ಶಿವಮೊಗ್ಗ: ಕನ್ನಡಿಗರ ಹೆಮ್ಮೆಯ ಸಂಸ್ಥೆ ವಿಐಎಸ್ಎಲ್ ಉಳಿವಿಗೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಐಎಸ್ಎಲ್ ಉಳಿವಿಗೆ ನಮ್ಮ ಪ್ರಯತ್ನ ಸದಾ ಇರುತ್ತದೆ. ಕಾರ್ಖಾನೆಯನ್ನು ನಮ್ಮ ಕುಟುಂಬ ಆರಂಭಿಸಿತ್ತು. ಅದನ್ನು ಉಳಿಸುವ ಕೆಲಸ ಆಗಲಿದೆ. ಅದಕ್ಕೆ ಪ್ರೋತ್ಸಾಹವನ್ನು ನೀಡುತ್ತೇವೆ. ಕಾರ್ಖಾನೆಗೆ ಕೇಂದ್ರ ಸಚಿವ ಕುಮಾರ ಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಳ್ಳೆಯದಾಗುವ ವಿಶ್ವಾಸವಿದೆ ಎಂದರು.
ರೈತರಿಗೆ ಸಿಹಿಸುದ್ದಿ; ಮೊಟ್ಟ ಮೊದಲ ಬಾರಿಗೆ ಮೆಕ್ಕೆಜೋಳಕ್ಕೆ ಬಂಪರ್ ಬೆಲೆ!
ಮೈಸೂರು-ಕೊಡಗಿಗೆ ಸಾವಯವ ಕೃಷಿ ಬೇಕಿದೆ. ಇದರ ಜತೆಗೆ ಪಾರಂಪರಿಕ ಅಭಿವೃದ್ಧಿ ಹಾಗೂ ರಕ್ಷಣೆ ಅಗತ್ಯವಿದೆ. ಮೈಸೂರು ಪ್ರವಾಸೋದ್ಯಮ ಆರ್ಥಿಕತೆಯನ್ನು ಅವಲಂಭಿಸಿದೆ. ಅಲ್ಲಿ ವಿಮಾನ ನಿಲ್ದಾಣವಾಗಬೇಕಿದ್ದು, ಅಲ್ಪ ಪ್ರಮಾಣದ ಭೂ ಸ್ವಾಧೀನ ಬಾಕಿ ಇದೆ. ಹೆದ್ದಾರಿ, ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಬೇಕಿದೆ. ಆನಂತರ ಕ್ರೆಡಿಲ್ನಿಂದ ವಿಮಾನ ನಿಲ್ದಾಣ ನಿರ್ಮಾಣ ಪ್ರಾರಂಭವಾಗಲಿದೆ. ನಾಲ್ಕು ಪ್ಯಾಕೇಜ್ಗಳಲ್ಲಿ ಮೈಸೂರು-ಕೊಡಗು ಅಭಿವೃದ್ಧಿಯಾಗಲಿದೆ ಎಂದರು.