ಬೆಂಗಳೂರು:- ಮಾಜಿ ಸಿಎಂ, ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರ ಮೂಗಿನಲ್ಲಿ ಏಕಾಏಕಿ ರಕ್ತಸ್ರಾವವಾಗಿದೆ. ಸುದ್ದಿಗೋಷ್ಠಿ ಮಾತನಾಡುವ ವೇಳೆಯಲ್ಲೇ ದಿಢೀರ್ ಮೂಗಿನಲ್ಲಿ ರಕ್ತ ಸೋರಲು ಆರಂಭಿಸಿದೆ. ಕುಮಾರಸ್ವಾಮಿ ಅವರು ಇದನ್ನು ಮರೆಮಾಚಲು ಯತ್ನಿಸಿದರು ಸಹ ರಕ್ತಸ್ರಾವ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಮುಡಾ ಹಗರಣ: ಬಿಜೆಪಿ-ಜೆಡಿಎಸ್ ನ ಬೆಂಗಳೂರು ಟು ಮೈಸೂರು ಪಾದಯಾತ್ರೆ ಯಾವಾಗ ಗೊತ್ತಾ!?
ಮಾಧ್ಯಮಗಳ ಕ್ಯಾಮರಾದ ಎದುರು ಮಾತನಾಡುತ್ತಿದ್ದಾಗಲೇ ಹೆಚ್ಡಿಕೆ ಮೂಗಿನಿಂದ ರಕ್ತಸ್ರಾವವಾಗಿದೆ.
ಮಾತನಾಡುವಾಗಲೇ ಕುಮಾರಸ್ವಾಮಿ ಮೂಗಿನಿಂದ ರಕ್ತ ಸುರಿದಿದೆ. ಈ ವೇಳೆ ತಮ್ಮ ಬಳಿ ಇದ್ದ ಟವೆಲ್ನಿಂದ ಹೆಚ್ಡಿಕೆ ಮೂಗು ಒರೆಸಿಕೊಂಡಿದ್ದಾರೆ. ಆದರೆ ಮತ್ತೆ ಮೂಗಿನಿಂದ ರಕ್ತಸ್ರಾವವಾಗಿದ್ದು, ಅವರು ಹಾಕಿದ್ದ ಶರ್ಟ್ ಮೇಲೂ ರಕ್ತದ ಹನಿಗಳು ಬಿದ್ದಿವೆ.
ಮುಡಾ ಹಗರಣದ ಕುರಿತಂತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೋರಾಟದ ರೂಪುರೇಷೆ ಕುರಿತಂತೆ ಬೆಂಗಳೂರಿನಲ್ಲಿ ಸಭೆ ನಡೆದಿತ್ತು. ಹೀಗಾಗಿ ಬಿಜೆಪಿ ಜೆಡಿಎಸ್ ನಾಯಕರು ಕೂಡ ಜೊತೆಯಲ್ಲೇ ಇದ್ದರು. ಹೆಚ್ಡಿಕೆ ಮೂಗಿನಿಂದ ರಕ್ತ ಸುರಿಯೋದನ್ನು ನೋಡಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶಾಕ್ ಆಗಿದ್ದಾರೆ. ಅಲ್ಲದೇ ಜೊತೆಗೇ ಇದ್ದ ಹೆಚ್ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಕೂಡ ಗಾಬರಿಯಾಗಿದ್ದಾರೆ.
ಪದೇ ಪದೇ ರಕ್ತ ಸುರಿದಿದ್ರಿಂದ ಹೆಚ್ಡಿಕೆ ಮಾತನ್ನು ಅರ್ಧಕ್ಕೆ ಮೊಟಕುಗೊಳಿಸಿದ್ರು. ಬಳಿಕ ಆಸ್ಪತ್ರೆಗೆ ಹೊರಟರು. ಸದ್ಯ ಕುಮಾರಸ್ವಾಮಿ ಅವರು ಜಯನಗರರದ ಅಪೋಲೋ ಆಸ್ಪತ್ರೆಗೆ ತೆರಳಿದ್ದು, ಚಿಕಿತ್ಸೆ ಪಡೆದಿದ್ದಾರೆ.