ಬೆಂಗಳೂರು:- 108 ಸಿಬ್ಬಂದಿಗಳಿಗೆ ಹೆಚ್ಚುವರಿ ವೇತನ ನೀಡಲು ಸಾಧ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.
ಬಾಗಲಕೋಟೆ: ಚುನಾಯಿತ ಸಿಬ್ಬಂದಿಗಳಿಗೆ ಹೊಟ್ಟೆ ತುಂಬ ಊಟ ಪಡಿಸಿದ ತಾಯಂದಿರು..!
108 ಸಿಬ್ಬಂದಿ ಮುಷ್ಕರದ ವಿಚಾರವಾಗಿ ಟ್ವೀಟ್ ಮಾಡಿರುವ ಸಚಿವರು, ಸಿಬ್ಬಂದಿಗೆ ಕನಿಷ್ಠ ವೇತನದನ್ವಯ 35 ಸಾವಿರಕ್ಕೂ ಹೆಚ್ವು ವೇತನ ಸಿಗುತ್ತಿದೆ. ಆದರೆ ಕನಿಷ್ಟ ವೇತನದ ಮೇಲೆ 45% ಹೆಚ್ಚುವರಿ ವೇತನ ಅನುಷ್ಠಾನಕ್ಕೆ ಸಿಬ್ಬಂದಿ ಬೇಡಿಕೆ ಇಟ್ಟಿದ್ದು. ನೀತಿ ಸಂಹಿತೆ ಹಿನ್ನೆಲೆ ನಿಯಮಬಾಹಿರವಾಗಿ ಬೇಡಿಕೆ ಪೂರೈಸಲು ಸಾಧ್ಯವಿಲ್ಲ.
ಈ ಬಗ್ಗೆ 108 ಸಿಬ್ಬಂದಿಗಳಿಗೆ ಮನವರಿಕೆ ಮಾಡಿಕೊಡಲಾಗಿದ್ದು, ಮುಷ್ಕರ ನಡೆಸದಂತೆ ಮನವಿ ಮಾಡಲಾಗಿದೆ. ಇದಕ್ಕೂ ಮೀರಿ ಸಿಬ್ಬಂದಿಗಳು ಮುಷ್ಕರಕ್ಕೆ ಮುಂದಾದರೆ ಪರ್ಯಾಯ ವ್ಯವಸ್ಥೆಗೆ ಸರ್ಕಾರ ಸಿದ್ಧವಿದ್ಧು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.