ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಲೋಕಾಯುಕ್ತ ತನಿಖೆಯೇ ಶುರುವಾಗಿಲ್ಲ. ಹೀಗಿರುವಾಗ ಈಗಲೇ ಸಿಬಿಐಗೆ ಕೊಡಿ ಅಂದ್ರೆ ಹೇಗೆ? ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರಶ್ನೆ ಮಾಡಿದ್ದಾರೆ. ಮಾತನಾಡಿದ ಅವರು, ಮುಡಾ ಸಂಬಂಧಿಸಿದಂತೆ ತನಿಖೆ ನಡೆಯಬೇಕಿದೆ. ಇಂತಹ ಸಂದರ್ಭದಲ್ಲಿ ಲೋಕಾಯುಕ್ತ ತಪ್ಪು ಅಂತ ಹೇಳೋಕೆ ಆಗಲ್ಲ. ಇನ್ನೂ 90 ದಿನಗಳು ಇವೆ. ಈಗಾಗಲೇ ಸಿದ್ದರಾಮಯ್ಯ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ನೊಟೀಸ್ ಕೊಡ್ತಾರೆ. ಆಮೇಲೆ ವಿಚಾರಣೆ ಮಾಡಬಹುದು. ಅದಕ್ಕೆಲ್ಲ ಸಮಯ ತೆಗೆದುಕೊಳ್ಳುತ್ತದೆ ಎಂದರು.
ರೈತರಿಗೆ ಸಿಹಿಸುದ್ದಿ; ಮೊಟ್ಟ ಮೊದಲ ಬಾರಿಗೆ ಮೆಕ್ಕೆಜೋಳಕ್ಕೆ ಬಂಪರ್ ಬೆಲೆ!
ಬಿಜೆಪಿಗರ ವಿರುದ್ಧನೂ ಆರೋಪ ಇದೆ. ಯಡಿಯೂರಪ್ಪ ಪ್ರಕರಣ ಹಾಗೂ ಸಿದ್ದರಾಮಯ್ಯ ಪ್ರಕರಣ ಭಿನ್ನವಾಗಿದೆ. ಅವರ ಮೇಲೆ ತನಿಖೆ ಆಗಿತ್ತು, ಹಾಗಾಗಿ ಅವರು ರಾಜೀನಾಮೆ ಕೊಡಬೇಕಾಯ್ತು. ಆದರೆ ಮೂಡಾದಲ್ಲಿ ಇನ್ನು ತನಿಖೆಯೇ ಆಗಿಲ್ಲ, ಹೀಗಿರುವಾಗ ರಾಜೀನಾಮೆ ಕೊಡಿ ಅಂದ್ರೆ ಹೇಗೆ? ಎಂದು ಪ್ರಶ್ನಿಸಿದರು. ಇನ್ನು ತನಿಖೆಯೇ ಶುರುವಾಗಿಲ್ಲ. ಆಗಲೇ ಸಿಬಿಐಗೆ ಕೊಡಿ ಅಂದ್ರೆ ಹೇಗೆ. ತನಿಖೆಯನ್ನ ಎದುರಿಸಬೇಕಿದೆ. ಸಿಎಂ ಸಿದ್ದರಾಮಯ್ಯ ಜೊತೆಗೆ ನಾವಿದ್ದೇವೆ ಎಂದು ಸ್ವತಃ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ ಎಂದರು.