ಧಾರವಾಡ: ಅವರೆಲ್ಲ ಕಾನೂನು ವಿದ್ಯಾರ್ಥಿಗಳು. ಪ್ರತಿದಿನ ಕಾನೂನು, ಸೆಕ್ಷನ್, ವಾದ, ಪ್ರತಿವಾದ ಅಂತೆಲ್ಲ ಶಿಕ್ಷಣ ಪಡೆಯುವವರು. ಆದರೆ, ಒಂದು ದಿನ ಅವರೆಲ್ಲ ರೈತರ ಹೆಸರಿನಲ್ಲಿ ಸಾಂಪ್ರದಾಯಿಕ ದಿನವನ್ನು ಆಚರಣೆ ಮಾಡಿದ್ದಾರೆ.
ಹೌದು! ಹೀಗೆ ಪಂಚೆ, ಶರ್ಟು, ಸೀರೆ, ಲಂಗಾ, ದಾವಣಿ ತೊಟ್ಟು ಸಾಂಪ್ರದಾಯಿಕ ವಸ್ತ್ರಗಳಲ್ಲಿ ಮಿಂಚುತ್ತಿರುವ ಇವರೆಲ್ಲ ಧಾರವಾಡದ ಸರ್.ಸಿದ್ದಪ್ಪ ಕಂಬಳಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳು.
IPL 2025: ಬ್ಯಾನ್ ಆಗ್ತಾರಾ ವಿದೇಶಿ ಆಟಗಾರರು!? ಐಪಿಎಲ್ ಫ್ರಾಂಚೈಸಿಗಳ ನಿರ್ಧಾರ ಏನು!?, ಹೊಸ ನಿಯಮ ಏನ್ ಹೇಳುತ್ತೆ!?
ಈ ಕಾಲೇಜಿನಲ್ಲಿ ಗುರುವಾರ ಸಾಂಪ್ರದಾಯಿಕ ಉಡುಗೆ ದಿನವನ್ನು ಆಚರಣೆ ಮಾಡಲಾಯಿತು. ಆ ದಿನ ತರಗತಿ ಹಾಗೂ ಅಭ್ಯಾಸವನ್ನು ಬದಿಗಿಟ್ಟು ಎಲ್ಲ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಂಡರು. ಕಾಲೇಜಿನಲ್ಲಿ ಗಣಪತಿ ಪೂಜೆ ಮಾಡಿ, ಕಾಲೇಜು ಮುಂಭಾಗದಲ್ಲಿ ತಳಿರು, ತೋರಣ ಕಟ್ಟಿ, ರಂಗೋಲಿ ಹಾಕಿ ಅಲಂಕಾರ ಮಾಡಿದ್ದರು. ಒಬ್ಬರಿಗಿಂತ ಮತ್ತೊಬ್ಬರು ಗಮನಸೆಳೆಯುವ ಸಾಂಪ್ರದಾಯಿಕ ಉಡುಗೆ ತೊಟ್ಟು ಗಮನಸೆಳೆದರು. ಅಲ್ಲದೇ ಕಾಲೇಜಿನಲ್ಲಿ ಟ್ರ್ಯಾಕ್ಟರ್ ಮತ್ತು ಎತ್ತು ಚಕ್ಕಡಿಯನ್ನೂ ತೆಗೆದುಕೊಂಡು ಬಂದಿದ್ದ ವಿದ್ಯಾರ್ಥಿಗಳು ಅವುಗಳಲ್ಲಿ ಕುಳಿತು ಒಂದು ಸುತ್ತು ಹಾದು ಬಂದರು
ಇನ್ನು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಆಚರಣೆ ಮಾಡಿದ ಈ ಸಾಂಪ್ರದಾಯಿಕ ಉಡುಗೆ ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ಕೂಡ ಭಾಗವಹಿಸಿದರು. ಈ ದಿನವನ್ನು ರೈತರಿಗಾಗಿ ವಿದ್ಯಾರ್ಥಿಗಳು ಸಮರ್ಪಿಸಿದ್ದು, ಅವರ ಹೆಸರಿನಲ್ಲಿ ಈ ದಿನ ಎಲ್ಲ ವಿದ್ಯಾರ್ಥಿಗಳು ಸಾಂಪ್ರದಾಯಿಕ ದಿನ ಆಚರಿಸಿದ್ದು ಖುಷಿ ತಂದಿದೆ ಎಂದು ಪ್ರಾಚಾರ್ಯೆ ಮಂಜುಳಾ ಅವರು ಖಷಿ ವ್ಯಕ್ತಪಡಿಸಿದರು
ಒಟ್ಟಾರೆ ಕಾನೂನು ಕಾಲೇಜಿನಲ್ಲಿ ಗುರುವಾರ ಸಾಂಪ್ರದಾಯಿಕ ದಿನ ಗಮನಸೆಳೆಯಿತು. ಕಾನೂನು ಓದುವ ಎಲ್ಲ ವಿದ್ಯಾರ್ಥಿಗಳು ಒಂದು ದಿನ ಸಾಂಪ್ರದಾಯಿಕ ಉಡುಗೆ ತೊಟ್ಟು ನೋಡುಗರ ಗಮನಸೆಳೆದಿದ್ದಂತೂ ಸುಳ್ಳಲ್ಲ.