Facebook Twitter Instagram YouTube
    ಕನ್ನಡ English తెలుగు
    Wednesday, September 20
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Mandya; ಮಂಡ್ಯದ ಪೋಲೀಸ್ ಪೇದೆಯ ಈ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

    Author AINBy Author AINJune 23, 2023
    Share
    Facebook Twitter LinkedIn Pinterest Email

    ಮಂಡ್ಯ :- ಪೊಲೀಸರೆಂದರೆ ಜನರಿಗೆ ಗೌರವಕ್ಕಿಂತ ಜಾಸ್ತಿ ಭಯವೇ. ಜನ ಪೊಲೀಸರನ್ನು ನೋಡಿದ ಕೂಡಲೇ ಸ್ಥಳದಿಂದ ಕಾಲ್ಕಿಳಲು ಪ್ರಯತ್ನಿಸುತ್ತಾರೆ. ಇದಕ್ಕೆ ಕಾರಣ ಕೆಲವು ಪೊಲೀಸರ ದುರ್ವರ್ತನೆ. ಆದರೆ, ಈಗ ಪೊಲೀಸರು ಹಾಗೂ ಪೊಲೀಸ್‌ ಠಾಣೆ ಮೊದಲಿನಂತಿಲ್ಲ. ಪೊಲೀಸರು ಕೂಡ ತಮಗೂ ಮನವೀಯತೆ ಇದೇ ಎಂಬುದನ್ನು ಹಲವು ಸಂದರ್ಭಗಳಲ್ಲಿ ತೋರಿಸಿಕೊಟ್ಟಿದ್ದಾರೆ.

    ಇದಕ್ಕೆ ಮತ್ತಷ್ಟು ಪುಷ್ಟಿ ಎಂಬಂತೆ ಮಂಡ್ಯ ಜಿಲ್ಲೆಯ
    ಪೊಲೀಸ್‌ ಪೇದೆಯೊಬ್ಬರು ಬುದ್ದಿ ಮಾಂದ್ಯತೆಯಿಂದ ಹುಚ್ಚುಚ್ಚಾಗಿ ತಿರುಗುತ್ತಿದ್ದ ಯುವಕನನ್ನು ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ, ಊಟ ಮಾಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    Demo

    ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಪೋಲೀಸ್ ಠಾಣೆಯ ಅಪರಾಧ ವಿಭಾಗದ ಹೆಡ್ ಕಾನ್ಸ್ಟೇಬಲ್ ಪ್ರಭುಸ್ವಾಮಿ ಎಂಬುವವರೇ ಹೀಗೆ ಮಾನವೀಯತೆ ಮೆರೆದ ಪೊಲೀಸ್‌ ಆಗಿದ್ದಾರೆ.

    ಹೆಡ್ ಕಾನ್ಸ್ಟೇಬಲ್ ಪ್ರಭುಸ್ವಾಮಿ ಮತ್ತು ಪೇದೆ ಅರುಣ್ ಕೆ.ಎಂ.ದೊಡ್ಡಿ ಪೋಲೀಸ್ ಠಾಣಾ ವ್ಯಾಪ್ತಿಯ ಹೆಚ್.ಹೊಸಹಳ್ಳಿ ಗ್ರಾಮದ ಬಳಿ ಗಸ್ತಿನಲ್ಲಿದ್ದ ವೇಳೆ ಅದೇ ಗ್ರಾಮದ ಬುದ್ದಿಮಾಂದ್ಯ ಯುವಕ ಮಹದೇವ (41) ಎಂಬುವವರನ್ನು ಗಮನಿಸಿದ್ದಾರೆ. ಈತನ ಬಗ್ಗೆ ಸ್ಥಳೀಯರನ್ನು ವಿಚಾರಣೆ ಮಾಡಿದಾಗ ಹೆಚ್.ಹೊಸಹಳ್ಳಿ ಗ್ರಾಮದ ಯುವಕನಾಗಿದ್ದು, ಈತ ಹುಟ್ಟಿನಿಂದಲೇ ಬುದ್ದಿಮಾಂದ್ಯ ಎಂಬ ಕಾರಣಕ್ಕೆ ಆತನ ಕುಟುಂಬಸ್ಥರು ಸಹ ಆತನ ಪೋಷಣೆ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂಬುದಾಗಿ ಸಾರ್ವಜನಿಕರು ತಿಳಿಸಿದ್ದಾರೆ.

    ತಕ್ಷಣವೇ ಪೇದೆ ಪ್ರಭುಸ್ವಾಮಿ ಬುದ್ದಿ ಮಾಂದ್ಯ ಯುವಕನಿಗೆ ಬಿಸ್ಕೇಟ್, ಊಟ, ನೀರು ಕೊಡಿಸಿದ್ದಾರೆ. ಬಳಿಕ ಸಮಾಜ ಸೇವಕರಾದ ಹಲಗೂರಿನ ಲಿಂಗಪಟ್ಟಣ ಗ್ರಾಮದ ಮುಖ್ಯ ಶಿಕ್ಷಕ ಸುಂದ್ರಪ್ಪ ಮತ್ತು ಕ್ಷೌರಿಕ ನಾಗರಾಜ್ ಅವರನ್ನು ಕರೆಸಿಕೊಂಡಿದ್ದಾರೆ. ನಂತರ ತಲೆ ಕೂದಲು ತೆಗೆಯಲು ಮುಂದಾದ ವೇಳೆ ಕೆಲಕಾಲ ವಿರೋಧ ಮಾಡಿದ್ದಾನೆ. ಆದರೆ, ಎಸ್.ಐ.ಹಾಗಲಹಳ್ಳಿ ಮತ್ತು ಹೆಚ್.ಹೊಸಹಳ್ಳಿ ಗ್ರಾಮದ ಸಾರ್ವಜನಿಕರ ಸಹಾಯದೊಂದಿಗೆ ತಲೆ ಕೂದಲನ್ನು ತೆಗೆದು, ನಾಲೆಯಲ್ಲಿ ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ ಊಟ ಮಾಡಿಸಿದ ನಂತರ ಅವರ ಸಂಬಂಧಿಕರೊಂದಿಗೆ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ.

    ಹೀಗೆ ಒಂದಿಲ್ಲೊಂದು ಸಮಾಜಸೇವೆಯಲ್ಲಿ ತೊಡಗುವ ಪ್ರಭುಸ್ವಾಮಿ ಪರಿಸರ ಸಂರಕ್ಷಣೆಯಲ್ಲಿ ಸದಾ ಮುಂದು. ಈಗಾಗಲೇ ಸಾವಿರಾರು ಗಿಡಗಳನ್ನು ನೆಡುವ ಮೂಲಕ ಗಿಡ ನೆಡು – ಮರ ಮಾಡು ಎಂಬ ಆಂದೋಲನದ ಅಡಿಯಲ್ಲಿ ಪ್ರಕೃತಿಗೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ. ಅದಲ್ಲದೇ ರಕ್ತದಾನ ಶಿಬಿರ, ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಕಾರ್ಯಕ್ರಮ, ಬುದ್ದಿ ಮಾಂದ್ಯರನ್ನು ಮತ್ತೆ ಸಮಾಜಕ್ಕೆ ತರುವ ಕೆಲಸ, ಕನ್ನಡ ರಾಜ್ಯೋತ್ಸವ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಇತರೇ ಪೋಲೀಸರಿಗೆ ಮಾದರಿಯಾಗಿದ್ದಾರೆ.

    ಇವರ ಸಾಮಾಜಿಕ ಸೇವೆ ಮತ್ತು ಅಪರಾಧ ಪ್ರಕರಣಗಳ ಪತ್ತೆ ಕಾರ್ಯದ ವೈಖರಿಯನ್ನು ಗಮನಿಸಿದ ಇವರ ಮೇಲಾಧಿಕಾರಿಗಳು 2022 ರ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಚಿನ್ನದ ಪದಕ ದೊರೆತಿದೆ.

    ಇವರ ಸಾಮಾಜಿಕ ಕಾರ್ಯಕ್ಕೆ ಸಾರ್ವಜನಿಕರು ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದು, ಇಲಾಖೆಯ ಮೇಲಾಧಿಕಾರಿಗಳು ಕೂಡ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

     

    ವರದಿ : ಗಿರೀಶ್ ರಾಜ್ ಮಂಡ್ಯ

    Demo
    Share. Facebook Twitter LinkedIn Email WhatsApp

    Related Posts

    Shivraj Thandagi: 80 ಕೋಟಿ ಸಚಿವರಿಗೆ ಹಾಗೂ 2500 ಕೋಟಿ ಮುಖ್ಯಮಂತ್ರಿ ಸೇಲ್ ಆಗಬಹುದು: ಶಿವರಾಜ ತಂಗಡಗಿ

    September 20, 2023

    ಕಾರ್ಖಾನೆಯಲ್ಲಿ ಕಾಪರ್ ವೈರ್ ಹಾಗೂ ವಾಹನಗಳ ದರೋಡೆ ಮಾಡಿದ್ದ ಆರೋಪಿಗಳು ಅರೆಸ್ಟ್

    September 20, 2023

    Arvinda Bellad:‌ ಜಗದೀಶ್ ಶೆಟ್ಟರ್ ಮನಸ್ಸು ಇನ್ನೂ ಬಿಜೆಪಿಯಲ್ಲಿದೆ ಅನಿಸುತ್ತೆ: ಅರವಿಂದ ಬೆಲ್ಲದ್

    September 20, 2023

    Nelamangala Breaking; ಈಜಲು ಕ್ವಾರಿಗೆ ಹೋಗಿದ್ದ ಯುವಕ ಶವವಾಗಿ ಪತ್ತೆ

    September 20, 2023

    Gadaga Breaking; ಜಿಲ್ಲೆಯ 6 ತಾಲೂಕು ಬರಗಾಲ ಘೋಷಣೆ, ಪರಿಸ್ಥಿತಿ ಎದುರಿಸಲು ಸಿದ್ಧ – ಎಚ್‌.ಕೆ. ಪಾಟೀಲ್

    September 20, 2023

    ವರೂರು ಗ್ರಾಮದ ನವಗ್ರಹ ತೀರ್ಥಕ್ಷೇತ್ರದಲ್ಲಿ ಮೃತ್ಯುಂಜಯ ಮಹಾಯಾಗ

    September 19, 2023

    Accident; ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಸವಾರ ಸಾವು

    September 19, 2023

    ಚೈತ್ರಾ ಕುಂದಾಪುರ್ ಜೊತೆ ಬೊಮ್ಮಾಯಿ ನೇರ ಸಂಪರ್ಕ – ಎಂ. ಲಕ್ಷ್ಮಣ್ ಆರೋಪ

    September 19, 2023

    Kumaraswamy; ಮಹಿಳಾ ಮೀಸಲು ವಿಧೇಯಕ ಸ್ವಾಗತಿಸಿದ ಹೆಚ್.ಡಿ.ಕುಮಾರಸ್ವಾಮಿ

    September 19, 2023

    ಈದ್ಗಾ ಮೈದಾನದಲ್ಲಿ ಶಾಂತಿಯುತವಾಗಿ ಪ್ರತಿಷ್ಠಾಪನೆ ಮಾಡಿದ ಗಣೇಶ ಮೂರ್ತಿ

    September 19, 2023

    ಉಪಜಾತಿಗಳ ವಿಂಗಡಣೆಯಿಂದ ವೀರಶೈವ ಸಮಾಜ ಸೊರಗುತ್ತಿದೆ: ಶ್ರೀ ರಂಭಾಪುರಿ ಜಗದ್ಗುರುಗಳು

    September 19, 2023

    HD Kumaraswamy: ರಾಜ್ಯಸಭೆಯಲ್ಲಿ ದೇವೇಗೌಡರು ಮಾತನಾಡುತ್ತಿದ್ದರೆ, ಖರ್ಗೆ ಮೌನವಾಗಿದ್ದರು: ಹೆಚ್.ಡಿ.ಕುಮಾರಸ್ವಾಮಿ

    September 19, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.