ಹಿಂದೂ ಶಾಸ್ತ್ರದಲ್ಲಿ ನಾವು ಪ್ರತಿನಿತ್ಯ ಮಾಡುವ ಕೆಲಸಗಳಿಗೆ ಅದರದ್ದೇ ಆದ ನಿಯಮಗಳನ್ನು ಹೇಳಲಾಗಿದೆ. ಉದಾಹರಣೆಗೆ ಊಟದ ವಿಚಾರವಾಗಿರಬಹುದು, ಪೂಜೆಯ ನಿಯಮಗಳಾಗಿರಬಹುದು. ಅದೇ ರೀತಿ, ತಲೆ ಸ್ನಾನ ಮಾಡುವುದಕ್ಕೂ ಶಾಸ್ತ್ರಗಳಲ್ಲಿ ನಿಯಮಗಳಿವೆ. ವಿವಾಹಿತ ಮಹಿಳೆಯರು ಯಾವ ದಿನ ತಲೆ ಸ್ನಾನ ಮಾಡಬಾರದು..? ಯಾವ ದಿನ ತಲೆ ಸ್ನಾನ ಮಾಡಬೇಕು..? https://ainlivenews.com/twist-in-the-case-of-a-lineman-who-went-to-collect-an-electricity-bill-and-was-beaten-up-violently/ ಸುಮಂಗಲಿಯರು ಯಾವ ದಿನ ತಲೆ ಸ್ನಾನ ಮಾಡಬೇಕು, ಯಾವ ದಿನ ಮಾಡಬಾರದು ಎನ್ನುವುದಕ್ಕೂ ನಿಯಮವಿದೆ. ಈ ಎಲ್ಲಾ ಕಟ್ಟು ಕಟ್ಟಳೆಯನ್ನು ನಮ್ಮ ವಾಸ್ತುವಿನಲ್ಲಿ ವಿವರವಾಗಿ ಬರೆಯಲಾಗಿದೆ. ಈ ನಿಯಮಗಳನ್ನು ಅನುಸರಿಸುವುದರಿಂದ ಸುಖ, ಶಾಂತಿ, ನೆಮ್ಮದಿಯ ಬದುಕು ನಮ್ಮದಾಗುವುದು. ಮದುವೆಯಾಗದ ಹೆಣ್ಣು ಮಕ್ಕಳು ಬುಧವಾರದ ದಿನ ತಲೆ ಸ್ನಾನ ಮಾಡಬಾರದು.ಒಂದು ವೇಳೆ ಹೀಗೆ ಮಾಡಿದರೆ ಅವರ ಮದುವೆ ತಡವಾಗುತ್ತದೆಯಂತೆ. ಇನ್ನು ವಿವಾಹಿತ ಮಹಿಳೆಯರು ಮಂಗಳವಾರ, ಗುರುವಾರ ಮತ್ತು ಶನಿವಾರದಂದು ತಲೆ ಸ್ನಾನ ಮಾಡಬಾರದು.ಆ ದಿನಗಳಲ್ಲಿ ಸ್ನಾನ ಮಾಡುವುದರಿಂದ ಆರ್ಥಿಕ ಸಮಸ್ಯೆ ಎದುರಾಗಿ, ಸಾಲದ ಹೊರೆ ಕೂಡಾ ಹೆಚ್ಚುತ್ತದೆಯಂತೆ. ಸುಮಂಗಲಿಯರು ಗುರುವಾರ ತಲೆ ಸ್ನಾನ…
Author: AIN Author
ಬೆಳಗಾವಿ: ಜಿಲ್ಲೆಯ ಗೋಕಾಕ್ ತಾಲೂಕಿನ ದುಪಧಾಳ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದಷ್ಟೇ ವಿದ್ಯುತ್ ಬಿಲ್ ವಸೂಲಿಗೆ ಹೋದ ಹೆಸ್ಕಾಂ ಸಿಬ್ಬಂದಿಗಳ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ ಗ್ರಾಹಕರು ಗೂಂಡಾ ವರ್ತನೆ ತೋರಿದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ಗ್ರಾಹಕರ ಈ ನಡೆ ಖಂಡಿಸಿದರು. https://ainlivenews.com/darshan-pavithra-who-stood-side-by-side-but-didnt-speak-police-pressure-them-to-testify-against-darshan/ ಆದರೆ ಈ ಬಗ್ಗೆ ಸಂಕ್ಷಿಪ್ತವಾಗಿ ವರದಿ ಬಿತ್ತರಿಸಲು ಹೋದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಲೈನ್ ಮೆನ್ ಗಳ ಮೇಲೆ ಹಲ್ಲೆ ಮಾಡೋಕೂ ಮುಂಚೆಯೇ ಹೆಸ್ಕಾಂ ಸಿಬ್ಬಂದಿಗಳೇ ಗ್ರಾಹಕರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆ ಬಳಿಕ ಗ್ರಾಹಕರು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ತಮ್ಮ ಮೇಲೆ ನಡೆದ ಹಲ್ಲೆಯ ವಿಡಿಯೋ ಮಾತ್ರ ವೈರಲ್ ಮಾಡಿ ತಾವು ನಡೆಸಿದ ಹಲ್ಲೆ ದೃಶ್ಯ ತೆಗೆದು ಕೇವಲ 30 ಸೆಕೆಂಡ್ ವಿಡಿಯೋ ಮಾತ್ರ ವೈರಲ್ ಮಾಡಿದ್ದಾರೆ. ಈ ಬಗ್ಗೆ ಹಲ್ಲೆಗೊಳಗಾದ ಗ್ರಾಹಕ ಕುಟುಂಬ ವಿವರವಾಗಿ ಹೇಳಿದೆ. 17,146 ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ…
ಬೆಂಗಳೂರು:- ಬ್ಯಾನ್ ಆಗುತ್ತಾ ಕರಿದ ಹಸಿರು ಬಟಾಣಿ ಎಂದು ಇದೀಗ ಜನ ಕೇಳಲು ಶುರು ಮಾಡಿದ್ದಾರೆ. ಬಟಾಣಿ.. ಬಟಾಣಿ.. ಕರಿದ ಹಸಿರು ಬಟಾಣಿ. ಅತೀ ಕಡಿಮೆ ಬೆಲೆಗೆ ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೆ ಕೂಡ ಫೇವರೇಟ್. ಆದ್ರೆ ಇದೀಗ ಬಟಾಣಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಒಳಗೊಂಡಿರುವ ಶಂಕೆ ಶುರುವಾಗಿದೆ. https://ainlivenews.com/kalaghatagi-farmer-woman-dies-after-being-electrocuted/ ಗೋಬಿ ಆಯ್ತು, ಪಾನಿಪುರಿ ಆಯ್ತು, ಕಬಾಬ್ ಆಯ್ತು.. ಕಾಟನ್ ಕ್ಯಾಂಡಿನೂ ಆಯ್ತು.. ಇದೀಗ ಬಟಾಣಿ ಸರದಿ. ಕೂರ್ಮಾ ಆಗಲಿ, ಯಾವುದೇ ತಿಂಡಿ ಮಾಡುವಾಗಲು ಬಟಾಣಿ ಬಳಸುತ್ತಾರೆ. ಬಡವರ ಫೆವರೇಟ್ ಬಟಾಣಿಗೆ ಇದೀಗ ಬ್ಯಾನ್ ಬಿಸಿ ತಟ್ಟುತ್ತಾ ಅನ್ನೋ ಪ್ರಶ್ನೆ ರಾಜ್ಯದಲ್ಲಿ ಭಾರೀ ಚರ್ಚೆಯಲ್ಲಿದೆ? ಹಾಗಿದ್ರೆ ಹೀಗೊಂದು ಪ್ರಶ್ನೆ ಮೂಡೋದಕ್ಕೆ ಕಾರಣ ಇಲ್ಲಿದೆ ನೋಡಿ. ಈ ಬಗ್ಗೆ ಹಲವು ಸುದ್ದಿಗಳೂ ಕೂಡಾ ವೈರಲ್ ಆಗುತ್ತಿದೆ. ಈ ಕರಿದ ಹಸಿರು ಬಟಾಣಿಯಲ್ಲಿ ಯತೇಚ್ಛವಾಗಿ ಕೃತಕ ಬಣ್ಣ ಬಳಕೆ ಮಾಡುವ ಗಂಭೀರ ಆರೋಪವೂ ಕೇಳಿಬರುತ್ತಿದೆ. ಈ ಸಂಬಂಧ ಸಾರ್ವಜನಿಕರು ಆಗಾಗ ತಮ್ಮ ದೂರುಗಳನ್ನು ಹೇಳ್ತಾನೆ ಇದ್ದರು.…
ಬಾದಾಮಿಯಲ್ಲಿ ವಿಟಮಿನ್ ಇ, ಆಂಟಿಆಕ್ಸಿಡೆಂಟ್ಸ್, ಆರೋಗ್ಯಕರ ಕೊಬ್ಬು ನಮ್ಮ ಚರ್ಮವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಬಾದಾಮಿ ಚರ್ಮವನ್ನು ತೇವಗೊಳಿಸಲು ಮತ್ತು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ, ಕೊಲ್ಯಾಜಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತದೆ. https://ainlivenews.com/the-war-could-end-trump-hints-that-zilenski-is-ready-to-sign-the-minerals-deal/ ಬಾದಾಮಿಯು ಕೊಬ್ಬಿನಾಮ್ಲಗಳಿಂದ ತುಂಬಿದ್ದು, ಇದು ಕೂದಲಿನ ಆರೋಗ್ಯ ಹಾಗೂ ಬಲ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಾದಾಮಿ ಎಣ್ಣೆಯನ್ನು ಕೂದಲಿಗೆ ಹಚ್ಚಿದರೆ, ಕೂದಲಿನ ಆರೋಗ್ಯ ಹೆಚ್ಚಾಗುವುದಲ್ಲದೆ, ಕೂದಲಿನ ಹೊಳಪು ಕೂಡ ಹೆಚ್ಚಾಗುತ್ತದೆ. ಬಾದಾಮಿಯಲ್ಲಿ ಹಲವಾರು ಬಗೆಯ ಪೋಷಕಾಂಶಗಳಿದ್ದು, ಇದರಲ್ಲಿ ಆರೋಗ್ಯಕಾರಿ ಕೊಬ್ಬು, ಪ್ರೋಟೀನ್, ನಾರಿನಾಂಶ ಮತ್ತು ಪ್ರಮುಖ ವಿಟಮಿನ್ಗಳು ಹಾಗೂ ಖನಿಜಾಂಶಗಳು ಇವೆ. ಬಾದಾಮಿಯನ್ನು ಹಾಗೆ ಸೇವನೆ ಮಾಡಬಹುದು ಅಥವಾ ಅದನ್ನು ಬಾದಾಮಿ ಹಾಲು, ಸ್ಮೂಥಿಯಾಗಿ ಕೂಡ ಬಳಸಬಹುದು. ಇದರ ಲಾಭಗಳು ಹಾಗೆ ಸಿಗುವುದು. ಆದರೆ ಕೆಲವು ಆಹಾರಗಳ ಜತೆಗೆ ಬಾದಾಮಿ ಸೇವಿಸಿದರೆ, ಆಗ ಇದು ಜೀರ್ಣಕ್ರಿಯೆಗೆ ಸಮಸ್ಯೆ ಉಂಟು ಮಾಡುವುದು. ಇದರಿಂದ ಪೋಷಕಾಂಶಗಳ ಹೀರುವಿಕೆಗೂ ಸಮಸ್ಯೆಯಾಗುವುದು ಮತ್ತು ಆರೋಗ್ಯದ ಮೇಲೆ ವ್ಯತಿರಿಕ್ತ…
ಹಲ್ಲುನೋವು ಎದುರಾಗಲು ಕೆಲವಾರು ಕಾರಣಗಳಿವೆ. ಸಾಮಾನ್ಯ ಕಾರಣಗಳೆಂದರೆ ಹಲ್ಲು ಮತ್ತು ಒಸಡುಗಳ ಸಂಧುಗಳಲ್ಲಿ ಎದುರಾಗಿರುವ ಸೋಂಕು. ಪರಿಣಾಮವಾಗಿ ಉರಿಯೂತ ಮತ್ತು ಒಸಡುಗಳಲ್ಲಿ ರಕ್ತ ಒಸರುವುದು ಕಂಡುಬರುತ್ತದೆ. https://ainlivenews.com/explosion-at-fireworks-collection-unit-three-deaths/ ಎರಡು ಹಲ್ಲುಗಳ ನಡುವಿನ ಸಂಧು ಹಾಗೂ ಹಲ್ಲು ಮತ್ತು ಒಸಡುಗಳ ಸಂಧುಗಳಲ್ಲಿ ಸಿಲುಕಿಕೊಂಡ ಆಹಾರಕಣಗಳನ್ನು ಬ್ಯಾಕ್ಟೀರಿ ಯಾಗಳು ಕೊಳೆಸುವ ಕಾರಣದಿಂದ ಈ ಭಾಗದಲ್ಲಿ ಸೋಂಕು ಎದುರಾಗುತ್ತದೆ.ಇದು ಹಲ್ಲುನೋವು ಮತ್ತು ಬಾಯಿಯ ದುರ್ವಾಸನೆಗೂ ಕಾರಣವಾಗುತ್ತದೆ. ಈ ಸೋಂಕು ಎದುರಾದಾಗ ನೀವಾಗಿ ಇದಕ್ಕೆ ಚಿಕಿತ್ಸೆ ನೀಡಲು ಯತ್ನಿಸದಿರಿ ಹಾಗೂ ಆದಷ್ಟೂ ಬೇಗನೇ ದಂತ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ. ಉತ್ತರಾಖಂಡದ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಅನೇಕ ಬೆಲೆಬಾಳುವ ಗಿಡಮೂಲಿಕೆಗಳು ಕಂಡುಬರುತ್ತವೆ. ಹಿಪ್ಪಲಿ ಅದರಲ್ಲಿ ಒಂದು.. ಈ ಹಿಪ್ಪಲಿ ದೇಹಕ್ಕೆ ತುಂಬಾ ಆರೋಗ್ಯಕರ ಗಿಡಮೂಲಿಕೆ ಎಂದು ಪರಿಗಣಿಸಲಾಗಿದೆ. ಇದನ್ನು ಹೆಚ್ಚಾಗಿ ಹಲ್ಲುನೋವು ಗುಣಪಡಿಸಲು ಬಳಸಲಾಗುತ್ತದೆ. ಜೊತೆಗೆ ಮಲೆನಾಡಿನ ಅನೇಕ ಮನೆಮದ್ದುಗಳಲ್ಲಿಯೂ ಬಳಸಲಾಗುತ್ತದೆ. ಇದರ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಒಸಡುಗಳು ಮತ್ತು ಹಲ್ಲುಗಳ ಮೇಲೆ ಉಜ್ಜಿದರೇ ಹಲ್ಲು ನೋವು…
ತಮಿಳುನಾಡು:- ಪಟಾಕಿ ಸಂಗ್ರಹಣಾ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೂವರು ಮಹಿಳೆಯರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ಜರುಗಿದೆ. https://ainlivenews.com/woman-dies-in-a-single-elephant-attack/ ಮೃತರನ್ನು ಶಣ್ಮುಗಂ, ತಿರುಮಲರ್ ಮತ್ತು ಮಂಜು ಎಂದು ಗುರುತಿಸಲಾಗಿದ್ದು, ಅವರು ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಪೊಲೀಸರೊಂದಿಗೆ ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆಯು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಆದರೆ, ಅವರು ಶವಗಳನ್ನು ಮಾತ್ರ ಹೊರತೆಗೆಯಲು ಸಾಧ್ಯವಾಯಿತು. ಪಟಾಕಿ ಘಟಕವು ದೀರ್ಘಕಾಲದವರೆಗೆ ಮಾನ್ಯ ಸರ್ಕಾರಿ ಪರವಾನಗಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾಧಿಕಾರಿ ಸತೀಶ್ ದೃಢಪಡಿಸಿದರು. ಸ್ಫೋಟದ ಕಾರಣವನ್ನು ಪ್ರಸ್ತುತ ತನಿಖೆ ಮಾಡಲಾಗುತ್ತಿದೆ. ಪಟಾಕಿಗಳ ಸ್ಫೋಟದ ನಂತರ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ಮತ್ತು ರಕ್ಷಣಾ ಸೇವಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಡಳಿತವು ಈ ಪ್ರದೇಶದ ಎಲ್ಲಾ ಪಟಾಕಿ ತಯಾರಿಕೆ ಮತ್ತು ಸಂಗ್ರಹಣಾ ಘಟಕಗಳನ್ನು ಕೂಲಂಕಷವಾಗಿ ಪರಿಶೀಲಿಸಲಿದೆ ಎಂದು ಭರವಸೆ ನೀಡಿದರು.
ಕೋಲಾರ:- ಸಾಕರಸನಹಳ್ಳಿ ಗ್ರಾಮದ ಹೊರ ವಲಯದ ತೋಟದ ಮನೆ ಬಳಿ ಒಂಟಿ ಆನೆ ದಾಳಿಗೆ ರೈತ ಮಹಿಳೆಯೊಬ್ಬರು ಬಲಿಯಾದ ಘಟನೆ ಜರುಗಿದೆ. https://ainlivenews.com/gas-leak-cylinder-exploded-and-burned-to-grocery-store/ 44 ವರ್ಷದ ಮಂಜುಳ ದಾಳಿಯಿಂದ ಮೃತಪಟ್ಟ ಮಹಿಳೆ. ಸಾಕರಸನಹಳ್ಳಿ ಗ್ರಾಮದ ಹೊರ ವಲಯದ ತೋಟದ ಮನೆ ಬಳಿ ಘಟನೆ ನಡೆದಿದೆ. ಮಂಜುಳ ಮೂತ್ರ ವಿಸರ್ಜನೆಗೆಂದು ಮುಂಜಾನೆ 4 ಗಂಟೆ ಸುಮಾರಿಗೆ ಮನೆಯಿಂದ ಹೊರಹೋದ ವೇಳೆ ಒಂಟಿ ಸಲಗ ದಾಳಿ ನಡೆಸಿದೆ. ಘಟನೆಯಿಂದ ಸಾಕರಸನಹಳ್ಳಿ ಸೇರಿದಂತೆ ಕಾಡಂಚಿನ ಗ್ರಾಮಗಳ ರೈತರಲ್ಲಿ ಆತಂಕ ಮನೆಮಾಡಿದೆ.
ದಾವಣಗೆರೆ:- ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹನುಮಂತಾಪುರ ಗೊಲ್ಲರಹಟ್ಟಿಯಲ್ಲಿ ಸಿಲಿಂಡರ್ನಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕಿರಾಣಿ ಅಂಗಡಿ ಸುಟ್ಟು ಕರಕಲಾದ ಘಟನೆ ಜರುಗಿದೆ. https://ainlivenews.com/congress-leader-haider-murder-case/ ಗ್ರಾಮದ ಕುಮಾರ್ ಎನ್ನುವರಿಗೆ ಸೇರಿದ ಕಿರಾಣಿ ಅಂಗಡಿ ಇದಾಗಿದ್ದು, ಅಂಗಡಿಯಲ್ಲಿ ಇರಿಸಿದ್ದ ಸಿಲಿಂಡರ್ ಸೋರಿಕೆಯಾಗಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಜನರು ಹೊರ ಓಡಿಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಘಟನೆಯಿಂದ ಅಂಗಡಿಯಲ್ಲಿದ್ದ ಎಲ್ಲಾ ಸಾಮಗ್ರಿಗಳು ಸುಟ್ಟು ಕರಕಲಾಗಿದ್ದು, ಅಂಗಡಿ ಮಾಲೀಕ ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ
ಬೆಂಗಳೂರು:ಶಾಂತಿನಗರ ಕಾಂಗ್ರೆಸ್ ಮುಖಂಡನ ಬರ್ಬರ ಕೊಲೆ ಹಿಂದೆ ಕೈ ನಾಯಕರ ಕೈವಾಡವಿರೋ ಶಂಕೆ ವ್ಯಕ್ತವಾಗಿದೆ. https://ainlivenews.com/navarasan-entered-the-sports-world-by-organizing-the-celebrity-womens-kabbadi-league/ ಶನಿವಾರ ಮಧ್ಯರಾತ್ರಿ ಅಶೋಕನಗರ ಪೊಲೀಸ್ ಠಾಣಾವ್ಯಾಪ್ತಿಯ ಫುಟ್ ಬಾಲ್ ಗ್ರೌಂಡ್ ಬಳಿ ಕಾಂಗ್ರೆಸ್ ಮುಖಂಡ ಹೈದರ್ ಕೊಲೆ ನಡೆದಿತ್ತು. ಶಾಂತಿನಗರ ಶಾಸಕ ಹ್ಯಾರಿಸ್ ಗೆ ಹೈದರ್ ಆಪ್ತನಾಗಿದ್ದ. ಬಿಬಿಎಂಪಿ ಚುನಾವಣೆಗೆ ಸಜ್ಜಾಗಿ ಎಂದು ಕಾಂಗ್ರೆಸ್ ವರಿಷ್ಠರು ಕರೆ ಕೊಟ್ಟ ಬೆನ್ನಲ್ಲೇ ಕೈ ಮುಖಂರು ಚುನಾವಣೆಗೆ ತಯಾರಿ ನಡೆಸಿದ್ರು. ಈ ಬಾರಿ ಬಿಬಿಎಂಪಿ ಚುನಾವಣೆಗೆ ಹೈದರ್ ಸಹೋದರ ಸಲೀಮ್ ಗೆ ಟಿಕೆಟ್ ಕನ್ಫರ್ಮ್ ಅಂತಾ ಇಡೀ ಏರಿಯಾದಲ್ಲಿ ಚರ್ಚೆಯಾಗ್ತಿತ್ತು.ಇದು ಕೆಲ ಕಾಂಗ್ರೆಸ್ ಮುಖಂಡರಿಗೆ ನುಂಗಲಾರದ ತುತ್ತಾಗಿದೆ. ಇದೇ ಕಾರಣಕ್ಕೆ ಕೊಲೆ ನಡೆದಿದೆ ಎಂದು ಹೇಳಲಾಗ್ತಿದೆ.ಶಾಸಕ ಹ್ಯಾರಿಸ್ ಮತ್ತು ಹ್ಯಾರಿಸ್ ಪುತ್ರ ನಲಪಾಡ್ ಆಪ್ತ ವಲಯದಲ್ಲಿ ಗುರುತಿಸಿಕೊಂಡವರಿಂದಲೇ ಈ ಕೊಲೆ ನಡೆದಿದೆ ಎನ್ನಲಾಗ್ತಿದೆ. ಕೊಲೆ ಸಂಬಂಧ ಈಗಾಗ್ಲೆ ಅಶೋಕನ ಪೊಲೀಸ್ರು ನಾಲ್ವರನ್ನ ವಶಕ್ಕೆ ಪಡುದಿದ್ದಾರೆ.ನಲಪಾಡ್ ಆಪ್ತ ವಲದಲ್ಲಿ ಗುರುತಿಸಿಕೊಂಡಿದ್ದ ನಾಜ್ ಸೇರಿ ನಾಲ್ವರನ್ನ ಅಶೋಕ ನಗರ ಪೊಲೀಸ್ರು…
ಗರ್ಭಾವಸ್ಥೆಯಲ್ಲಿ ಮಹಿಳೆಯರು ದೈಹಿಕ ಆಯಾಸವನ್ನು ಅನುಭವಿಸುವುದು ಸಹಜ. ಹೀಗಾಗಿ, ಅನೇಕ ಮಹಿಳೆಯರು ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಗರ್ಭಾವಸ್ಥೆಯಲ್ಲಿ 7 ರಿಂದ 8 ಗಂಟೆಗಳ ಆಳವಾದ ನಿದ್ರೆ ತಾಯಿ ಮತ್ತು ಮಗುವಿಗೆ ಪ್ರಯೋಜನಕಾರಿಯಾಗಿದೆ. ಕೆಲವು ಜನರು ನಿದ್ರಾಹೀನತೆಯನ್ನು ಅನುಭವಿಸಬಹುದು. ಇದರಿಂದ ಮಗುವಿನ ಬೆಳವಣಿಗೆ ಕುಂಠಿತವಾಗಬಹುದು ಮತ್ತು ಮಗು ಅವಧಿಗೂ ಮುನ್ನವೇ ಜನಿಸಬಹುದು. ಇಂದು ನಾವು ಮಗು ಗರ್ಭದಲ್ಲಿ ಯಾವಾಗ ಮತ್ತು ಎಷ್ಟು ನಿದ್ರೆ ಮಾಡುತ್ತದೆ ಮತ್ತು ಉಳಿದ ಸಮಯದಲ್ಲಿ ಅದು ಏನು ಮಾಡುತ್ತದೆ ಎಂಬುದನ್ನು ನಿಮಗೆ ತಿಳಿಸುತ್ತೇವೆ. ಯಾವುದೇ ಮಗುವಿನ ಬೆಳವಣಿಗೆ ಪೂರ್ಣಗೊಳ್ಳುವುದು ತಾಯಿಯ ಗರ್ಭದಲ್ಲಿ 9 ತಿಂಗಳು ಇದ್ದ ನಂತರವೇ. ಅದಕ್ಕಾಗಿಯೇ ವೈದ್ಯರು ಸೇರಿದಂತೆ ಎಲ್ಲಾ ತಜ್ಞರು ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಮಗುವನ್ನು 9 ತಿಂಗಳುಗಳ ಕಾಲ ಇಟ್ಟುಕೊಳ್ಳುವುದು ಮುಖ್ಯ ಎಂದು ಸಲಹೆ ನೀಡುತ್ತಾರೆ. ಆದರೆ ಈ ತಿಂಗಳುಗಳಲ್ಲಿ ಮಗು ಎಷ್ಟು ಹೊತ್ತು ಮಲಗುತ್ತದೆ ಮತ್ತು ಉಳಿದ ಸಮಯದಲ್ಲಿ ಅವನು ಏನು ಮಾಡುತ್ತಾನೆಂದು ನಿಮಗೆ ತಿಳಿದಿದೆಯೇ? ಇಂದು ನಾವು ನಿಮಗೆ…