ಹಾವೇರಿ:- ಅವರೆಲ್ಲ ಗಾಡವಾದ ನಿದ್ದೆಗೆ ಜಾರಿದ್ರು, ರಕ್ಕಸ ಮಳೆಗೆ ನಿದ್ದೆಯ ಮಂಪರಿನಲ್ಲಿದ್ದವರ ಮೇಲೆ ಬೆಳಗಿನ ಜಾವ ಮನೆಯ ಮೇಲ್ಚಾವಣಿ ಬಿದ್ದು ಇಬ್ಬರು ಮಕ್ಕಳು ಸೇರಿ ಮೂರು ಜನ ಸಾವನ್ನಪ್ಪಿದ್ದು ಗ್ರಾಮಕ್ಕೆ ಗ್ರಾಮವೆ ಮಮ್ಮಲ ಮರುಗುತ್ತಿದೆ.
ಸಿಂಧನೂರು ಕ್ಷೇತ್ರದ “ಕೈ” ಶಾಸಕನ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿ ಬರಿಗೈಲಿ ವಾಪಸ್ಸಾದ ಖದೀಮರು!
ನಿನ್ನೆಯಿಂದ ಹಾವೇರಿ ಜಿಲ್ಲೆಯಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಎಡಬಿಡದೆ ಮಳೆ ಸುರಿಯುತ್ತಿದ್ದು ಹಳ್ಳ ಕೊಳ್ಳಗಳು ಭರ್ತಿಯಾಗಿವೆ. ಮತ್ತೊಂದೆಡೆ ಕಳೆದ ರಾತ್ರಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ಕುಸಿದು ಬಿದ್ದು ಇಬ್ಬರು ಮಕ್ಕಳು ಹಾಗೂ ಓರ್ವ ಮಹಿಳೆ ಸೇರಿ ಮೂರು ಜನರು ಸಾವನ್ನಪ್ಪಿದ್ದಾರೆ. ಎರಡು ವರ್ಷದ ಅವಳಿ ಜವಳಿ ಮಕ್ಕಳಾಗಿದ್ದ ಅನನ್ಯ ಹಾಗೂ ಅಮೂಲ್ಯ ಜೊತೆಗೆ ಮಲಗಿದ್ದ ಮಹಿಳೆ ಚೆನ್ನಮ್ಮ ಸಾವನ್ನಪ್ಪಿದ್ದಾಳೆ. ಗಾಯಾಳುಗಳಾಗಿರುವ ಮುತ್ತು ಆತನ ಪತ್ನಿ ಸುನೀತಾ ಅಪಾಯದಿಂದ ಪಾರಾಗಿದ್ದು ಸವಣೂರು ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರೆ, ಮತ್ತೋರ್ವ ಮಹಿಳೆ ಯಲ್ಲಮ್ಮ ಗಂಭೀರ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಣ್ಣಿನ ಮೇಲ್ಚಾವಣಿಯ ಹಳೆಯ ಮನೆಯಲ್ಲೆ ಈ ಕುಟುಂಬ ವಾಸವಾಗಿತ್ತು. ಮಳೆಯಿಂದ ರಕ್ಷಣೆಗಾಗಿ ಮೇಲ್ಚಾವಣಿ ಮೇಲೆ ತಾಡಪತ್ರೆ ಹೊದಿಸಲಾಗಿತ್ತು. ಆದ್ರೆ ವಿಧಿಯಾಟ ಬೇಟೆಯಾಗಿತ್ತು. ರಾತ್ರಿ ಮೂರು ಗಂಟೆ ವೇಳೆಗೆ ಮೇಲ್ಚಾವಣಿ ಕುಸಿಯುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ರಕ್ಷಣೆಗೆ ದಾವಿಸಿದ್ದಾರೆ. ತಕ್ಷಣ ಮಣ್ಣಿನಡಿಯಲ್ಲಿ ಸಿಲುಕಿದ್ದವರನ್ನ ಹೊರತೆಗೆದಿದ್ದಾರೆ. ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ರೆ ಒಂದೂವರೆ ಗಂಟೆ ತಡವಾಗಿ ಬಂದಿದೆ. ಆಂಬ್ಯುಲೇನ್ಸ್ ಬೇಗ ಬಂದಿದ್ರೆ ಇಬ್ಬರು ಮಕ್ಕಳು ಬದುಕುತ್ತಿದ್ರು ಎಂದು ಸಂಸದ ಬಸವರಾಜ್ ಬೊಮ್ಮಾಯಿ ಆಕ್ರೋಶ ಹೊರಹಾಕಿದ್ದಾರೆ.
ಬದುಕಿ ಬಾಳಬೇಕಿದ್ದ ಎರಡು ಕಂದಮ್ಮಗಳನ್ನ ಮಳೆರಾಯ ಬಲಿ ತೆಗೆದುಕೊಂಡಿದ್ದಾನೆ. ಮೃತರ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದ್ದು ಗ್ರಾಮಕ್ಕೆ ಗ್ರಾಮವೆ ಮರಗುತ್ತಿದೆ. ಸ್ಥಳಕ್ಕೆ ಬೇಟಿ ನೀಡಿದ ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ, ಜಿಲ್ಲಾಧಿಕಾರಿ ಕುಟುಂಬಸ್ಥರಿಗೆ ದೈರ್ಯ ಹೇಳಿದ್ದಾರೆ. ಸಂಸದ ಬಸವರಾಜ್ ಬೊಮ್ಮಾಯಿ ಮೃತರ ಕುಟುಂಬಕ್ಕೆ 2 ಲಕ್ಷ ವಯಕ್ತಿಕ ಪರಿಹಾರ ನೀಡಿದ್ದು ಹೆಚ್ಚಿನ ಪರಿಹಾರಕ್ಕೆ ಸರಕಾರವನ್ನ ಒತ್ತಾಯಿಸಿದ್ದಾರೆ.