ಬೆಂಗಳೂರು:- ಕಸದ ಲಾರಿ ಡಿಕ್ಕಿಯಾಗಿ ಯುವಕ ಯುವತಿ ಸಾವನ್ನಪ್ಪಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.
ಐಟಿಪಿಎಲ್ ಟಿಸಿಎಸ್ ನಲ್ಲಿ ಈ ಯುವಕ ಯುವತಿ ಕೆಲಸ ಮಾಡ್ತಿದ್ದರು. ಯುವತಿ ಬಯನ್ನ ಗಾರಿ ಶಿಲ್ಪ(27) ಆಂಧ್ರ ಮೂಲದವರು. ಯುವಕ ಪ್ರಶಾಂತ್ ಬಾಣಸವಾಡಿ ಮೂಲದವರು.
14 ಗಂಟೆಗಳ ಕೆಲಸ: ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ IT ಉದ್ಯೋಗಿಗಳು, ಆಗಸ್ಟ್ 3 ಪ್ರೊಟೆಸ್ಟ್!
ಮೃತ ಯುವತಿ ಪಿಜಿಯಲ್ಲಿ ವಾಸ ಮಾಡ್ತಿದ್ದರು. ಊಟಕ್ಕೆ ಎಂದು ಹೊರಗೆ ಬಂದಾಗ ಅಪಘಾತ ಸಂಭವಿಸಿದೆ. ಕಸದ ಲಾರಿ ಚಾಲಕ ಅಪಘಾತದ ಬಳಿಕ ಪರಾರಿ ಆಗಿದ್ದಾನೆ.
ಘಟನೆ ಸಂಬಂಧ ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹ ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.