ಧಾರವಾಡ: ತಾಲೂಕಿನ ದಾಸ್ತಿಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಕಾಮಗಾರಿ ಇಲ್ಲದೆ ಹಣ ಹಾಗೂ ಅಧಿಕಾರ ದುರ್ಬಳಕೆ ಅಧಿಕಾರಿಗಳು ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಮುಂದೆ ಆಗ್ರಹಿಸಿದರು.ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಚಂದ್ರ ಗೌಡ ಪಾಟೀಲ್ ಮಾತನಾಡಿ, ಹಗರಣದ ತನಿಖೆಯನ್ನು ತಾಲೂಕಿನ ಸಿಬ್ಬಂದಿಗಳಿಗೆ ವಹಿಸಿದ್ದಾರೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ಹಗರಣವನ್ನು ದಿಕ್ಕು ತಪ್ಪಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಸುಮಾರು 2020 ರಿಂದ 24 ರ ವರೆಗಿನ ಜೆಜೆ ಎಂ ಹಣವನ್ನು ಇತರೆ ಉದ್ದೇಶಕ್ಕಾಗಿ ತೆಗೆದಿರುವ ಬಗ್ಗೆ ಹಾಗೂ ನಿಧಿ 1 ರಲ್ಲಿ ಲಕ್ಷಗಟ್ಟಲೆ ವಿದ್ಯುತ್ ನೀರು ಸಾಮಗ್ರಿಗಳ ಖರ್ಚು ಮಾಡಲಾಗಿದೆ. 15ನೇ ಹಣಕಾಸಿನಲ್ಲಿ 1 ಕೋಟಿ 40 ಲಕ್ಷಗಳವರೆಗೂ ನಕಲಿ ಬಿಲ್ ಹಚ್ಚಿ ಕೋಟ ದಾಖಲೆ ನೀಡಿ ಹಣ ಲಪಟಾಯಿಸಿ ಹಾಗೂ ಎಸ್ಸಿ ಎಸ್ ಟಿ. ಹಿಂದುಳಿದ ಅಭಿವೃದ್ಧಿ ಹಣ ಹಾಗೂ ಅಂಗವಿಕಲರ ಅನುದಾನ ಸಹ ದುರುಪಯೋಗ ಮಾಡಿದ್ದು ಕಂಡು ಬಂದಿದೆ ದಾಸ್ತಿಕೊಪ್ಪ ಹಾಗೂ ರಾಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡಿಲ್ಲ.
Mysore Dasara 2024: ಮೈಸೂರು ದಸರಾ ಮಹೋತ್ಸವದ ವೇಳಾಪಟ್ಟಿ ಬಿಡುಗಡೆ: ಜಂಬೂಸವಾರಿ ಯಾವಾಗ ಗೊತ್ತಾ..?
ಗ್ರಾಮ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿ ಇದರ ಜೊತೆಗೆ ಜೆಪಿಎಸ್ ಸಹ ಮಾಡಿರುವುದಿಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆ ಸಮಯದಲ್ಲಿ ಗ್ರಾಮ ಸಭಾದಂತಹ ಕಾರ್ಯಕ್ರಮ ನಡೆಸಿಲ್ಲ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ನಿವೇಶನಗಳನ್ನು ಕಾನೂನು ಬಹಿರವಾಗಿ ಎನ್ ಎ, ಕೆ ಜಿ ಪಿ, ಅಭಿವೃದ್ಧಿ ಪಡಿಸದೆ ಈ ಸ್ವತ್ತು ಉತಾರಗಳನ್ನು ಪೂರೈಸಿದ್ದಾರೆ, ಗ್ರಾಮದ ಕೆರೆಯನ್ನು ಕಾನೂನುಬಾಹಿರವಾಗಿ ಒತ್ತುವರಿ ಮಾಡಿದ್ದಾರೆ. ಆ ಸಮಯದಲ್ಲಿ ದಾಸ್ತಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸಿರುವ ಅಭಿವೃದ್ಧಿ ಅಧಿಕಾರಿ ಹಾಗೂ ಸಂಬಂಧಪಟ್ಟವರ ಮೇಲಧಿಕಾರಿಗಳು ಕೂಡಲೇ ಕಾನೂನು ಕ್ರಮ ಜರುಗಿಸಲು ಆಗ್ರಹಿಸಿದರು.
ಜಿಲ್ಲೆಯ ಉನ್ನತ ಅಧಿಕಾರಿಗಳು ಬರುವರಿಗೂ ಧರಣಿ ಸತ್ಯಾಗ್ರಹ ಯಾವುದೇ ಕಾರಣಕ್ಕೋ ಕೈ ಬಿಡುವುದಿಲ್ಲ ಎಂದರು. ಈ ಸಂದರ್ಭದಲ್ಲಿ ತಾಲೂಕ ಪಂಚಾಯತಿ ಉಪಾಧ್ಯಕ್ಷರಾದ ಚಂದ್ರ ಗೌಡ ಪಾಟೀಲ್, ವಾಸುದೇವ ಮುಂಗಲಿ, ಗದಿಗೆಪ್ಪ ಸವಣೂರು, ಮಲ್ಲೇಶ್ ನುಗ್ಗಿಕೇರಿ, ಗುರುಲಿಂಗ ಹಿರೇಮಠ, ಶಿವ ಪುತ್ರ ದಪ್ಪ ಹುಗ್ಗಿ, ತಿಪ್ಪಣ್ಣ ಧಾರವಾಡ, ಶೇಖಪ್ಪಗೌಡ ಜಂಗಲಪಗೌಡ್ರು, ಮಂಜುನಾಥ್ ಸವನೂರ್, ಈರಣ್ಣ ಸಿರೇವಾಡ, ಊರಿನ ಗ್ರಾಮಸ್ಥರು ಭಾಗಿಯಾಗಿದ್ದರು.