಾರ್ಪಡಾಗಬಹುದು. ಫ್ರಿಜ್ ನಲ್ಲಿ ಇಟ್ಟಿರುವ ಪ್ರತಿಯೊಂದು ಆಹಾರ ಪದಾರ್ಥವನ್ನು ಮತ್ತೆ ಬಿಸಿ ಮಾಡಿದ ನಂತರ ತಿನ್ನಲು ಯೋಗ್ಯವಾಗಿರುವುದಿಲ್ಲ ಎನ್ನುತ್ತಾರೆ ಆಹಾರ ತಜ್ಞರು. ಯಾಕೆಂದರೆ, ಈ ವಸ್ತುಗಳನ್ನು ಫ್ರಿಡ್ಜ್ ನಲ್ಲಿಟ್ಟು ಮತ್ತೆ ಬಿಸಿ ಮಾಡಿದರೆ, ಅದು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ ಎನ್ನಲಾಗಿದೆ. ಅಕ್ಕಿ: ಅಕ್ಕಿ ಎಲ್ಲರಿಗೂ ಒಂದು ಪ್ರಮುಖ ಆಹಾರವಾಗಿದ್ದು, ಇದನ್ನು ಪ್ರಪಂಚದಾದ್ಯಂತ ಎಲ್ಲಾ ಮನೆಗಳಲ್ಲಿ ಸುಲಭವಾಗಿ ಕಾಣಬಹುದು. ಆದರೆ ಹಸಿ ಅಕ್ಕಿಯಲ್ಲಿ ಬೀಜಕಗಳು ಇದ್ದು, ಅದು ಬೇಯಿಸಿದ ಬಳಿಕವೂ ಜೀವಂತವಾಗಿ ಉಳಿಯುವ ಬ್ಯಾಕ್ಟೀರಿಯಾಗಳಾಗಿ ಪರಿವರ್ತನೆ ಹೊಂದುತ್ತವೆ ಎಂದು ತಿಳಿದಿದೆಯೇ? ಹೌದು, ಈ ಬ್ಯಾಕ್ಟೀರಿಯಾಗಳು ಪ್ರಮುಖ ರೋಗಗಳನ್ನು ಉಂಟುಮಾಡಬಹುದು ಮತ್ತು ಅದಕ್ಕಾಗಿಯೇ ಯಾವಾಗಲೂ ಅನ್ನವನ್ನು ಮರುಬಿಸಿ ಮಾಡಬೇಡಿ ಎಂದು ಶಿಫಾರಸು…
ಸೂರ್ಯೋದಯ: 06:52, ಸೂರ್ಯಾಸ್ತ : 05:54 ಮಾರ್ಗಶಿರ ಮಾಸ , ಕೃಷ್ಣ ಪಕ್ಷ, ದಕ್ಷಿಣಾಯಣ , ಹೇಮಂತ ಋತು, ರಾಹು ಕಾಲ: 01:30 ನಿಂದ 03:00 ತನಕ ಯಮಗಂಡ: 06:00 ನಿಂದ 07:30 ತನಕ ಗುಳಿಕ ಕಾಲ: 09:00 ನಿಂದ 10:30 ತನಕ ಅಮೃತಕಾಲ: ಮ.1:15 ನಿಂದ ಮ.2:43 ತನಕ ಅಭಿಜಿತ್ ಮುಹುರ್ತ: ಮ.12:01 ನಿಂದ ಮ.12:45 ತನಕ ಜಾತಕ ಬರೆದು ತಿಳಿಸಲಾಗುವುದು, ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು. Mob. 93534 88403 ಮೇಷ ರಾಶಿ: ಕುಟುಂಬ ಸದಸ್ಯರಿಗೆ ವಿವಾಹಯೋಗಕ್ಕೆ ವಿಘ್ನಗಳು ಉಂಟಾಗಬಹುದು, ಉಪನ್ಯಾಸಕರಿಗೆ ಈ ವಾರದ ಒಳಗಡೆ ಒಂದು ಸಿಹಿಸುದ್ದಿ, ಮದುವೆ ಆಶಾಭಾವನೆ ಮನದಲ್ಲಿ ಮೂಡಲಿದೆ, ನಿಮಗೆ ಶತ್ರುಗಳ ಸಂಖ್ಯೆ ಹೆಚ್ಚಾಗಿದ್ದು ಭದ್ರತೆ ಅವಶ್ಯಕತೆ ಇದೆ, ವೃತ್ತಿ ಕ್ಷೇತ್ರದಲ್ಲಿ ವೈಫಲ್ಯ ಕಂಡು ಬರುವುದು, ಸಂಬಳಕ್ಕಾಗಿ ಮೆನೇಜರ್ ಜೊತೆ ಕಿರಿಕಿರಿ…
ಬೆಂಗಳೂರು:- ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಕ್ಕೆ ವ್ಯಾಪಕ ಸಿದ್ಧತೆಗಳು ನಡೆಯುತ್ತಿದ್ದು, ಇಡೀ ದೇಶ ಸಂಭ್ರಮಾಚರಣೆಯಲ್ಲಿ ತೊಡಗಿರುವಾಗ ಶ್ರೀರಾಮಚಂದ್ರ ಮಾಂಸಹಾರಿ ಎಂಬುದು ಸೇರಿದಂತೆ ವಿವಿಧ ರೀತಿಯಲ್ಲಿ ಅಪ ಪ್ರಚಾರ ಮಾಡಲಾಗ್ತಿದೆ. ಹೀಗಾಗಿ ಈ ಕೆಟ್ಟ ಉದ್ದೇಶವನ್ನ ಕೈಬಿಡಬೇಕು ಎಂದು ಉತ್ತರ ಪ್ರದೇಶದ ಆನಂದಧಾಮ್ ಪೀಠದ ಗುರೂಜಿ ರಿತೇಶ್ವರ್ ಅಸಮಧಾನ ಹೊರ ಹಾಕಿದ್ದಾರೆ. ರಾಮಮಂದಿರದ ನಂತರ ಕೃಷ್ಣಮಂದಿರ ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿದ್ದು, ಮುಂದಿನ 442 ದಿನಗಳಲ್ಲಿ ಮಥುರೆಯಲ್ಲಿ ಕೃಷ್ಣ ಮಂದಿರ ತಲೆ ಎತ್ತಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಹಲವು ಹಂತಗಳ ಚುನಾವಣೆಗಳು ನಿರಂತರವಾಗಿ ನಡೆಯತ್ತವೆ. ಇದೇ ರೀತಿ ಸದ್ಯದಲ್ಲಿಯೇ ಲೋಕಸಭಾ ಚುನಾವಣೆಯೂ ಎದುರಾಗಲಿದೆ. ಇದು ಕೂಡ ಉತ್ತಮ ಬೆಳವಣಿಗೆಯಲ್ಲವೇ?. ರಾಷ್ಟ್ರೀಯ ವಾದ, ಸಾಂಸ್ಕೃತಿಕ ಮೌಲ್ಯ ಮತ್ತು ರಾಷ್ಟ್ರೀಯ ಹಿತಾಸಕ್ತಿಯುಳ್ಳ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ತಪ್ಪೇನು?. ರಾಮಮಂದಿರ ಈ ದೇಶದ ಆತ್ಮ. ರಾಜಕೀಯ ಪಕ್ಷಗಳು ಯಾಕೆ ಚುನಾವಣೆಗೆ ಹೆದರಿಕೊಂಡಿವೆ. ರಾಮಮಂದಿರದಿಂದ ಉತ್ತರ ಪ್ರದೇಶದ ಆರ್ಥಿಕತೆಯಲ್ಲಿ…
ಬೆಂಗಳೂರು:- ಕಾಮನ್ ಮ್ಯಾನ್ ಗೆ ಮಾತ್ರವಲ್ಲ ಸಿಎಂ ಸಿದ್ದರಾಮಯ್ಯ ಅವರಿಗೂ ಕೂಡ ಟ್ರಾಫಿಕ್ ಬಿಸಿ ತಟ್ಟಿದೆ. ಟ್ರಾಫಿಕ್ ಜಾಮ್ ನಲ್ಲಿ ಸಿದ್ದರಾಮಯ್ಯ ಸಿಲುಕಿದ ದೃಶ್ಯ ಸೆರೆಯಾಗಿದೆ. ಗಾಲ್ಪ್ ಕೋರ್ಸ್ ರಸ್ತೆಯಲ್ಲಿ ನಿನ್ನೆ ರಾತ್ರಿ 7.45ರ ಸುಮಾರಿಗೆ ಟ್ರಾಫಿಕ್ ನಲ್ಲಿ ಸಿಎಂ ಸಿಲುಕಿದರು. ಸಿಎಂ ಟ್ರಾಫಿಕ್ ನಲ್ಲಿ ಸಿಲುಕಿದ್ದರ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಕೆಲವರು ಸಿಎಂ ಸಿಂಪ್ಲಿಸಿಟಿ ಎಂದು ಬಣ್ಣನೆ ಮಾಡಿದ್ದಾರೆ. ಇನ್ನೂ ಕೆಲವರು ಕಾಮನ್ ಮ್ಯಾನ್ ಕಷ್ಟ ಸಿಎಂಗೂ ಗೊತ್ತಾಗಲಿ ಎಂದು ಕಮೆಂಟ್ ಮಾಡಿದ್ದಾರೆ.
ಬೆಂಗಳೂರು:- ಕೋವಿಡ್ ಪಾಸಿಟಿವ್ ಇರುವವರ ಸಂಪರ್ಕದಲ್ಲಿದ್ದ ಹೈ ರಿಸ್ಕ್ ರೋಗಲಕ್ಷಣ ಹೊಂದಿರುವವರಿಗೆ, ಕಡ್ಡಾಯವಾಗಿ ಕೋವಿಡ್ ಟೆಸ್ಟ್ ನಡೆಸಲು ಕ್ಯಾಬಿನೆಟ್ ಉಪ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬೆಂಗಳೂರಿನ ವಿಧಾನ ಸೌಧದಲ್ಲಿ ಇಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಎರಡನೇ ಬಾರಿ ಕೋವಿಡ್ ಸಚಿವ ಸಂಪುಟ ಉಪ ಸಮಿತಿ ಸಭೆ ಸೇರಿತ್ತು. ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ ಮಹದೇವಪ್ಪ, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ರವಿ, ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ದೇಶದಲ್ಲಿಯೇ ಕರ್ನಾಟಕದಲ್ಲಿ ಹೆಚ್ಚು ಕೋವಿಡ್ ಟೆಸ್ಟ್ ಗಳನ್ನ ನಡೆಸಲಾಗ್ತಿದೆ ಎಂದರು. ಕೋವಿಡ್ ಇಳಿಮುಖ ಕಾಣುವ ವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಟೆಸ್ಟಿಂಗ್ ಮುಂದುವರಿಸುವುದಾಗಿ ಹೇಳಿದರು. ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚು ಬರುತ್ತೆ ಎನ್ನುವ ಕಾರಣಕ್ಕೆ ಟೆಸ್ಟಿಂಗ್ ಕಡಿಮೆ ಮಾಡಿ ಕೋವಿಡ್ ಪಾಸಿಟಿವ್ ಪ್ರಕರಣಗಳನ್ನ ಮುಚ್ವಿಡುವ…