ಕಲ್ಲಿನ ಪರ್ಸಿ ತುಂಬಿದ್ದ ಲಾರಿ ಪಲ್ಟಿ; 13 ಜನರಿಗೆ ಗಂಭೀರ ಗಾಯ!

ಕಲಬುರ್ಗಿ:– ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಮಿರಿಯಾಣ ಗ್ರಾಮದ ಬಳಿ ಕಲ್ಲಿನ ಪರ್ಸಿಗಳನ್ನ(ನೆಲಹಾಸು) ತುಂಬಿದ್ದ ಲಾರಿ ಪಲ್ಟಿಯಾಗಿದ್ದು, 13 ಜನರಿಗೆ ಗಂಭೀರ ಗಾಯವಾದ ಘಟನೆ ಜರುಗಿದೆ. ನಿತ್ಯ ಈ ಎಲೆ ತಿನ್ನುತ್ತಾ ಬಂದ್ರೆ ಮಧುಮೇಹ & ಹೃದಯ ಸಮಸ್ಯೆ ದೂರವಾಗತ್ತಂತೆ! ಇನ್ನೂ ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗಂಭೀರ ಗಾಯಗೊಂಡವರನ್ನ ಕಲಬುರಗಿಗೆ ರವಾನೆ ಮಾಡಲಾಗಿದೆ. ಕೃಷ್ಣಾಪುರ ಗ್ರಾಮದಿಂದ ತೆಲಂಗಾಣಕ್ಕೆ ಹೊರಟಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಪಲ್ಟಿಯಾಗಿದೆ. ಈ ಕುರಿತು ಮಿರಿಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.