ಬಾಗಲಕೋಟೆ:– ಪ್ರವಾಸೋದ್ಯಮ ಇಲಾಖೆ ವಂಚನೆ ಕೇಸ್ ನಲ್ಲಿ ಮತ್ತೆ 6 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.
ಪ್ರಕರಣದ ಕಿಂಗ್ ಪಿನ್ ಐಡಿಬಿಐ ಬ್ಯಾಂಕ್ ಸೇಲ್ಸ್ ಎಕ್ಸಿಕ್ಯೂಟಿವ್ ಸೂರಜ್ ಸಗರ ಎಂಬುವವರನ್ನು ಬಂಧಿಸಲಾಗಿತ್ತು. ಸೂರಜ್ ಸಗರ ವಂಚನೆಗೆ ಸಾತ್ ನೀಡಿದ ಹಿನ್ನೆಲೆ ಆರು ಜನರನ್ನು ಅರೆಸ್ಟ್ ಮಾಡಲಾಗಿದೆ.
ಆರೋಪಿ ಸೂರಜ್ ಸಗರ, ಐಡಿಬಿಐ ಬ್ಯಾಂಕ್ನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ. 2021ರಿಂದ 2024 ರವರೆಗೆ ಬರೋಬ್ಬರಿ 54 ಬಾರಿ ಹಣ ವರ್ಗಾವಣೆ ಮಾಡಿದ್ದಾನೆ. ಈ ಮೂಲಕ ಒಟ್ಟು 2 ಕೋಟಿ 47 ಲಕ್ಷ 73 ಸಾವಿರ 999 ರೂಪಾಯಿ ವಂಚಿಸಿದ್ದಾನೆ. ಇದೀಗ ಹಣ ಹಾಕಿಸಿಕೊಂಡ ಸ್ನೇಹಿತರಿಗೂ ಖಾಕಿ ಅರೆಸ್ಟ್ ಮಾಡಿದ್ದು, ಕಿರಣ್ ಜಿಂಗಾಡಿ, ಮಹೇಶ್ ಜಾಲವಾದಿ, ಶರಣಪ್ಪ ಬಸಣಗೌಡರ, ಅರುಣ್ ನಾಯ್ಕರ್, ಪ್ರವೀಣ್ ವೇಟಾಲ್ ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.