Hubballi: ನೈಋತ್ಯ ರೈಲ್ವೆ ವಲಯದ ಡಿಜಿಎಂ ಆಗಿ ಅಣ್ಣಾದೊರೈ ಅಧಿಕಾರ ಸ್ವೀಕಾರ!

ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯದ ಹಿರಿಯ ಉಪ ಪ್ರಧಾನ ವ್ಯವಸ್ಥಾಪಕ ಮತ್ತು ಮುಖ್ಯ ವೀಕ್ಷಣಾ ಅಧಿಕಾರಿಯಾಗಿ ಅಣ್ಣಾದೊರೈ ಅವರು ಗುರುವಾರ ಅಧಿಕಾರ ವಹಿಸಿಕೊಂಡರು. ಮಹಿಳೆಯರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಬೇಕು; ನ್ಯಾ.ಮಂಜುನಾಥ್! ಅವರು 1990 ರ ಬ್ಯಾಚ್‌ನ ಭಾರತೀಯ ರೈಲ್ವೆ ಸ್ಪೋರ್ಟ್ಸ್ ಸರ್ವಿಸ್ (ಐಆರ್‌ಎಸ್‌ಎಸ್‌) ಅಧಿಕಾರಿಯಾಗಿದ್ದಾರೆ. ನೈಋತ್ಯ ರೈಲ್ವೆಯ ಹಿರಿಯ ಉಪ ಪ್ರಧಾನ ವ್ಯವಸ್ಥಾಪಕ ಮತ್ತು ಮುಖ್ಯ ವಿಚಕ್ಷಣಾ ಅಧಿಕಾರಿಯಾಗಿ ನೇಮಕಗೊಳ್ಳುವ ಮೊದಲು ಅವರು ದಕ್ಷಿಣ ರೈಲ್ವೆಯ ಮುಖ್ಯ ಸಾಮಗ್ರಿಗಳ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು.