ಅರೆಬೆತ್ತಲೆಯಾಗಿ ಹೆಣ್ಣು ಮಕ್ಕಳ ಹಾಸ್ಟೆಲ್ ಗೆ ನುಗ್ಗಿದ ವ್ಯಕ್ತಿ.. ಆತಂಕಗೊಂಡ ಬಾಲಕಿಯರು!

ಚಿತ್ರದುರ್ಗ:- ಚಿತ್ರದುರ್ಗದ ಐಯುಡಿಪಿ ಬಡಾವಣೆಯ ಹಾಸ್ಟೆಲ್​​ನಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಅರೆ ಬೆತ್ತಲೆಯಾಗಿ ಬಾಲಕಿಯರ ವಸತಿ ನಿಲಯ ಪ್ರವೇಶಿಸಿದ ಘಟನೆ ಜರುಗಿದೆ. ಬಳ್ಳಾರಿ: ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡ ಶ್ರೀ ಶಂಕರಲಿಂಗ ರಥೋತ್ಸವ! ಕೂಡಲೇ ಎಚ್ಚೆತ್ತ ಸ್ಥಳೀಯರು, ಆರೋಪಿಯನ್ನು ಹಿಡಿದು ಬಡಾವಣೆ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಆಟೋದಲ್ಲಿ ಠಾಣೆಗೆ ಕರೆದೊಯ್ಯುವ ವೇಳೆ ಆರೋಪಿ ಕಣ್ಣೀರು ಹಾಕಿದ್ದು, ಈ ಘಟನೆ ಚಿತ್ರದುರ್ಗದ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೆಲ ಕಾಲ ಈ ವಿಕೃತ ವ್ಯಕ್ತಿ, ಹಾಸ್ಟೆಲ್ ವಿದ್ಯಾರ್ಥಿನಿಯರಲ್ಲಿ ಆತಂಕ ಸೃಷ್ಠಿಸಿದ್ದಾನೆ.