ಬೆಂಗಳೂರು: ನಗರದ ಅನೇಕ ಪ್ರದೇಶಗಳಲ್ಲಿ ಶುಕ್ರವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂಮಾಧ್ಯಮ ಪ್ರಕಟಣೆ ಹೊರಡಿಸಿದೆ. ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಜಯನಗರ ವಿಭಾಗದ 6ನೇ ಉಪವಿಭಾಗದ ಹಲವೆಡೆ ಇಂದು ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಲಿದೆ.
ಜಯನಗರದ ಎಲಿಟಾ ವಾಯುವಿಹಾರ ಅಪಾರ್ಟ್ಮೆಂಟ್ಗಳು.ಕೆ.ಆರ್ ಲೇಔಟ್, ಶಾರದನಗರ, ಚುಂಚುಘಟ್ಟ ಮತ್ತು ಪ್ರದೇಶವನ್ನು ಸುತ್ತುವರಿದ ಉಪ ನಿಲ್ದಾಣದಲ್ಲಿ ಮಧ್ಯಾಹ್ನ 3 ಗಟಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಬೆಸ್ಕಾಂ ವ್ಯಾಪ್ತಿಯ ರಾಮನಗರದ PSV ನಗರ, ಯಾರಬನಗರ, ಕೋತಿಪುರ, ಮತ್ತು ಇತರೆ ಪ್ರದೇಶ, ದಾವಣಗೆರೆಯ ಅಲಗಾವಲ್, ಹಲವುದಾರ, ಓಬಳಾಪುರ, ಸಿದ್ದಾಪುರ, ಡಿ ಮದಕರಿಪೂರ್ಣ. ದೊಡ್ಡಿಗನಾಳ್ ಮತ್ತು ಕೋಲಾರದ ಮುತ್ತಕದಳ್ಳಿ, ಗುನ್ನಹಳ್ಳಿ, ಮಾಡಬಹಳ್ಳಿ, ನಾಯಂಡ್ರಹಳ್ಳಿ, ಕಾಲೋನಿ, ಚಾನಕೇಶವಪುರದಲ್ಲಿ ಬೆಳಗ್ಗೆ 10 ರಿಂದ ಸಂಜೆ 5:30ರವರೆಗೆ ವಿದ್ಯುತ್ ಕಡಿತವಾಗಲಿದೆ.