Mandya: ಗಾಳಿ ಮಳೆಯಿಂದ ಚಲಿಸುತ್ತಿದ್ದ ರೈಲಿನ ಮೇಲೆ ಬಿದ್ದ ಮರ!

ಮಂಡ್ಯ:- ತಾಲೂಕಿನ ಉಮ್ಮಡಹಳ್ಳಿ ಗೇಟ್​ ಬಳಿ ಗಾಳಿ ಮಳೆಯಿಂದ ಚಲಿಸುತ್ತಿದ್ದ ರೈಲಿನ ಮೇಲೆ ಮರ ಬಿದ್ದಿದೆ. ಸತ್ತು ಹೋಗಿರುವ ಮಗಳಿಗೆ ವರ ಬೇಕು..! ಜಾಹೀರಾತು ನೀಡಿದ ಕುಟುಂಬಸ್ಥರು! ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ವಿಶ್ವಮಾನವ ರೈಲಿನ ಮೇಲೆ ಮರ ಬಿದ್ದು ರೈಲು ಮುಂಭಾಗದ ಗ್ಲಾಸ್ ಪುಡಿ ಪುಡಿ ಆಗಿದೆ. ಘಟನೆಯಲ್ಲಿ ಲೋಕೋ ಪೈಲಟ್​ಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯ ಲೆಕ್ಕಿಸದೇ ರೈಲ್ವೆ ನಿಲ್ದಾಣದವರೆಗೂ ಲೋಕೋ ಪೈಲಟ್ ರೈಲು ತಲುಪಿಸಿದ್ದಾರೆ.