Facebook Twitter Instagram YouTube
    ಕನ್ನಡ English తెలుగు
    Thursday, November 30
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    ಶಿಕ್ಷಕ ವೃತ್ತಿ ಬಿಟ್ಟು ಪರಿಸರದ ಜಾಗೃತಿ ಮೂಡಿಸುತ್ತಿರುವ ಯುವಕ: ಅಯೋಧ್ಯೆಯಿಂದ ಆರಂಭವಾಗಿದೆ ಯಾತ್ರೆ

    AIN AuthorBy AIN AuthorOctober 4, 2023
    Share
    Facebook Twitter LinkedIn Pinterest Email

    ಧಾರವಾಡ: ಆತ ವೃತ್ತಿಯಿಂದ ಶಿಕ್ಷಕರಾಗಿದ್ದರೂ ಆ ವೃತ್ತಿಗೆ ರಾಜೀನಾಮೆ ಕೊಟ್ಟು ಸಮಾಜಕ್ಕೊಂದು ಏನಾದರೂ ಕೊಡುಗೆ ನೀಡಬೇಕು ಎಂಬ ಆಸೆ ಇಟ್ಟುಕೊಂಡ ವ್ಯಕ್ತಿ. ಬದಲಾದ ಕಾಲಘಟ್ಟದಲ್ಲಿ ನಾವೆಲ್ಲ ವಿಷಕಾರಿ ಗಾಳಿಯಲ್ಲೇ ಉಸಿರಾಡುವಂತಾಗಿದೆ. ಪರಿಸರದ ಬಗ್ಗೆ ನಮಗೆಲ್ಲ ಕಿಂಚಿತ್ತೂ ಕಾಳಜಿಯೇ ಇಲ್ಲದಂತಾಗಿದೆ. ಅಭಿವೃದ್ಧಿಯ ನೆಪದಲ್ಲಿ ಮರಗಳ ಮಾರಣಹೋಮವೇ ನಡೆಯುತ್ತಿದೆ. ಹೀಗಾಗಿ ಮರ ಬೆಳೆಸಿ ಪರಿಸರ ಉಳಿಸಿ ಎಂಬ ಉದ್ದೇಶದೊಂದಿಗೆ ಯುವಕನೊಬ್ಬ ತನಗಿದ್ದ ಶಿಕ್ಷಕ ವೃತ್ತಿಯನ್ನೇ ಬಿಟ್ಟು ದೇಶದಾದ್ಯಂತ ಪಾದಯಾತ್ರೆ ಮಾಡುವ ಮೂಲಕ ಪರಿಸರ ಮತ್ತು ಮರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾನೆ.

    ಹೌದು! ದೃಶ್ಯಗಳಲ್ಲಿ ನೀವು ನೋಡುತ್ತಿರುವ ಈ ಯುವಕನ ಹೆಸರು ಅಶುತೋಷ್ ಪಾಂಡೆ. ಮೂಲತಃ ಉತ್ತರ ಪ್ರದೇಶದವನು. ವೃತ್ತಿಯಿಂದ ಶಿಕ್ಷಕನಾದರೂ ಪರಿಸರದ ಮೇಲೆ ತನಗಿರುವ ಕಾಳಜಿ ಇತರರಿಗೂ ಹುಟ್ಟಲಿ ಎಂಬ ಉದ್ದೇಶದಿಂದ ಶಿಕ್ಷಕ ಕೆಲಸಕ್ಕೆ ರಾಜೀನಾಮೆ ಕೊಟ್ಟು ಅದೇ ಹಣದಿಂದ ಇದೀಗ ಪಾದಯಾತ್ರೆಯ ಮೂಲಕವೇ ದೇಶಪರ್ಯಟನೆ ಮಾಡುವ ಮೂಲಕ ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾನೆ. ಒಟ್ಟು 21 ರಾಜ್ಯಗಳಲ್ಲಿ ಸುತ್ತಿ ಜನರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಪರಿಸರ ಉಳಿಸುವ ಮತ್ತು ಸಸಿಗಳನ್ನು ನೆಡುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಅಶುತೋಷ್ ಅವರದ್ದಾಗಿದೆ. ಈಗಾಗಲೇ ಅನೇಕ ರಾಜ್ಯಗಳನ್ನು ಸುತ್ತಿ ಅಶುತೋಷ್ ಕರ್ನಾಟಕದ ಧಾರವಾಡಕ್ಕೂ ಬಂದಿದ್ದರು.

    Demo

    Shocking News: ಅಯ್ಯೋ.. 8 ವರ್ಷದ ಬಾಲಕಿ ಮೇಲೆ 9 ವರ್ಷದ ಬಾಲಕನಿಂದ ಅತ್ಯಾಚಾರ..!

    ಇಲ್ಲಿನ ಜಿಲ್ಲಾಧಿಕಾರಿಗಳಿಗೂ ಭೇಟಿಯಾಗಿ ತಮ್ಮ ಪಾದಯಾತ್ರೆಯ ಉದ್ದೇಶ ತಿಳಿಸಿದ್ದಾರೆ. ಒಟ್ಟು 16 ಸಾವಿರ ಕಿಲೋ ಮೀಟರ್ ಸಂಚರಿಸುವ ಪಾದಯಾತ್ರೆ ಇವರದ್ದಾಗಿದ್ದು, 2022ರ ಡಿ.4 ರಂದು ಅಯೋಧ್ಯೆಯಿಂದ ಈ ಪಾದಯಾತ್ರೆ ಆರಂಭವಾಗಿದೆ. 2026ಕ್ಕೆ ಅಶುತೋಷ್ ಅವರ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ. 1ನೇ ತರಗತಿಯಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿಯೊಂದು ಮಗುವಿಗೂ ಒಂದೊಂದು ಸಸಿ ನೀಡುವ ಯೋಜನೆಯನ್ನು ಆಯಾ ರಾಜ್ಯ ಸರ್ಕಾರಗಳು ಮಾಡಬೇಕು ಎಂಬುದು ಇವರ ಉದ್ದೇಶವಾಗಿದೆ. ಈ ಸಂಬಂಧ ರಾಷ್ಟ್ರಪತಿ, ಪ್ರಧಾನಮಂತ್ರಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಅಶುತೋಷ್ ಪತ್ರ ಬರೆದಿದ್ದು ಯಾರಿಂದಲೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಂತೆ.

    ಕರ್ನಾಟಕದಿಂದ ಗೋವಾ, ದೆಹಲಿ, ಜಮ್ಮು, ಲಡಾಖ್ ಸೇರಿದಂತೆ ವಿವಿಧ ರಾಜ್ಯಗಳಿಗೆ ಅಶುತೋಷ್ ತೆರಳಲಿದ್ದಾರೆ. ತಮ್ಮದೇ ಸ್ವಂತ ಹಣ ಖರ್ಚು ಮಾಡಿ ಈ ರೀತಿ ಪಾದಯಾತ್ರೆ ಮಾಡುವ ಮೂಲಕ ಮರ ಬೆಳೆಸಿ ಎಂಬ ಸಂದೇಶವನ್ನು ಸಾರುತ್ತಿರುವ ಈ ಅಶುತೋಷನಂತಹ ಯುವಕರು ಇತರರಿಗೆ ಮಾದರಿ. ಸರ್ಕಾರಗಳು ಇಂತವರ ಪ್ರಯತ್ನಕ್ಕೊಂದು ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಅವರ ಸಲಹೆಗಳನ್ನು ಮುಂದಿನ ಪರಿಸರದ ಉಳಿವಿಗಾಗಿ ಗಂಭೀರವಾಗಿ ತೆಗೆದುಕೊಳ್ಳಲೇಬೇಕಿದೆ.


    Share. Facebook Twitter LinkedIn Email WhatsApp

    Related Posts

    Jagdish Shettar: ಧೃತರಾಷ್ಟ್ರನಿಗೆ ಸಂಜಯ ಹೇಳಿದಂತೆ ಜೋಶಿ ಅವರಿಗೆ ಹೇಳುವ ಯಾವುದಾದರೂ ಶಕ್ತಿ ಇದೆಯೇ?: ಶೆಟ್ಟರ್

    November 30, 2023

    MP Renukacharya: ಸ್ವಯಂಕೃತ ಅಪರಾಧದಿಂದ ಸರ್ಕಾರ ಪತನವಾಗತ್ತೆ: ಎಂ ಪಿ ರೇಣುಕಾಚಾರ್ಯ

    November 30, 2023

    Lokayukta Ride: ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ SDC

    November 30, 2023

    BREAKING: ಬೆಳ್ಳಂಬೆಳಗ್ಗೆ ಸಿನಿಮೀಯ ರೀತಿಯಲ್ಲಿ ಶಾಲಾ ಶಿಕ್ಷಕಿ ಅಪಹರಣ

    November 30, 2023

    Basavaraja Horatti: ಸುವರ್ಣಸೌಧದ ಪಕ್ಕ ತಾಜ್’ನಂತಹ ಹೋಟೆಲ್ ಕಟ್ಟಿಸಿದರೆ ಸೂಕ್ತ: ಸಭಾಪತಿ ಹೊರಟ್ಟಿ

    November 30, 2023

    HD Kumaraswamy: ಒಬ್ಬ ಸಿಎಂ ಜನಸ್ಪಂದನೆ ಮಾಡುವುದನ್ನು ನಾನು ಅಭಿನಂದಿಸುತ್ತೇನೆ: ಹೆಚ್ ಡಿ ಕುಮಾರಸ್ವಾಮಿ

    November 30, 2023

    Lokayukta Ride: ಲಂಚ ಸ್ವೀಕರಿಸುತ್ತಿದ್ದ ಅರಣ್ಯ ಇಲಾಖೆ ನೌಕರ ಲೋಕಾಯುಕ್ತ ಬಲೆಗೆ

    November 30, 2023

    Madhu Bangarappa: ಅನವಶ್ಯಕ ಲೋಡ್ ಶೆಡ್ಡಿಂಗ್ ಮಾಡಿದ್ರೇ ಕ್ರಮ ಕೈಗೊಳ್ತೇವೆ: ಮಧು ಬಂಗಾರಪ್ಪ

    November 30, 2023

    Chaluvarayaswamy: ರಾಜ್ಯದಲ್ಲಿ ಬಿಜೆಪಿ ಎಂದಿಗೂ 114 ಕ್ಷೇತ್ರ ಗೆದ್ದು ಸರ್ಕಾರ ಮಾಡಿಲ್ಲ: ಎನ್.ಚಲುವರಾಯಸ್ವಾಮಿ

    November 30, 2023

    Lakshmi Hebbalkar: ಅಧಿಕಾರಿಗಳ ಮೇಲೆ ನಿರ್ದಾಕ್ಷೀಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು: ಲಕ್ಷ್ಮೀ ಹೆಬ್ಬಾಳ್ಕರ್

    November 30, 2023

    Accident: ಬೈಕ್ ಅಪಘಾತದಲ್ಲಿ ಪೊಲೀಸ್ ಪೇದೆ ಸೇರಿ ಇಬ್ಬರು ಧಾರುಣ ಸಾವು

    November 30, 2023

    Satish Jarakiholi: ಇಲಾಖೆಯೊಳಗೆ ವಿಲೀನ ಮಾಡುವ ಪ್ರಕ್ರಿಯೆ 10 ವರ್ಷಗಳ ಹಿಂದಯೇ ನಡೆದಿದೆ: ಸತೀಶ ಜಾರಕಿಹೊಳಿ

    November 30, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.