ಬೆಂಗಳೂರು:- ದರ್ಶನ್ ಕೇಸ್ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡದ ಆರೋಪ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಯಾವ ಒತ್ತಡವೂ ಇಲ್ಲ, ಏನು ಇಲ್ಲ ನಾನು ವಿಚಾರಿಸಿದ್ದೇನೆ. 13 ಜನ ಆರೋಪಿಗಳು ಇದಾರೆ. ಬೆಳಗ್ಗೆಯಿಂದ ಟಿವಿಯವರು ಕ್ಯಾಮರಾ ಹಾಕೊಂಡು ಕುಳಿತಿರ್ತಿರಾ. ಪೊಲೀಸರಿಗೆ ಫ್ರೀಯಾಗಿ ಕೆಲಸ ಮಾಡಲು ಅವಕಾಶ ಬೇಕು. ಆ ದೃಷ್ಟಿಯಿಂದ ರಕ್ಷಣೆಗೆ ಶಾಮಿಯಾನ ಹಾಕಿಸಿಕೊಂಡಿದ್ದಾರೆ. ನಮ್ಮ ನಮ್ ಮಿನಿಸ್ಟರ್ ಇನ್ವಾಲ್ವ್ ಆಗಿಲ್ಲ. ಯಾರು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡ್ತಿಲ್ಲ. ಈ ಪ್ರಕರಣದ ಬಗ್ಗೆ ನಾವು ರೆಸ್ಪಾನ್ಸ್ ಸಹ ಮಾಡ್ತಿಲ್ಲ ಎಂದರು.
ಯಡಿಯೂರಪ್ಪ ಬಂಧಿಸುವ ವಿಚಾರದಲ್ಲಿ ಕಾಂಗ್ರೆಸ್ ದ್ವೇಷ ರಾಜಕಾರಣ ಆರೋಪಕ್ಕೆ ಮಾತನಾಡಿ, ನಾನು ಜಾಸ್ತಿ ತಿಳಿದುಕೊಳ್ಳಲು ಹೋಗಿಲ್ಲ. ಕಾಂಗ್ರೆಸ್ ಯಾರ ಮೇಲೂ ದ್ವೇಷ ಮಾಡಲ್ಲ. ನನಗೆ ನೋಡಿದರೆ ಅಯ್ಯೋ ಅನ್ಸುತ್ತೆ..ನನಗೂ ಗೊತ್ತಿರಲಿಲ್ಲ. ರಾಹುಲ್ ಗಾಂಧಿ ಕಷ್ಟ ಅವರಿಗೆ. ಅವರ ಮೇಲೆ ಕೇಸ್ ಹಾಕಿದ್ದು ಯಾವ ರಾಜಕಾರಣ
ದ್ವೇಷದ ರಾಜಕಾರಣ ಮಾಡುತ್ತಿರುವುದು ಬಿಜೆಪಿಯವರು. ರಾಹುಲ್ ಗಾಂಧಿ ಏನ್ AICC ಅಧ್ಯಕ್ಷರಾ..? ಅವರೇನ್ ಜಾಹೀರಾತು ಕೊಟ್ಟಿದ್ರಾ..? ಜಾಹೀರಾತು ಕೊಟ್ಟಿದ್ದು ಕೆಪಿಸಿಸಿ ನಮ್ಮೇಲೆ ಕೇಸ್ ಹಾಕಿದ್ದಕ್ಕೆ ನಾವು ಕೋರ್ಟ್ ಗೆ ಹೋಗಿಲ್ವಾ ಎಂದರು.
ವಿಜಯೇಂದ್ರಗೆ ಕಾಮನ್ ಸೆನ್ಸ್ ಇರಲಿಲ್ವಾ..? MLC ಹಾಗೂ ಬಿಜೆಪಿ ಅಡ್ವೊಕೇಟ್ ಅಸೋಸಿಯೇಶನ್ ಅಧ್ಯಕ್ಷರ ಕೈಯಲ್ಲಿ ಕೇಸ್ ಹಾಕ್ಸಿದ್ದೀರಾ, ನಾವು ಅಂತಹ ನೀಚ ರಾಜಕಾರಣ ಮಾಡಲ್ಲ ಎಂದರು.
ಕಾಂಗ್ರೆಸ್ ಒಕ್ಕಲಿಗ ನಾಯಕರ ಜೊತೆ ಡಿನ್ನರ್ ಮೀಟಿಂಗ್ ವಿಚಾರವಾಗಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಯಾಕೆ ಈ ರೀತಿಯ ವೋಟಿಂಗ್ ಆಗಿದೆ ಎಂಬುದರ ಬಗ್ಗೆ ಚರ್ಚೆ ಮಾಡಬೇಕಿತ್ತು. ಸೋತಿದ್ದೇವೆ ಒಪ್ಪಿಕೊಳ್ತೀವಿ. ರಾಜಕಾರಣದಲ್ಲಿ ಇದೆಲ್ಲಾ ನಡೆಯುತ್ತೆ. ಚೆಲುವರಾಯಸ್ವಾಮಿ, ಬಾಲಕೃಷ್ಣ, ಇವರೆಲ್ಲರೂ ಸೋತಿದ್ದರು..ಪುನಃ ವಾಪಸ್ ಅವರು ಗೆದ್ದಿದ್ದಾರೆ
ಇವೆಲ್ಲವೂ ಪರ್ಮನೆಂಟ್ ಅಲ್ಲ
ಸೋಲು ಗೆಲುವ ಇದ್ದೆ ಇರುತ್ತೆ
6 ತಿಂಗಳಿಗೆಲ್ಲಾ ಜನರ ಭಾವನೆ ಬದಲಾವಣೆ ಆಗುತ್ತೆ
ಕೆಲಸ ಕಾರ್ಯ ಬದಲಾವಣೆ ಆಗುತ್ತೆ
ನಾವು ಹಿಂದೆ ಒಂದೇ ಸೀಟ್ ಗೆದ್ದಿದ್ವಿ, ಈ ಬಾರಿ 9 ಸೀಟ್ ಗೆದ್ದಿದ್ದೇವೆ. ನಾಲ್ಕೈದು ಸೀಟ್ ಕಡಿಮೆ ಆಗಿದೆ
ಕಾರ್ಯಕರ್ತರು ಯಾರು ಚಿಂತನೆ ಮಾಡುವುದು ಬೇಡ. ನನಗೆ ನಂಬಿಕೆ ಇದೆ 2028ಕ್ಕೆ ಕಾಂಗ್ರೆಸ್ ಸರ್ಕಾರ ಮತ್ತೆ ಬರುತ್ತೆ. ನಾನು ಸಿದ್ದರಾಮಯ್ಯ ಒಟ್ಟಿಗೆ ದುಡಿದು ಈ ಸರ್ಕಾರವನ್ನು ಭದ್ರಗೊಳಿಸುತ್ತೇವೆ ಎಂದರು.