ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ.ಪೆನ್ ಡ್ರೈವ್ ಬಿಡುಗಡೆ ಹಿಂದೆ 420 ಅಣ್ಣತಮ್ಮಂದಿರು ಇದ್ದಾರೆ ಎಂದು ಡಿಕೆ ಬದ್ರರ್ಸ್ ವಿರುದ್ಧ ಹೆಚ್ಡಿಕೆ ಆಕ್ರೋಶವ್ಯಕ್ತಪಡಿಸಿದ್ರು.ಇದಕ್ಕೆ ಕೌಂಟರ್ ಕೊಟ್ಟಿರುವ ಡಿಕೆ ಬ್ರದರ್ಸ್ ತೆನೆ ಹೊತ್ತ ಮಹಿಳೆ ಪೆನ್ ಡ್ರೈವ್ ಹೊರತ್ತಿದೆ ಎಂದು ವ್ಯಂಗ್ಯ ಮಾಡಿದ್ದಾರೆ. ದೊಡ್ಡಗೌಡ್ರು ಕುಟುಂಬಕ್ಕೆ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ತೀವ್ರ ಮುಜುಗರ ತರಿಸಿದೆ.ಇದನ್ನೇ ಪ್ರಬಲವಾಗಿ ಅಸ್ತ್ರ ಮಾಡಿಕೊಂಡಿರುವ ಆಡಳಿತರೂಢ ಕಾಂಗ್ರೆಸ್ ಪಕ್ಷ ಜೆಡಿಎಸ್ ಬಿಜೆಪಿ ವಿರುದ್ಧ ಬೆಂಕಿಯುಗಳುತ್ತಿದ್ದಾರೆ.
ಪೆನ್ ಡ್ರೈವ್ ಬಿಡುಗಡೆ ಹಿಂದೆ 420 ಅಣ್ಣತಮ್ಮಂದಿರು ಇದ್ದಾರೆ ಎಂದು ಬಂಡೆ ಬ್ರದರ್ಸ್ ವಿರುದ್ಧ ನಿನ್ನೆ ಆಕ್ರೋಶ ವ್ಯಕ್ತಪಡಿಸಿದ್ರು.ಹೆಚ್ಡಿಕೆ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಡಿ.ಕೆ.ಸುರೇಶ್, ತೆನೆ ಹೊತ್ತ ಮಹಿಳೆ ಪೆನ್ ಡ್ರೈವ್ ಹೊರತ್ತಿದೆ.ದೇವೇಗೌಡ್ರ ಆಸ್ತಿ ಪೆನ್ ಡ್ರೈವ್ ಎಂದು ವ್ಯಂಗ್ಯ ಮಾಡಿದ್ದಾರೆ.ಇನ್ನು ಪ್ರಜ್ವಲ್ ರೇವಣ್ಣ ಮಾಜಿ ಡ್ರೈವರ್ ಕಾರ್ತಿಕ್ ಮಲೇಷ್ಯಾದಲ್ಲಿ ಬಚ್ಚಿಟ್ಟು ರಾಜಕಾರಣ ಮಾಡುವ ಅವಶ್ಯಕತೆ ನನಗೆ ಇಲ್ಲ.ನನಗೇನು ತಲೆ ಕೆಟ್ಟಿದ್ಯಾ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.
![Demo](https://ainlivenews.com/wp-content/uploads/2023/12/spoorthi-1.jpg)
ಉದ್ಯೋಗ ಆಕಾಂಕ್ಷಿಗಳೇ ಗಮನಿಸಿ.. BBMPಯಲ್ಲಿ 11,307 ಗ್ರೂಪ್ ಡಿ ಹುದ್ದೆಗಳು ಖಾಲಿ ಇದೆ..! ಇಂದೇ ಅರ್ಜಿ ಸಲ್ಲಿಸಿ
ಇನ್ನು ಕರ್ನಾಟಕದ ಎರಡನೇ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವೇ ಪ್ರಬಲ ಅಸ್ತ್ರವಾಗಿದೆ.ಶಿವಮೊಗ್ಗದಲ್ಲಿ ಪ್ರಚಾರ ಮಾಡಿದ ಎಐಸಿಸಿ ನಾಯಕ ರಾಹುಲ್ ಗಾಂಧಿ ಪೆನ್ ಡ್ರೈವ್ ಪ್ರಕರಣವನ್ನ ಪ್ರಸ್ತಾಪ ಮಾಡಿದ್ದಾರೆ.ಪ್ರಜ್ವಲ್ ರೇವಣ್ಣ ಒಬ್ಬ ಮಾಸ್ ರೇಪಿಸ್ಟ್.ಇವನ ಪರ ಮೋದಿ,ಅಮಿತ್ ಷಾ ಪ್ರಚಾರ ಮಾಡಿದ್ದಾರೆ.ಈ ಹಿನ್ನಲೆಯಲ್ಲಿ ದೇಶದ ಮಹಿಳೆಯರ ಮುಂದೆ ಮುಂದೆ ಪ್ರಧಾನಿ ಮೋದಿ,ಕೇಂದ್ರ ಗೃಹ ಸಚಿವ ಅಮಿತ್ ಷಾ ಕ್ಷಮೆ ಕೇಳಬೇಕೆಂದು ರಾಹುಲ್ ಗಾಂಧಿ ಆಗ್ರಹ ಮಾಡಿದ್ದಾರೆ.
ಇನ್ನು ಮುಂದಿನ ಕಾನೂನು ಹೋರಾಟ ಮಾಡುವ ಸಂಬಂಧ ಹೆಚ್.ಡಿ.ದೇವೇಗೌಡ್ರು ಪದ್ಮನಾಭನಗರ ನಿವಾಸದಲ್ಲಿ ದಳಪತಿಗಳು ಚರ್ಚೆ ನಡೆಸಿದ್ರು. ಒಟ್ಟಾರೆ, ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ರಾಜಕೀಯ ತಿರುವು ಪಡೆದಿದ್ದು,ಕಾಂಗ್ರೆಸ್ ಇದನ್ನೇ ಅಸ್ತ್ರ ಮಾಡಿಕೊಂಡು ಬಿಜೆಪಿ,ಜೆಡಿಎಸ್ ವಿರುದ್ಧ ವಾಕ್ ಪ್ರಹಾರ ನಡೆಸುತ್ತಿದ್ದಾರೆ.
![](https://ainlivenews.com/wp-content/uploads/2024/01/Ad-Banner-copy-scaled.jpg)