ಕೋಲಾರ: ಬಂಜೆತನ ನಿವಾರಣೆಗೆ ಬೇಕಾದ ಎಲ್ಲಾ ರೀತಿಯ ಗುಣಮಟ್ಟದ ಹಾಗೂ ಕಡಿಮೆ ದರದಲ್ಲಿ ಚಿಕಿತ್ಸೆ ಪ್ರಸ್ತುತ ಬೇಬಿ ಸೈನ್ಸ್ ಐ.ವಿ.ಎಫ್ ಕ್ಲೀನಿಕ್ ನಲ್ಲಿ ದೊರೆಯುತ್ತಿದ್ದು, ಚಿನ್ನದನಾಡಿನ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ರಾಜ್ಯಗಳ ಜನತೆ ಈ ಸೌಲಭ್ಯ ಬಳಸಿಕೊಳ್ಳುವಂತೆ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಜಿಲ್ಲಾ ಅಧ್ಯಕ್ಷ ಹಾಗೂ ಮಂಜುನಾಥ ಹೆಲ್ತ್ ಕೇರ್ ಸೆಂಟರ್ ನ ಡಾ.ನಾರಾಯಣ ಸ್ವಾಮಿ ಅವ್ರು ಹೇಳಿದ್ರು.
Narendra Modi: ಮುಂಬೈಗೆ ಜುಲೈ13 ರಂದು PM ಮೋದಿ ಭೇಟಿ: ಕಾರ್ಯಕ್ರಮದ ವೇಳಾಪಟ್ಟಿ ಇಲ್ಲಿದೆ !
ಇಂದು ನಗರದಲ್ಲಿ ಬೇಬಿ ಸೈನ್ಸ್ ಐ.ವಿ.ಎಫ್ ಕ್ಲೀನಿಕ್ ನಲ್ಲಿ ನೂತನವಾಗಿ ಅಳವಡಿಸಿರುವ ಐ.ವಿ.ಎಫ್ ಕಲ್ಚರಲ್ ಲ್ಯಾಬ್ ನ್ನು ಉದ್ಘಾಟಿಸಿ ಮಾತನಾಡಿದ್ರು, ನೂತನವಾಗಿ ಅಳವಡಿಸಿರುವ ಲ್ಯಾಬ್ ನಿಂದ ಜನತೆಗೆ ಗುಣಮಟ್ಟದ ಹಾಗೂ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಸೌಲಭ್ಯ ಸಿಗುವಂತಾಗಲಿ ಮತ್ತು ಬಂಜೆತನ ನಿವಾರಣೆಯಾಗಿ ಹೆಚ್ಚು ಹೆಚ್ಚು ಮಹಿಳೆಯರು ಮಕ್ಕಳಿಗೆ ಜನ್ಮ ನೀಡಲಿ ಎಂದು ತಿಳಿಸಿದ್ರು.
ಇತ್ತಿಚಿನ ದಿನಗಳಲ್ಲಿ ಬಂಜೆತನ ಒಂದು ಸಮಸ್ಯೆಯಾಗಿ ಕಾಡುತ್ತಿದ್ದು,ಇದರ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳ ಬೇಕಾಗಿತ್ತು ಹಾಗೂ ದುಬಾರಿ ವೆಚ್ಚವಾಗುತ್ತಿತ್ತು,ಆದರೆ ಈಗ ದೇಶದಲ್ಲಿ 12 ಸೆಂಟರ್ ಗಳಿದ್ದು ಕೋಲಾರ ನಗರದಲ್ಲೇ ಉತ್ತಮ ಗುಣಮಟ್ಟದ ಹಾಗೂ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆಯನ್ನು ಬೇಬಿ ಸೈನ್ಸ್ ಐ.ವಿ.ಎಫ್ ಕ್ಲೀನಿಕ್ ಆಡಳಿತ ಮಂಡಲಿ ನೀಡಲಿ ಎಂದು ಸಲಹೆ ನೀಡಿದರು.
ಬೇಬಿ ಸೈನ್ಸ್ ಐ.ವಿ.ಎಫ್ ಕ್ಲೀನಿಕ್ ನ ವೈದ್ಯಕೀಯ ನಿರ್ದೇಶಕ ಡಾ.ಸಿ.ಎಸ್.ಮಂಜುನಾಥ್ ಮಾತನಾಡಿ ನಮ್ಮ ಸಂಸ್ಥೆ ದೇಶದಲ್ಲಿ ಸೆಂಟರ್ ಗಳನ್ನು ಹೊಂದಿದ್ದು,ಸುಮಾರು ಮೂರು ಸಾವಿರ ಮಂದಿಗೂ ಹೆಚ್ಚು ಮಹಿಳೆಯರು ಚಿಕಿತ್ಸೆ ಪಡೆದಿದ್ದು ಶೇ 70 ರಷ್ಟು ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ,ಕೋಲಾರ ನಗರದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಪ್ರಾರಂಭವಾದ ನಮ್ಮ ಕ್ಲೀನಿಕ್ ನಲ್ಲಿ 150 ಕ್ಕೂ ಹೆಚ್ಚಿನ ಮಹಿಳೆಯರು ಚಿಕಿತ್ಸೆ ಪಡೆದಿದ್ದು ಶೇ 60 ರಷ್ಟು ಮಹಿಳೆಯರು ಮಕ್ಕಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಲಾರದಲ್ಲಿ ಐ.ವಿ.ಎಫ್ ಕಲ್ಚರಲ್ ಲ್ಯಾಬ್ ಇಲ್ಲದ ಕಾರಣ ಅಂತಿಮ ಚಿಕಿತ್ಸೆಗೆ ಬೆಂಗಳೂರಿಗೆ ಹೋಗಬೇಕಾಗಿತ್ತು. ಪ್ರಸ್ತುತ ಕೋಲಾರದ ಕ್ಲೀನಿಕ್ ನಲ್ಲಿ ನೂತನ ಲ್ಯಾಬ್ ಅಳವಡಿಸಿರುವುದರಿಂದ ಎಲ್ಲಾ ರೀತಿಯ ಚಿಕಿತ್ಸೆಗಳು ಇನ್ನು ಮುಂದೆ ಕೋಲಾರದ ಕ್ಲೀನಿಕ್ ನಲ್ಲೇ ದೊರೆಯುತ್ತದೆ ಎಂದು ವಿವರಿಸಿದರು.
ಬೆಂಗಳೂರು ನಗರದಲ್ಲಿ ಐ.ವಿ.ಎಫ್ ಚಿಕಿತ್ಸೆಗೆ 2.5 ಲಕ್ಷ ಖರ್ಚು ಆಗುತ್ತಿದ್ದು,ಕೋಲಾರ ನಗರದಲ್ಲಿ 1.6 ಲಕ್ಷ ರೂಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಹಾಗೂ ನಮ್ಮ ಕ್ಲೀನಿಕ್ ಬಜಾಜ್ ಫೈನಾನ್ಸ್ ಸಹಕಾರದಲ್ಲಿ ಇ.ಎಂ.ಐ.ಸೌಲಭ್ಯದಲ್ಲಿ ಸಹ ಚಿಕಿತ್ಸೆ ನೀಡಲಾಗುವುದೆಂದು ಅವರು ವಿವರಿಸಿದರು.
ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ಇಚ್ಚಿಸುವವರು ಹಲವಾರು ಕಾನೂನುಗಳು ಇದ್ದು ಅವುಗಳನ್ನು ಪೂರೈಸಿದರೆ ಮಗು ಪಡೆಯ ಬಹುದಾಗಿದೆಯೆಂದು ಹೇಳಿದರು.
ಕ್ಲೀನಿಕ್ ಹೆಡ್ ಡಾ.ಜ್ಯೋತಿ ಮಾತನಾಡಿ ಐ.ವಿ.ಎಫ್ ಚಿಕಿತ್ಸೆಯ ಹಲವು ಪರೀಕ್ಷೆಗಳಿಗೆ ಹಾಗೂ ಅಂತಿಮ ಚಿಕಿತ್ಸೆಗೆ ಬೆಂಗಳೂರಿಗೆ ತೆರಳಬೇಕಾದ ಪರಿಸ್ಥಿತಿ ಇತ್ತು ಪ್ರಸ್ತುತ ಕೋಲಾರದ ಕ್ಲೀನಿಕ್ ನಲ್ಲಿ ಅಳವಡಿಸಿರುವ ಲ್ಯಾಬ್ ನಿಂದ ಸಂಪೂರ್ಣ ಚಿಕಿತ್ಸೆ ಕೋಲಾರದಲ್ಲೇ ದೊರೆಯುವುದರಿಂದ ಜಿಲ್ಲೆಯ ಜನತೆಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ ಇದರ ಸ್ದಬಳಕೆ ಮಾಡಿಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8147639866,9844954404 ಗಳನ್ನು ಸಂಪರ್ಕಿಸುವಂತೆ ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀನಿವಾಸ ಹೆಲ್ತ್ ಕೇರ್ ನ ಶಂಕರ್,ಡಾ.ಕಾವ್ಯ ಡಿ.ಶರ್ಮಾ,
ಡಾ.ಉಮೇಶ್,ಕ್ಲಿನಿಕ್ ನ ಪಿ.ಆರ್.ಒ.ಮಂಜು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.