ಬೆಳಗಾವಿ: ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಶರ್ಮನ್ ಇಂಗ್ಲಿಷ್ ಮೀಡಿಯಮ್ ಹೈ ಸ್ಕೂಲ್ ವಿದ್ಯಾರ್ಥಿಗಳು ಹಾಗೂ ಬೆಳಗಾವಿ ಪೊಲೀಸ್ ಕಮಿಷನರ್ ಎಸ್.ಎನ್ ಸಿದ್ದರಾಮಪ್ಪ, ಡಿಸಿಪಿ ಸ್ನೇಹ, ಡಿಸಿಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಲಾಯಿತು.
ಈ ವೇಳೆ ಮಾತನಾಡಿದ ಪೊಲೀಸರು, ಮದ್ಯಪಾನದಿಂದ ಕೌಟುಂಬಿಕ ಮತ್ತು ಸಾಮಾಜಿಕ ಸ್ವಾಸ್ಥ್ಯ ಹದಗೆಡಲಿದೆ. ಹಣ, ಗುಣ ಎರಡೂ ಹಾಳಾಗಲಿದ್ದು, ಕುಟುಂಬಗಳು ಬೀದಿಗೆ ಬರಲಿವೆ. ಕುಡಿತ ಸೇರಿದಂತೆ ನಾನಾ ಚಟಗಳಿಂದ ಅದಷ್ಟೋ ಕುಟುಂಬಗಳು ಹಾಳಾಗಿ ಹೋಗಿರುವ ಉದಾಹರಣೆಗಳು ಬೇಕಷ್ಟಿವೆ. ಮಾದಕ ದ್ರವ್ಯಗಳ ಬಗೆಗೆ ಅರಿವು ಮೂಡಿಸುವಲ್ಲಿ ವಿದ್ಯಾರ್ಥಿಗಳು ಕಾಳಜಿ ತೋರಬೇಕಿದೆ.
ಕೇವಲ ವಿದ್ಯಾರ್ಜನೆಗೆ ಸೀಮಿತವಾಗದೇ ಸಾಮಾಜಿಕ ಕಳಕಳಿ ಪ್ರದರ್ಶಿಸುವಂತೆ ಕಿವಿಮಾತು ಹೇಳಿದರು. ಜೊತೆಗೆ ಕೆಲವು ಘೋಷಣಾ ವಾಕ್ಯಗಳೊಂದಿಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಯಿತು. ಇನ್ನೂ ಈ ಸಂದರ್ಭದಲ್ಲಿ ಬೆಳಗಾವಿ ಪೊಲೀಸ್ ಕಮಿಷನರ್ ಎಸ್.ಎನ್ ಸಿದ್ದರಾಮಪ್ಪ, ಡಿಸಿಪಿ ಸ್ನೇಹ, ಡಿಸಿಪಿ ರೋಹನ್ ಜಗದೀಶ್, ಪೊಲೀಸ್ ಸಿಬ್ಬಂದಿಗಳು ಹಾಗೂ ಶರ್ಮನ್ ಇಂಗ್ಲಿಷ್ ಮೀಡಿಯಮ್ ಹೈ ಸ್ಕೂಲ್ ವಿದ್ಯಾರ್ಥಿಗಳು ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳ ಸೇರಿ ಪ್ರಾಂಶುಪಾಲರು ಪ್ರಿಯಾ ಮುಂದಿನಮನಿ, ಬಸಯ್ಯಸ್ವಾಮಿ ಹಿರೇಮಠ ಹಾಜರಿದ್ದರು.