Breaking News: ಬೆಂಗಳೂರಿನಲ್ಲಿ ಕೊರಿಯರ್ ಬಾಯ್ ಗೆ ಚಾಕು ಇರಿತ!

ಬೆಂಗಳೂರು:- ಕೊರಿಯರ್ ಬಾಯ್ ಗೆ ಚಾಕು ಇರಿದಿರುವ ಘಟನೆ ನಗರದ ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಕೊರಿಯರ್ ಮಾಡಲು ಮನೆ ಬಳಿ ಬಾರದಿದ್ದಕ್ಕೆ ಹಲ್ಲೆ ಮಾಡಲಾಗಿದೆ. ಕಳಿಸಿದ ಲೊಕೇಷನ್ ಗೆ ಬಾರದೇ, ಲ್ಯಾಂಡ್ ಮಾರ್ಕ್ ಕೇಳಿದ್ದಕ್ಕೆ ಚಾಕು ಇರಿಯಲಾಗಿದೆ. ಮಹದೇವಪುರ: ಮಾನವನ ಉಳಿವಿಗಾಗಿ ಪರಿಸರ ಅನಿವಾರ್ಯ! ಮಹಮ್ಮದ್ ಶಫಿ, ಗಾಯಾಳು ಕೊರಿಯರ್ ಬಾಯ್ ಎನ್ನಲಾಗಿದೆ. ಗಾಯಾಳು ಕೊರಿಯರ್ ಬಾಯ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಅಶೋಕನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.