Facebook Twitter Instagram YouTube
    ಕನ್ನಡ     English     తెలుగు
    Sunday, January 29
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home » ರೈತರು ಆಸಕ್ತಿ ತೋರದ ಮಾರುಕಟ್ಟೆಯನ್ನು ಬಾಡಿಗೆಗೆ ನೀಡಲು ಎಪಿಎಂಸಿ ಸಿದ್ಧತೆ

    ರೈತರು ಆಸಕ್ತಿ ತೋರದ ಮಾರುಕಟ್ಟೆಯನ್ನು ಬಾಡಿಗೆಗೆ ನೀಡಲು ಎಪಿಎಂಸಿ ಸಿದ್ಧತೆ

    ain userBy ain userJanuary 2, 2022
    Share
    Facebook Twitter LinkedIn Pinterest Email

    ಹುಬ್ಬಳ್ಳಿ: ಅಮರಗೋಳದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನಿರ್ಮಿಸಿರುವ ‘ಭಾನುವಾರ ಮಾರುಕಟ್ಟೆ’ ಇನ್ನೂ ಬಳಕೆಯಾಗುತ್ತಿಲ್ಲ. ರೈತರು ತಾವು ಬೆಳೆದ ಬೆಳೆಗಳನ್ನು ಪ್ರತಿ ಭಾನುವಾರ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಇಲ್ಲಿ ಅವಕಾಶ ನೀಡಲು ಯೋಜಿಸಲಾಗಿತ್ತು. ಆದರೆ, ರೈತರು ಆಸಕ್ತಿ ತೋರದ ಕಾರಣ ಮಾರುಕಟ್ಟೆಯನ್ನು ಬಾಡಿಗೆಗೆ ನೀಡಲು ಎಪಿಎಂಸಿ ಇದೀಗ ಸಿದ್ಧತೆ ನಡೆಸಿದೆ

    2017ರಲ್ಲಿ ಸಾಲಿನಲ್ಲಿ ₹60 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಈ ಮಾರುಕಟ್ಟೆಯಲ್ಲಿ 14 ಮಳಿಗೆಗಳು, ಎರಡು ಹರಾಜು ಕಟ್ಟೆ, ರೈತರ ವಿಶ್ರಾಂತಿ ಸ್ಥಳ ಹಾಗೂ ಕಚೇರಿ ಇದೆ. ಅವಳಿ ನಗರಕ್ಕೆ ಸಂಪರ್ಕ ಕಲ್ಪಿಸುವ ಬಿಆರ್‌ಟಿಎಸ್ ಬಸ್ ನಿಲ್ದಾಣದ ಎದುರಿಗೆ ಇರುವ ಈ ಸ್ಥಳ, ಐದು ವರ್ಷಗಳಿಂದ ಸರಿಯಾಗಿ ಬಳಕೆಯಾಗದೇ ಪಾಳು ಬಿದ್ದಿದೆ.

    Demo

    ‘ಧಾರವಾಡ ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಮಾರುಕಟ್ಟೆಯು ವ್ಯಾಪಾರಕ್ಕೆ ಪ್ರಶಸ್ತ ಸ್ಥಳವಾಗಿದೆ. ಹೂ, ಹಣ್ಣು, ತರಕಾರಿ, ಕಾಳು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುವ ರೈತರು ಈ ಜಾಗದ ಪ್ರಯೋಜನ ಪಡೆಯಬಹುದು ಎಂದು ಅಂದುಕೊಂಡಿದ್ದೆವು. ಈ ಕುರಿತು ಹೆಚ್ಚಿನ ಪ್ರಚಾರ ಕೂಡ ಮಾಡಿದ್ದೆವು’ ಎಂದು ಎಪಿಎಂಸಿಯ ಸಹಾಯಕ ಕಾರ್ಯದರ್ಶಿ ಅನಿಲಕುಮಾರ ತಿಳಿಸಿದ್ದಾರೆ.

    ಸಮಿತಿ ತೀರ್ಮಾನ: ‘ಮಳಿಗೆಗಳನ್ನು ಬಳಸಿಕೊಳ್ಳಲು ರೈತ ಬೆಳೆಗಾರರ ಸಂಘದವರಿಗೂ ತಿಳಿಸಲಾಗಿತ್ತು. ವಾರವಿಡೀ ಬಳಕೆಗೂ ಅವಕಾಶ ನೀಡಲಾಗಿತ್ತು. ಆರಂಭದಲ್ಲಿ ಕೆಲವು ಬೆಳೆಗಾರರು ಉತ್ಸಾಹ ತೋರಿದರು. ಬಳಿಕ ಗ್ರಾಹಕರೇ ಬರುತ್ತಿಲ್ಲ ಎಂದು ಅಲ್ಲಿಗೆ ವ್ಯಾಪಾರಕ್ಕೆ ಬರುವುದನ್ನೇ ಬಿಟ್ಟರು. ಹೀಗಾಗಿ, ಎಪಿಎಂಸಿ ಸಮಿತಿಯು ಆ ಜಾಗ ಬಾಡಿಗೆ ನೀಡಲು ತೀರ್ಮಾನಿಸಿ ಪ್ರಸ್ತಾವ ಕಳಿಸಿತ್ತು. ಅದಕ್ಕೆ ನಿರ್ದೇಶಕರಿಂದ ಒಪ್ಪಿಗೆ ಸಿಕ್ಕಿದೆ’ ಎಂದು ಹೇಳಿದರು.

    ‘ಮಳಿಗೆಗಳು ಸೇರಿದಂತೆ ವಿವಿಧ ಸ್ಥಳಗಳನ್ನು ಮೌಲ್ಯಮಾಪನ ಮಾಡಿ ಬಾಡಿಗೆ ನಿಗದಿಪಡಿಸಿ, ಟೆಂಡರ್ ಕರೆಯಲಾಗುವುದು. ವ್ಯಕ್ತಿಗಳು ಅಥವಾ ಸಂಘ–ಸಂಸ್ಥೆಗಳು ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು. ಈ ರೀತಿಯಾದರೂ ಆ ಸ್ಥಳ ಬಳಕೆಯಾಗುವುದರಿಂದ, ಎಪಿಎಂಸಿಗೂ ಬಾಡಿಗೆ ರೂಪದಲ್ಲಿ ಆದಾಯ ಬರಲಿದೆ’ ಎಂದರು.

    ಗ್ರಾಹಕರೇ ಸುಳಿಯುವುದಿಲ್ಲ: ‘ಭಾನುವಾರ ಮಾರುಕಟ್ಟೆಯು ರಸ್ತೆ ಬದಿ ಇದ್ದರೂ, ಜನವಸತಿ ಪ್ರದೇಶ ಅಲ್ಲದಿರುವುದರಿಂದ ಅಲ್ಲಿಗೆ ಖರೀದಿಗಾಗಿ ಬರುವುದು ಕಡಿಮೆ. ನಗರದ ಬಹುತೇಕ ಪ್ರದೇಶಗಳಲ್ಲಿ ವಾರದ ಸಂತೆಗಳು ನಡೆಯುತ್ತವೆ. ಅಲ್ಲಿಗೂ ರೈತರೇ ಹೆಚ್ಚಾಗಿ ವ್ಯಾಪಾರಕ್ಕೆ ಬರುವುದರಿಂದ ಜನರು ತಮಗೆ ಬೇಕಾದ್ದನ್ನೆಲ್ಲ ಅಲ್ಲೇ ಖರೀದಿಸುತ್ತಾರೆ. ಭಾನುವಾರ ಮಾರುಕಟ್ಟೆಯಲ್ಲಿಅಂತಹ ವಿಶೇಷ ಏನಿರುವುದಿಲ್ಲ ಅಂದುಕೊಂಡು ಜನ ಅತ್ತ ಸುಳಿಯುವುದೇ ಇಲ್ಲ’ ಎಂದು ರೈತ ಈಶ್ವರ ಪಾಟೀಲ ಅಭಿಪ್ರಾಯಪಟ್ಟರು.

    ವರದಿ: ಕಲ್ಮೇಶ್

    Share. Facebook Twitter LinkedIn Email WhatsApp

    Related Posts

    ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಎಸ್‌ಟಿ ಮೀಸಲಾತಿಗಾಗಿ ಪಾದೆಯಾತ್ರೆ: ಕೆ.ಪಿ. ನಂಜುಂಡಿ ಭಾಗಿ

    January 29, 2023

    ಮೈಸೂರು ವಿವಿಯಲ್ಲಿ ರಾಜ್ಯ ಮಟ್ಟದ ಜಾನಪದ ಪ್ರಪಂಚ ಜಾನಪದ ಪ್ರಶಸ್ತಿ ಪ್ರದಾನ

    January 29, 2023

    ನಾಡಿನ ಶ್ರೇಷ್ಠ ಉದ್ಯಮಿ ಅಂಬಾದಾಸ್ ಕಾಮೂರ್ತಿ: ಶ್ರೀ ಶ್ರೀಮದ್ ಜಗದ್ಗುರು ಶಿವಶಂಕರ್ ಶಿವಾಚಾರ್ಯ ಮಹಾಸ್ವಾಮಿಗಳು

    January 29, 2023

    ಪ್ರಜಾಧ್ವನಿ ಯಾತ್ರೆಯಿಂದ ಬಿಜೆಪಿಗೆ ಭಯ ಶುರುವಾಗಿದೆ: ಸಿದ್ದರಾಮಯ್ಯ

    January 29, 2023

    ಸಿದ್ದರಾಮಯ್ಯ ತಾಕತ್ ಇದ್ದರೆ, ಸ್ವಂತ ಪಕ್ಷ ಕಟ್ಟಿ, ಬರೀ 5 ಸೀಟು ಗೆಲ್ಲಲಿ: ಕುಮಾರಸ್ವಾಮಿ

    January 29, 2023

    ಕಾಂಗ್ರೆಸ್ ಸರಕಾರ ರಾಜ್ಯವನ್ನು ಅಂಧಕ್ಕಾರದಲ್ಲಿ ಮುಳುಗಿಸುತ್ತೆ: ಅರುಣ್ ಸಿಂಗ್

    January 29, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.