ಬೆಂಗಳೂರು: ಯಾವುದೇ ಒಂದು ಸಿನಿಮಾ ಶತದಿನೋತ್ಸವ ಆಚರಿಸಿದ್ರೆ ಆ ಚಿತ್ರ ತಂಡಕ್ಕೆ ಎಲ್ಲಿಲ್ಲದ ಸಂಭ್ರಮ.ನಟ ದರ್ಶನ್ ನಟಿಸಿ ಅದೆಷ್ಟೋ ಸಿನಿಮಾಗಳು ಕೂಡ 100 ದಿನ ಕಂಪ್ಲೀಟ್ ಮಾಡಿ ಬೆಳ್ಳಿ ಪರದೆಯಲ್ಲಿ ರಾರಾಜಿಸಿವೆ ನಿಜ ರೇಣುಕಾ ಸ್ವಾಮಿ ಕೊಲೆ ಕೇಸ್ ನಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ಶತಕ ಬಾರಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲು ಸೇರಿ ಇಂದಿಗೆ ನೂರು ದಿನಗಳೇ ಕಳೆದಿವೆ.ಜೂನ್ 22 ರಂದು ಪೋಲಿಸರು ನ್ಯಾಯಾಂಗ ಬಂಧನಕ್ಕೆ ನೀಡಿದ್ರು, ಪರಪ್ಪನ ಅಗ್ರಹಾರ ಜೈಲಿನಲ್ಲಿ 68 ದಿನಗಳ ಕಾಲ ಕಳೆದ ದಾಸ. ವಿಲ್ಸನ್ ಗಾರ್ಡನ್ ನಾಗನ ಜೊತೆ ಕಾಣಿಸಿಕೊಂಡು ರಾಜಾತಿಥ್ಯ ಪಡೆದು ಬಾರಿ ಸದ್ದು ಮಾಡಿದ್ರು. ಈ ಹಿನ್ನಲೆ ದರ್ಶನ್ ಸೇರಿದಂತೆ ಹಲವು ಆರೋಪಿಗಳನ್ನ ರಾಜ್ಯದ ವಿವಿಧ ಕಾರಾಗೃಹಗಳಿಗೆ ಶಿಫ್ಟ್ ಮಾಡಿದ್ರು.
Mysore Dasara 2024: ಮೈಸೂರು ದಸರಾ ಮಹೋತ್ಸವದ ವೇಳಾಪಟ್ಟಿ ಬಿಡುಗಡೆ: ಜಂಬೂಸವಾರಿ ಯಾವಾಗ ಗೊತ್ತಾ..?
ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ 68 ದಿನಗಳ ಕಾಲ ಇದ್ದು. ಯಾವಾಗ ಪೋಟೊ ವೈರಲ್ ಆಯ್ತೋ ಆಗ ನ್ಯಾಯಾಲಯದ ಅನುಮತಿ ಪಡೆದು ಆಗಸ್ಟ್ 29 ರಂದು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಯಿತು. ಇನ್ನೂ ರಾಜಾತಿಥ್ಯ ಪ್ರಕರಣದ ಲ್ಲಿ ಮೂರು ಕೇಸ್ ದಾಖಲಾಗಿದ್ದು ಎರಡು ಕೇಸ್ ಗಳಲ್ಲಿ ದರ್ಶನ್ ಎ೧ ಆರೋಪಿ.
ಅಲ್ಲದೆ ಇದೇ ಕೇಸ್ ಗಳಲ್ಲಿ ಹತ್ತು ಜನ ಜೈಲು ಅಧಿಕಾರಿಗಳು ಕೂಡ ಸಸ್ಪೆಂಡ್ ಆಗಿದ್ದಾರೆ.ಇದರ ಚಾರ್ಜ್ ಶೀಟ್ ಸಲ್ಲಿಸಲು ಪೋಲಿಸರು ಸಿದ್ದತೆ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ,68 ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ, 32 ದಿನ ಬಳ್ಳಾರಿ ಜೈಲಿನ ಲ್ಲಿ ಕಳೆದರಿರುವ ದರ್ಶನ್ .ನಾಳೆ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.ನಾಳೆ ಬೇಲ್ ಸಿಗುತ್ತಾ.ಇಲ್ಲ ಮತ್ತಷ್ಟು ದಿನ ಜೈಲಿನಲ್ಲಿ ಕಾಲ ಕಳೆಯಬೇಕಾ ಅನ್ನೋದನ್ನ ಕಾದು ನೋಡಬೇಕು.