Author: AIN Author

ಬೆಂಗಳೂರು: ಮಾದಕ ವಸ್ತು ಮಾರಾಟ ಜಾಲದ ವಿರುದ್ಧ ಸಿಲಿಕಾನ್ ಸಿಟಿ ಪೊಲೀಸರ ಸಮರ ಮುಂದುವರೆದಿದೆ. ಕ್ಯಾಬ್ ಚಾಲಕರ ಸೋಗಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹದಳದ ಅಧಿಕಾರಿಗಳು ಬಂಧಿಸಿದ್ದಾರೆ‌. ವಿಜಯ್ ಕುಮಾರ್, ವಿಜಯ್ ಕುಮಾರ್ ಬಂಧಿತ ಆರೋಪಿಗಳು. ಇಬ್ಬರು ಮೂಲತ: ಯಾದಗಿರಿ, ವಿಜಯಪುರ ಜಿಲ್ಲೆಯವರಾಗಿದ್ದು, ಬೆಂಗಳೂರಿಗೆ ಬಂದು ಕ್ಯಾಬ್ ಓಡಿಸುತ್ತಿದ್ದರು. ಆದರೆ ಹೆಚ್ಚಿನ ಹಣ ಗಳಿಸಬೇಕು, ಐಷಾರಾಮಿ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಪರಿಚಯಸ್ಥರಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳು ಐಟಿ/ಬಿಟಿ ಉದ್ಯೋಗಿಗಳಿಗೆ ಟಾರ್ಗೆಟ್ ಮಾಡಿ ಹಣ ಗಳಿಸುತ್ತಿದ್ದರು. ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಹೊಸಕೆರೆ ಹಳ್ಳಿ ಬಳಿ ಕಾರಿನಲ್ಲಿ ಗಾಂಜಾ ಮಾರುತ್ತಿದ್ದಾಗ ದಾಳಿ ನಡೆಸಿ ಈ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಂದ 25 ಲಕ್ಷ ಮೌಲ್ಯದ 15 ಕೆಜಿ ಗಾಂಜಾ, ಒಂದು ತೂಕದ ಮೆಶಿನ್, ಎರಡು ಮೊಬೈಲ್, ಒಂದು ಕಾರು ಸೀಜ್ ಮಾಡಿದ್ದಾರೆ.ಈ ಸಂಬಂಧ…

Read More

ಒಂದು ಕಾಲದಲ್ಲಿ ಲಕ್ಷದ್ವೀಪಗಳನ್ನು ‘ಲಕ್ಕಾಡಿವ್ ದ್ವೀಪಗಳು’ ಎಂದು ಕರೆಯಲಾಗುತ್ತಿತ್ತು. ಭಾರತದ ಕೆಲವು ಸುಂದರ ಮತ್ತು ವಿಲಕ್ಷಣ ದ್ವೀಪಗಳಲ್ಲಿ ಇವು ಕೂಡ ಒಂದಾಗಿದೆ. ಭಾರತದ ಚಿಕ್ಕ ಕೇಂದ್ರಾಡಳಿತ ಪ್ರದೇಶವು ಕೇವಲ 36 ದ್ವೀಪಗಳನ್ನು ಹೊಂದಿದ್ದು ಒಟ್ಟು 32 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಇದು 12 ಹವಳಗಳು, 3 ಬಂಡೆಗಳು ಮತ್ತು 5 ಮುಳುಗಿರುವ ದಡಗಳಿಂದ ಮಾಡಲ್ಪಟ್ಟಿದೆ. ಲಕ್ಷದ್ವೀಪದ ಪ್ರವಾಸ ಮಾಡುವ ಮೊದಲು ನೀವು ಇಲ್ಲಿಗೆ ಯಾವಾಗ ಹೋಗಬೇಕು, ಯಾವ ಸಮಯದಲ್ಲಿ ಎಂಬುದು ಬಹಳ ಮುಖ್ಯ. ಲಕ್ಷದ್ವೀಪ ದ್ವೀಪಗಳಿಗೆ ಭೇಟಿ ನೀಡಲು ಸೆಪ್ಟೆಂಬರ್‌ನಿಂದ ಫೆಬ್ರವರಿ ಅತ್ಯುತ್ತಮ ಸಮಯ. ಮಾರ್ಚ್‌ನಿಂದ ಮೇ ತಿಂಗಳುಗಳು ಸಹ ಉತ್ತಮವಾದ ತಿಂಗಳುಗಳಾಗಿವೆ ಆದರೆ ಹವಾಮಾನವು 2-3 ಡಿಗ್ರಿ ಸೆಲ್ಸಿಯಸ್‌ನಷ್ಟು ಬಿಸಿಯಾಗಿರುತ್ತದೆ. ಮಳೆಗಾಲದಲ್ಲಿ ಆದಷ್ಟು ಹೋಗುವುದನ್ನು ತಪ್ಪಿಸುವುದು ಒಳ್ಳೆಯದು. ಲಕ್ಷದ್ವೀಪದಲ್ಲಿ ನೋಡಲೇಬೇಕಾದ ಪ್ರವಾಸಿ ತಾಣಗಳು ಯಾವುವು..? ಕವರಟ್ಟಿ ದ್ವೀಪ: ಇದು ಲಕ್ಷದ್ವೀಪದ ರಾಜಧಾನಿಯಾಗಿದ್ದು, ಕವರಟ್ಟಿ ಸಮುದ್ರ ತೀರದಲ್ಲಿ ಸೂರ್ಯೋದಯ, ಸೂರ್ಯಾಸ್ತ ಕಣ್ತುಂಬಿಕೊಳ್ಳುವುದು ಒಂದು ಸೌಭಾಗ್ಯವೇ ಸರಿ. ಮಿನಿಕಾಯ್ ದ್ವೀಪ: ತಿಳಿ ನೀಲಿ…

Read More

ಕಿಂಗ್ ಈಸ್ ಆಲ್ ವೆಸ್ ಕಿಂಗ್…ಹೀಗಂತ ನಾವ್ ಹೇಳ್ತಿಲ್ಲ. ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅಭಿಮಾನಿಗಳು ಹೆಮ್ಮೆಯಿಂದ ಕೂಗುತ್ತಿದ್ದಾರೆ. ಅದಕ್ಕೆ ಕಾರಣ ಕಿಂಗ್ ಖಾನ್ ಹೆಸರಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. 2023ರಲ್ಲಿ ಬಾಕ್ಸಾಫೀಸ್ ಧೂಳಿಪಟ ಮಾಡಿದ ಕೀರ್ತಿ ಶಾರುಖ್ ಗೆ ಸಲ್ಲುತ್ತದೆ. ಡಂಕಿ, ಜವಾನ್ ಹಾಗೂ ಪಠಾಣ್ ಸಿನಿಮಾಗಳ ಮೂಲಕ ಒಂದೇ ವರ್ಷದಲ್ಲಿ ಹ್ಯಾಟ್ರಿಕ್ ಹಿಟ್ ಬಾರಿಸಿದ ರೆಕಾರ್ಡ್ ಬಾದ್ ಷಾಗೆ ಸೇರಿದೆ. ಬರೀ ಕಲೆಕ್ಷನ್ ಅಷ್ಟೇ ಅಲ್ಲ ಈ ಮೂರು ಚಿತ್ರಗಳನ್ನು ವೀಕ್ಷಿಸಿದ್ದು, ಎಂಟು ಕೋಟಿ ಮಂದಿ. ಒಂದು ವರ್ಷದಲ್ಲಿಯೇ ಇಷ್ಟು ಮಂದಿ ಸಿನಿಮಾ ವೀಕ್ಷಿಸಿರುವುದು ದಾಖಲೆಯೇ ಸರಿ..ಜವಾನ್ ಚಿತ್ರದ 3.93 ಕೋಟಿ ಟಿಕೆಟ್ ಮಾರಾಟವಾಗಿದ್ದು, ಪಠಾಣ್ 3.20 ಕೋಟಿ, ಡಂಕಿ 1 ಕೋಟಿ..ಈ ಸಾಧನೆ ಮಾಡಿದ ಮೊದಲ ಬಾಲಿವುಡ್ ತಾರೆ ಶಾರುಖ್. 2023ರಲ್ಲಿ ಜವಾನ್ ಹಾಗೂ‌ ಪಠಾಣ್ ‌ಗಳಿಕೆಯಲ್ಲಿ ದಾಖಲೆ ಬರೆದಿದ್ದು, ಅದಕ್ಕೆ ಡಂಕಿ ಕೂಡ ಸೇರ್ಪಡೆಯಾಯಿತು. 2023ರ ಆರಂಭದಲ್ಲಿ ಪಠಾಣ್ ಬಾಕ್ಸ್ ಆಫೀಸ್ ಬ್ಯಾಂಗ್ ಮಾಡಿತು.…

Read More

ಬೆಂಗಳೂರು: ಇತ್ತಿಚೇಗೆ ಬ್ರಾಂಡೆಡ್ ಟೀ ಕುಡಿದ್ರು ಬಾಯಿಗೆ ರುಚಿ ಸಿಕ್ತಿಲ್ವಾ? ಬ್ರಾಂಡೆಂಡ್ ಡಿಟರ್ಜೆಂಟ್ ನಲ್ಲಿ ಬಟ್ಟೆ ಹೊಗೆದ್ರು ಕೊಳೆ ಹೋಗ್ತಿಲ್ವಾ? ಟೀ ಕುಡಿದ್ರೆ ರುಚಿನೂ ಸಿಗಲ್ಲ. ಬಟ್ಟೆಯಲ್ಲಿ ಕೊಳೆನೂ ಹೋಗಲ್ಲ ಯಾಕಂದ್ರೆ ಎಲ್ಲಾ ನಕಲಿ. ಇಡೀ ಬೆಂಗಳೂರು, ರಾಮನಗರ, ಕೋಲಾರ ಸೇರಿದಂತೆ ರಾಜ್ಯದ ವಿವಿಧ ಭಾಗಗಲಿಗೆ ಸರಬರಾಜಾಗ್ತಿದ್ದ ನಕಲಿ 3 ರೋಜಸ್ ,ಸರ್ಫ್ ಎಕ್ಸೆಲ್ ಹಾಗೂ ರಿನ್ ಪೌಡರ್ ಫ್ಯಾಕ್ಟರಿ ಮೇಲೆ ಮಾದನಾಯಕನಹಳ್ಳಿ ಪೊಲೀಸ್ರು ದಾಳಿ ನಡೆಸಿದ್ದಾರೆ. ಬ್ರಾಂಡೆಡ್ ಉತ್ಪನ್ನಗಳ ಸೇವಾ ಸಂಸ್ಥೆಯಾದ ಅನ್ವೇಶ್ ಐಪಿಆರ್ ಹಾಗೂ ಹಿಂದೂಸ್ಥಾನ ಯೂನಿ ಲಿವರ್ ಸಂಸ್ಥೆ ನೀಡಿದ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ. ಮೊದಲಿಗೆ ನಗರದಲ್ಲಿ ಸಪ್ಲೈ ಆಗ್ತಿದ್ದ ಸ್ಟಾಕ್ ಮೇಲೆ ಸಿಸಿಬಿ ಪೊಲೀಸ್ರು ನಿಗಾ ವಹಿಸಿದ್ರು.‌ ಇದರ ಕಾರ್ಖಾನೆ ಗಳು ನಗರದ ಹೊರವಲಯದಲ್ಲಿ ಪತ್ತೆಯಾಗಿದ್ದು. ಮೂರು ಅಕ್ರಮಗಳ ಫ್ಯಾಕ್ಟರಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ನಕಲಿ 3 ರೋಜಸ್ ಟೀ ಪೌಡರ್, ಸರ್ಫ್ ಎಕ್ಸೆಲ್ ಮತ್ತು ರಿನ್ ಡಿಟರ್ಜೆಂಟ್…

Read More

ಗದಗ :-ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ವಿದ್ಯುತ್ ಅವಘಡದ ದುರಂತದಿಂದಾಗಿ ಚಿತ್ರನಟ ಯಶ್ ಅಭಿಮಾನಿಗಳು ಸಾವಿಗೀಡಾಗಿದ್ದರು. ಮೃತ ಮುರುಳಿ, ನವೀನ್, ಹನುಮಂತ ರವರ ಮನೆಗೆ ನರಗುಂದ ಶಾಸಕ ಹಾಗೂ ಮಾಜಿ ಸಚಿವ ಸಿ.ಸಿ ಪಾಟೀಲ, ಶಿರಹಟ್ಟಿ ಶಾಸಕ ಡಾ ಚಂದ್ರು ಲಮಾಣಿ, ವಿದಾನ ಪರಿಷತ್ ಸದಸ್ಯ ಎಸ್.ವಿ ಸಂಕನೂರ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. 10 ಸಾವಿರ ರೂಪಾಯಿ ವಯಕ್ತಿಕ ಪರಿಹಾರ ನೀಡಿದ ಮಾಜಿ ಸಚಿವ ಸಿ.ಸಿ ಪಾಟೀಲ. ತಲಾ‌ 3 ಕುಟುಂಬಕ್ಕೂ ಪ್ರತ್ಯೇಕ 10 ಸಾವಿರ ರೂಪಾಯಿ ಪರಿಹಾರ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಕ್ಕಳನ್ನು ಕಳೆದುಕೊಂಡು ಎದೆ ಬಡಿದುಕೊಂಡು ಅಳುತ್ತಿರುವ ಹೆತ್ತವರ ಆಕ್ರಂಧನ ಮುಗಿಲು ಮುಟ್ಟುವಂತಿತ್ತು.

Read More

ಬೆಂಗಳೂರು:- ಹಣಕ್ಕಾಗಿ ವ್ಯಕ್ತಿಯನ್ನು ಅಪಹರಿಸಿ ಕೊಲೆ ಮಾಡಿದ ಮೂವರನ್ನು ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಂಜಯ್‌, ಮಂಗನಹಳ್ಳಿಯ ಆನಂದ ಮತ್ತು ನಾಗದೇವಹಳ್ಳಿ ನಿವಾಸಿ ಹನುಮಂತು ಬಂಧಿತ ಆರೋಪಿಗಳು. ಈ ಆರೋಪಿಗಳು ಕಿಶನ್‌ ಕುಮಾರ್‌ ಎಂಬ ಯುವಕನನ್ನು ಅಪಹರಿಸಿ, ಹಣ ಸುಲಿಗೆ ಮಾಡಲು ಪ್ರಯತ್ನ ನಡೆಸಿದ್ದರು. ಆದರೆ ಸ್ಥಳೀಯರು ಆತನನ್ನು ರಕ್ಷಿಸಿ ವಾಪಸ್‌ ಕಳುಹಿಸಿದ್ದರು. ಮೊದಲ ಪ್ರಯತ್ನ ವಿಫಲವಾದ ನಂತರ ಗುರುಸಿದ್ದಪ್ಪ ಎಂಬುವವರನ್ನು ಅಪಹರಿಸಿ, ಜೀವಂತವಾಗಿ ಬಿಟ್ಟರೆ ತೊಂದರೆ ಮಾಡಬಹುದು ಎಂಬ ಭಯದಿಂದ ರಾಮನಗರ ಜಿಲ್ಲೆ ಕೂಟಗಲ್‌ ತಿಮ್ಮಪ್ಪಸ್ವಾಮಿ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಕೊಲೆ ಮಾಡಿದ್ದರು. ಈಗ ಈ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರಿಗೆ 15 ವರ್ಷಗಳ ಹಿಂದೆ ಬಂದಿದ್ದ ಸಂಜಯ್‌, ಮಂಗನಗಳ್ಳಿಯ ಗ್ಯಾರೇಜ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಆನಂದ್ ತರಕಾರಿ ಡೆಲಿವರಿ ಕೆಲಸ ಮಾಡುತ್ತಿದ್ದ. ಈತ ಹಲವು ಸುಲಿಗೆ ಕೃತ್ಯಗಳಲ್ಲಿ ಭಾಗಿಯಾಗಿದ್ದ. ರಾಯಚೂರು ಮೂಲದ ಹನುಮಂತ ನಾಗದೇವಹಳ್ಳಿಯಲ್ಲಿ ನೆಲೆಸಿದ್ದ. ಗಾಂಜಾ ವ್ಯಸನಿಗಳಾಗಿದ್ದ ಈ ಮೂವರು ಹಣಕ್ಕಾಗಿ ವ್ಯಕ್ತಿಗಳನ್ನು…

Read More

ಹುಬ್ಬಳ್ಳಿ: ಇಲ್ಲಿಯ ಎಂಎಜಿ ಸೊಸೈಟಿಯ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಜ. 12ರಂದು ಸಂಜೆ 5ಕ್ಕೆ ಶಾಲೆಯ ಲಯನ್ ನಿರ್ಮಲಕುಮಾರ ಜವಳಿ ಮೆಮೋರಿಯಲ್ ಪೆವೆಲಿಯನ್‌ನಲ್ಲಿ ಏರ್ಪಡಿಸಲಾಗಿದೆ ಎಂದು ಸೊಸೈಟಿ ಚೇರ್ಮನ್ ಜಯಪ್ರಕಾಶ ಟೆಂಗಿನಕಾಯಿ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕೆಎಲ್‌ಇ ಸಂಸ್ಥೆಯ ಚೇರ್ಮನ್ ಡಾ. ಪ್ರಭಾಕರ ಕೋರೆ ಅವರು ಲಯನ್ ಸಿದ್ದಣ್ಣ ಯಾವಗಲ್ ಮೆಮೋರಿಯಲ್ ಗೋಲ್ಡನ್ ಜುಬ್ಲಿ ಅನೆಕ್ಸ್ ಉದ್ಘಾಟಿಸುವರು. ಲಯನ್ ನಿರ್ಮಲಕುಮಾರ ಜವಳಿ ಮೆಮೋರಿಯಲ್ ಪೆವೆಲಿಯನ್ ಅನ್ನು ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ಬೆಂಗಳೂರಿನ ಜೆಎನ್‌ಸಿಎಎಸ್‌ಆರ್ ಪ್ರಾಧ್ಯಾಪಕ ಡಾ.ಎಸ್.ಎಂ. ಶಿವಪ್ರಸಾದ ಉಪನ್ಯಾಸ ನೀಡುವರು. ಇದೇ ವೇಳೆ ಹಳೆಯ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು ಎಂದರು. ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಚೇರ್ಮನ್ ಗಿರೀಶ ಮಾನೆ ಮಾತನಾಡಿ, ಜ. 13ರಂದು ಸಂಜೆ 4ಕ್ಕೆ ಜಾಗತಿಕ ವಾರ್ಷಿಕ ಸಭೆ ನಡೆಯಲಿದೆ. ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ…

Read More

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರು ನಿವಾಸಿಗಳೆ ಎಚ್ಚರ, ಎಚ್ಚರ. ನಗರದಲ್ಲಿ ಯಮನ ರೂಪದಲ್ಲಿ ಕಾದು ಕುಳಿತಿರುವ ವಿದ್ಯುತ್ ತಂತಿಗಳು ಅನೇಕ ಕಡೆ ಪತ್ತೆಯಾಗಿವೆ. ಕೊಂಚ ಯಾಮಾರಿದ್ರೂ ಯಮಲೋಕ‌ ಫಿಕ್ಸ್. ಇಂತಹದೊಂದು ಆಘಾತಕಾರಿ ಅಂಶವನ್ನ ಖುದ್ದು ಬೆಸ್ಕಾಂ ಅಧಿಕಾರಿಗಳ ಅಂಕಿ ಅಂಶವೇ ಬಯಲು ಮಾಡಿದೆ. ಕಾಡುಗೋಡಿ ಪೊಲೀಸ್ ಠಾಣಾ ಲಿಮಿಟ್ಸ್ ನಲ್ಲಿ ವಿದ್ಯುತ್ ಸ್ಪರ್ಶಿಸಿ ತಾಯಿ-ಮಗು ಮೃತಪಟ್ಟ ಘೋರ ದುರಂತದ ಬಗ್ಗೆ ನಿಮ್ಗೆಲ್ಲಾ ಗೊತ್ತಿರ್ಬೋದು. ಅಂದು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತಾಯಿ & ಮಗು ಬಲಿಯಾಗಿದ್ರು. ಹೀಗಾಗಿ ಬೆಸ್ಕಾಂ ಅಧಿಕಾರಿಗಳು ಕೂಡ ಸರ್ವೇ ಮಾಡಿ, ಇಂತಹ ಡೇಂಜರಸ್ ಜಾಗಗಳನ್ನ ಪತ್ತೆ ಮಾಡಿ, ಅವುಗಳನ್ನ ಸರಿಪಡಿಸುವ ಕೆಲಸ ಮಾಡ್ತಿದೆ. ಆದರೆ ವಿಚಾರ ಏನಂದ್ರೆ ಇನ್ನೂ ಕೂಡ ಬೆಸ್ಕಾಂ ವ್ಯಾಪ್ತಿಯಲ್ಲಿ 30,243 ಡೇಂಜರ್ ಜಾಗ ಇದ್ದು, ಅವುಗಳನ್ನ‌ ಸರಿಪಡಿಸುವ ಕೆಲಸ ಆಗಬೇಕಿದೆ. ಬೆಂಗಳೂರಿನಲ್ಲೂ ಇಂತಹ ಡೇಂಜರಸ್ ಜಾಗಗಳ ಪಟ್ಟಿ ಕೂಡ ದೊಡ್ಡದಿದೆ. ಜನವರಿ ಕೊನೆಯೊಳಗೆ ಎಲ್ಲಾ ಡೇಂಜರಸ್ ಸ್ಪಾಟ್ ಗಳನ್ನು ಕ್ಲಿಯರ್ ಮಾಡ್ತಿವಿ ಎಂದು ಬೆಸ್ಕಾಂ…

Read More

ಹುಬ್ಬಳ್ಳಿ: ರೆಸ್ಟೋರೆಂಟ್ ರಿವೀವ್ ಮಾಡಿದರೆ ಹಣ ಗಳಿಸಬಹುದೆಂದು ನಂಬಿಸಿದ ಅಪರಿಚಿತರು, ಧಾರವಾಡ ಸತ್ತೂರಿನ ವೈದ್ಯೆಯೊಬ್ಬರಿಂದ 5.91 ಲಕ್ಷ ರೂ. ವರ್ಗಾಯಿಸಿಕೊಡು ವಂಚಿಸಿದ್ದಾರೆ. ವೈದ್ಯೆಯ ವಾಟ್ಸ್ ಆ್ಯಪ್ ನಂಬರ್‌ಗೆ ಸಂಪರ್ಕಿಸಿದ ವಂಚಕರು, ಮೊದಲು ಸ್ವಲ್ಪ ಹಣ ಕೊಟ್ಟು ನಂಬಿಸಿದ್ದಾರೆ. ನಂತರ ಟೆಲಿಗ್ರಾಂ ಗ್ರೂಪ್‌ಗೆ ಸೇರಿಸಿ ಪ್ರಿಪೇಯ್ಡಿ ಟಾಸ್ಕ್ ಕೊಡುವುದಾಗಿ ನಂಬಿಸಿ ಕಮಿಷನ್ ಕೊಡುವ ಭರವಸೆ ನೀಡಿದ್ದಾರೆ. ವೈದ್ಯೆಯ ವಿವಿಧ ಬ್ಯಾಂಕ್ ಖಾತೆಗಳಿಂದ 5,91,200 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ವಿಜಯಪುರ:- ಜಿಲ್ಲೆಯ ಸಿಂದಗಿ ತಾಲೂಕಿನ ಗಬಸಾವಳಗಿ ಗ್ರಾಮದ ಬಳಿ NH-52 ರಲ್ಲಿ ಬೈಕ್ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರನು ಸ್ಥಳದಲ್ಲಿಯೆ ಸಾವಿಗೀಡಾಗಿದ್ದು ಬಸ್ ಬೆಂಕಿ ಹೊತ್ತಿ ಸುಟ್ಟು ಕರಕಲಾದ ಘಟನೆ ನಡೆದಿದೆ. ಅಪಘಾತಕ್ಕಿಡಾದ KA-28 F-2469 ನಂಬರಿನ ಈ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು ಸುದ್ದಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂಧಿಗಳು ದೌಡಾಯಿಸಿ ಬಸ್ಸಿಗೆ ಹೊತ್ತಿದ ಬೆಂಕಿಯನ್ನು ನಂದಿಸಿದ್ದಾರೆ. ಘಟನೆಯ ಸ್ಥಳಕ್ಕೆ ಸಿಂದಗಿ ಪೋಲಿಸರು ಬೇಟಿ ನೀಡುವ ಮೂಲಕ ಸ್ಥಳ ಪರಿಶೀಲನೆಯನ್ನು ನಡೆಸಿ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Read More