ಆರ್ಸಿಬಿಯ ಹೊಸ ಅಧ್ಯಾಯ 2025ಕ್ಕೆ ಶುರುವಾಗಲಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದರೆ. ಇತ್ತ RCB ಹೊಸ ಕ್ಯಾಪ್ಟನ್ ಹುಡುಕಾಟದಲ್ಲಿ ಇದೆ.
ಸತತ ಸೋಲುಗಳಿಂದ ಕೆಂಗಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈಗ ಸೀಸನ್-18ಕ್ಕೆ ತಯಾರಿ ನಡೆಸ್ತಿದೆ. ಹೊಸ ಸೀಸನ್ಗೆ ತಯಾರಿ ನಡೆಸ್ತಿರುವ ರೆಡ್ ಆರ್ಮಿ, ಹೊಸ ಅಧ್ಯಾಯಕ್ಕೂ ನಾಂದಿ ಹಾಡುವ ಲೆಕ್ಕಾಚಾರದಲ್ಲಿದೆ. ಇದಕ್ಕಾಗೇ ಹೊಸ ಕಾಪ್ಟನ್ ಮೇಲೆ ಕಣ್ಣಿಟ್ಟಿದೆ.
ಫಾಫ್ ಡುಪ್ಲೆಸಿಗೆ ಕೊಕ್ ನೀಡುವ ನಿರ್ಧಾರ ಮಾಡಿರುವ ಫ್ರಾಂಚೈಸಿ, ಈಗ ಹೊಸ ವಿನ್ನಿಂಗ್ ಕ್ಯಾಪ್ಟನ್ ಹುಡುಕಾಟದಲ್ಲಿದೆ. ಇದಕ್ಕಾಗಿ ಈಗಾಗಲೇ ಲಿಸ್ಟ್ ಕೂಡ ಮಾಡಿರುವ ರೆಡ್ ಆರ್ಮಿ, ನಾಯಕತ್ವಕ್ಕೆ ಸೂಕ್ತ ಐದು ಅಭ್ಯರ್ಥಿಗಳಿಗೆ ಗಾಳ ಹಾಕುವ ಮೆಗಾ ಪ್ಲಾನ್ನಲ್ಲಿ ಮಾಡಿದೆ.
ಐಪಿಎನ್ ಮೋಸ್ಟ್ ಪಾಪ್ಯುಲರ್ ಟೀಂ ಆರ್ಸಿಬಿ 2025ರ ಟೂರ್ನಿಗೆ ಒಂದಷ್ಟು ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. 40 ವರ್ಷದ ಫಾಫ್ ಡುಪ್ಲೆಸಿಗೆ ಗೇಟ್ಪಾಸ್ ನೀಡೋದು ಕನ್ಫರ್ಮ್. ಡುಪ್ಲೆಸಿ ಬದಲು ಕನ್ನಡಿಗ ಕೆ.ಎಲ್.ರಾಹುಲ್ಗೆ ಮಣೆ ಹಾಕೋ ಪ್ಲಾನ್ ತಂಡದಲ್ಲಿ ನಡೆದಿದೆ. ಫ್ಯಾನ್ಸ್ ಒತ್ತಾಯವೂ ಇದೇ ಆಗಿದೆ. ಮೂಲಗಳ ಪ್ರಕಾರ ಮೆಗಾ ಹರಾಜಿನಲ್ಲಿ ರಾಹುಲ್ನ ಬಿಡ್ ಮಾಡಲು 25 ಕೋಟಿ ಪಕ್ಕಕ್ಕಿಟ್ಟಿದೆ ಎನ್ನಲಾಗಿದೆ.
ಮುಂಬೈ ಇಂಡಿಯನ್ಸ್ನಿಂದ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಹೊರ ಬೀಳುವ ಸುದ್ದಿ ಇದೆ. ಯಾವುದು ಕೂಡ ಅಧಿಕೃತವಲ್ಲ. ಹೀಗಾಗಿ ಇವರಿಬ್ಬರ ಮೇಲೆಯೂ ಆರ್ಸಿಬಿ ಕಣ್ಣಿದೆ. ಯಾಕಂದ್ರೆ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ರೋಹಿತ್, ಆರ್ಸಿಬಿಗೆ ಬಂದ್ರೆ ಆನೆಬಲವೇ ಬರುತ್ತೆ. 5 ಬಾರಿ ಐಪಿಎಲ್ ಗೆದ್ದ ನಾಯಕನಿಗೆ ಗಾಳ ಹಾಕುವ ಲೆಕ್ಕಚಾರದಲ್ಲಿದೆ. ಅಕಸ್ಮಾತ್ ರೋಹಿತ್ ಕೈತಪ್ಪಿದ್ರೆ, ಆಲ್ರೌಂಡರ್ ಹಾರ್ದಿಕ್ಗೆ ಮೆಗಾ ಹರಾಜಿನಲ್ಲಿ ಬಿಡ್ ಮಾಡೋದು ಗ್ಯಾರಂಟಿ. ಇದೆಲ್ಲವೂ ಮುಂಬೈ ನಡೆ ಮೇಲೆ ನಿರ್ಧಾರವಾಗಲಿದೆ.
ಹಾಲಿ ಚಾಂಪಿಯನ್ಸ್ ಕೆಕೆಆರ್, ಚಾಂಪಿಯನ್ ನಾಯಕ ಶ್ರೇಯಸ್ಗೆ ಕೊಕ್ ನೀಡುವ ಲೆಕ್ಕಾಚಾರದಲ್ಲಿದೆ. ಸೂರ್ಯಕುಮಾರ್ಗಾಗಿಯೇ ಕೊಲ್ಕತ್ತಾ ಇಂಥ ಬಿಗ್ ಡಿಸಿಷನ್ ಕೈಗೊಳ್ಳುತ್ತಿದೆ ಅನ್ನೋದು ಮೂಲಗಳ ಮಾಹಿತಿ. ಅಕಸ್ಮಾತ್ ಶ್ರೇಯಸ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ, ನಾಯಕನ ಸ್ಥಾನಕ್ಕೆ ಉತ್ತಮ ಆಯ್ಕೆ ಆಗೋದ್ರಲ್ಲಿ ಡೌಟೇ ಇಲ್ಲ. ಕಳೆದ ಸೀಸನ್ನಲ್ಲಿ ಕೆಕೆಆರ್ ತಂಡವನ್ನ ಚಾಂಪಿಯನ್ ಮಾಡಿದ್ದ ಶ್ರೇಯಸ್, 2020ರಲ್ಲಿ ಡೆಲ್ಲಿ ತಂಡವನ್ನ ಫೈನಲ್ಗೆ ಕೊಂಡೊಯ್ದಿದ್ರು. ಹೀಗಾಗಿ ಶ್ರೇಯಸ್ ಆರ್ಸಿಬಿಗೆ ಬಂದ್ರೆ ಶಕ್ತಿ ಬರೋದ್ರಲ್ಲಿ ಡೌಟೇ ಇಲ್ಲ
ಕೆ.ಎಲ್.ರಾಹುಲ್, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಶ್ರೇಯಸ್ ಮೇಲೆ ಕಣ್ಣಿಟ್ಟಿದೆ ನಿಜ. ಆದ್ರೆ, ಮೆಗಾ ಹರಾಜಿನಲ್ಲಿ ಇವರು ಸಿಗಲಿಲ್ಲ ಅಂದ್ರೆ, ಆರ್ಸಿಬಿ ವಿರಾಟ್ ಕೊಹ್ಲಿಯನ್ನೇ ನಾಯಕನಾಗಿ ನೇಮಿಸುವ ಧೃಡ ನಿರ್ಧಾರ ಕೈಗೊಂಡರು ಅಚ್ಚರಿ ಇಲ್ಲ. ವಿರಾಟ್ ನಾಯಕತ್ವದಲ್ಲಿ ಆರ್ಸಿಬಿ ಟ್ರೋಫಿ ಗೆದ್ದಿಲ್ಲ ಅನ್ನೋದು ಬಿಟ್ರೆ, ಉಳಿದಂತೆ ಸಕ್ಸಸ್ಫುಲ್ ನಾಯಕನೇ. ವಿರಾಟ್ಗೆ, ಮತ್ತೆ ನಾಯತಕತ್ವ ನೀಡಿದ್ರೆ. ತಂಡದಲ್ಲಿ ಹೊಸ ಹುಮ್ಮಸ್ಸು ಬರಲಿದೆ. ಆದ್ರೆ, ವಿರಾಟ್ ಈ ಆಫರ್ನ ಒಪ್ತಾರಾ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.