ಬೆಂಗಳೂರು: ಅದು ಕೆಂಪೇಗೌಡ ಏರ್ಪೊಟ್ಗೆ ಸಮೀಪದಲ್ಲಿರುವ ಗ್ರಾಮ ಹೀಗಾಗೆ ಆ ಗ್ರಾಮದ ಜಮೀನನ್ನ ಕೈಗಾರಿಕಾ ಪ್ರದೇಶವಾಗಿ ಮಾಡಿದ್ದು ಆ್ಯಪಲ್ ನ ಪಾಕ್ಸ್ ಕಾನ್ ಕಂಪನಿ ಕಾಮಗಾರಿ ಸಹ ಆರಂಬಿಸಿದೆ. ಆದ್ರೆ ಇದೀಗ ಇದೇ ಕಾಮಗಾರಿಯೆ ಸ್ಥಳಿಯ ರೈತರು ಕೆಐಎಡಿಬಿ ಅಧಿಕಾರಿಗಳ ನಡುವೆ ಕಿತ್ತಾಟಕ್ಕೆ ಕಾರಣವಾಗಿದ್ದು ವಿಷದ ಬಾಟಲ್ ಹಿಡಿದು ಹೈಡ್ರಾಮವೆ ನಡೆದು ಹೋಗಿದೆ.
ಕಣ್ಣಾಯಿಸಿದಷ್ಟು ದೂರ ಕೈಗಾರಿಕಾ ಪ್ರದೇಶಕ್ಕೆ ಜಮೀನು ಭೂ ಸ್ವಾಧೀನವಾಗಿದ್ದು ಬೃಹತ್ ಕಂಪನಿಗಳ ನಿರ್ಮಾಣ ಕಾರ್ಯ ಸಹ ಭರದಿಂದ ಸಾಗ್ತಿದೆ. ಕಾಮಗಾರಿ ಒಂದು ಕಡೆ ನಡೆಯುತ್ತಿದ್ರೆ ಮತ್ತೊಂದು ಕಡೆ ಸ್ಥಳಿಯ ರೈತರು ಪೆಂಡಲ್ ಹಾಕ್ಕೊಂಡು ಧರಣಿ ನಡೆಸುತ್ತಿದ್ದು ಸ್ಥಳಕ್ಕಾಗಮಿಸಿದ ಕೆಐಎಡಿಬಿ ಅಧಿಕಾರಿಗಳನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ತಿದ್ದು ರೈತನೊಬ್ಬ ವಿಷದ ಬಾಟಲ್ ಕುಡಿಯಲು ಯತ್ನಿಸಿದ್ದಾನೆ.
ಹೌದು ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹಾಗೂ ಕುಂದಾಣ ಹೋಬಳಿಯಲ್ಲಿ ಕೆಐಎಡಿಬಿ ಎರಡನೆ ಹಂತದ ಭೂಸ್ವಾಧಿನ ಮಾಡ್ತಿದೆ. ಜೊತೆಗೆ ಈಗಾಗಲೆ ಕುಂದಾಣ ಹೋಬಳಿಯ ದೊಡ್ಡಗೊಲ್ಲಹಳ್ಳಿ ಬಳಿ ಕೈಗಾರಿಕಾ ಪ್ರದೇಶಕ್ಕೆ ರಸ್ತೆಗಳನ್ನ ನಿರ್ಮಾಣ ಮಾಡಿದ್ದು ಆ್ಯಪಲ್ ನ ಪಾಕ್ಸ್ ಕಾನ್ ಸೇರಿದಂತೆ ಹಲವು ಅಂತರಾಷ್ಟ್ರಿಯ ಬೃಹತ್ ಕಂಪನಿಗಳ ನಿರ್ಮಾಣ ಕಾರ್ಯ ಭರದಿಂದ ಸಾಗ್ತಿದೆ. ಆದ್ರೆ ಈ ನಡುವೆ ಕಂಪನಿಗೆ ರೈತರ ಜಮೀನು ಕೊಡಿಸಿರುವ ಕೆಐಎಡಿಬಿ ಅಧಿಕಾರಿಗಳು ಪಾಕ್ಸ್ ಕಾನ್ ಕಂಪನಿಗೆ 30 ಎಕರೆ ಜಮೀನು ನೀಡಿರುವ ಶ್ರೀನಿವಾಸ್ ಎಂಬುವವರಿಗೆ ಪರಿಹಾರ ನೀಡಿಲ್ವಂತೆ.
ಹೀಗಾಗಿ ಹಲವು ಭಾರಿ ಪರಿಹಾರದ ಹಣಕ್ಕಾಗಿ ಕೆಐಎಡಿಬಿ ಮೆಟ್ಟಿಲೇರಿದ್ರು ಪರಿಹಾರ ನೀಡದೆ ಸತಾಯಿಸುತ್ತಿದ್ದಾರೆ ಅಂತ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ಪರಿಹಾರ ಹಣ ನೀಡದೆ ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿದ್ದಾರೆ ನಾವು ಯಾವುದೇ ಕಾರಣಕ್ಕೂ ಭೂಮಿ ಕೊಡಲ್ಲ ಅಂತ ರೈತರು ಜಮೀನಿನಲ್ಲೆ ಪೆಂಡಲ್ ಹಾಕಿಕೊಂಡು ಧರಣಿ ನಡೆಸುತ್ತಿದ್ದಾರೆ. ಅಲ್ಲದೆ ಧರಣಿ ನಿರತ ರೈತರನ್ನ ಪೊಲೀಸರು ಹೊರ ಕಳಿಸಲು ಮುಂದಾಗ್ತಿದ್ದಂತೆ ರೈತರು ವಿಷದ ಬಾಟಲ್ ಹಿಡಿದು ಆತ್ಮಹತ್ಯೆ ಯತ್ನ ಮಾಡಿದ್ದು ಕೂಡಲೆ ಅಲರ್ಟ್ ಆದ ಪೊಲೀಸರು ಬಾಟಲ್ ಕಿತ್ತುಕೊಂಡಿದ್ದಾರೆ.
ಧರಣಿ ನಿರತ ರೈತ ಶ್ರೀನಿವಾಸ್ ಕುಟುಂಬದಲ್ಲಿ ಮೂವತ್ತು ಜನರಿದ್ದು ಪಿತ್ರಾರ್ಜಿತ ಆಸ್ತಿಯಾಗಿ 27 ಎಕರೆ ಬಂದಿದ್ರೆ ಮೂರು ಎಕರೆ ಜಮೀನನ್ನ ಶ್ರೀನಿವಾಸ್ ಹಣ ನೀಡಿ ಸ್ವಯಾರ್ಜಿತವಾಗಿ ಕೊಂಡು ಕೊಂಡಿದ್ನಂತೆ. ಹೀಗಾಗಿ ಪಿತಾರ್ಜಿತ ಹಾಗೂ ಸ್ವಯಾರ್ಜಿತ ಎರಡು ಆಸ್ತಿಗಳು ಕೆಐಎಡಿಬಿಗೆ ಹೋಗಿದ್ದು ಪಿತ್ರಾರ್ಜಿತ 27 ಎಕರೆ ಜಮೀನು ವಿಚಾರ ಅಣ್ಣ ತಮ್ಮಂದಿರ ಜಗಳದಿಂದ ಕೋರ್ಟ್ ಮೆಟ್ಟಿಲೇರಿದ್ದು ಕಷ್ಟಾಪಟ್ಟು ದುಡಿದು ತೆಗೆದುಕೊಂಡ ಮೂರ ಎಕರೆ ಜಮೀನಿಗಾದ್ರು ಪರಿಹಾರ ಕೊಡಿ ಅಂತ ಶ್ರೀನಿವಾಸ್ ಕೇಳ್ತಿದ್ದಾರೆ. ಆದ್ರೆ ಯಾವುದಕ್ಕೂ ಪರಿಹಾರ ನೀಡದೆ ಅಧಿಕಾರಿಗಳು ವಂಚಿಸುತ್ತಿದ್ದು,
ಹಣ ಜಮೀನು ಇಲ್ಲದೆ ನಾವೆಲ್ಲಿಗೆ ಹೋಗಬೇಕು ಅಂತ ಶ್ರೀನಿವಾಸ್ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಇನ್ನೂ ಈ ಬಗ್ಗೆ ಸ್ಥಳಕ್ಕೆ ಬಂದಿದ್ದ ಕೆಐಎಡಿಬಿ ಭೂ ಸ್ವಾಧೀನ ಅಧಿಕಾರಿ ಬಾಳಪ್ಪ ಅವರನ್ನ ಕೇಳಿದ್ರೆ ಈಗಾಗಲೆ ಪಾಕ್ಸ್ ಕಾನ್ಗ ಕಂಪನಿಗೆ ಭೂಮಿ ನೀಡಿದ್ದು ರೈತರ ಪರಿಹಾರ ಹಣ ಕೋರ್ಟ್ ನಲ್ಲಿ ಕಟ್ಟಿದ್ದೇವೆ. ವ್ಯಾಜ್ಯ ಮುಗಿದ ನಂತರ ಅವರ ಪಾಲು ಅವರು ತೆಗೆದುಕೊಳ್ಳಲಿ ಇದೀಗ ಭೂಮಿ ಬಿಟ್ಟುಕೊಡಬೇಕು ಅಂತಿದ್ದಾರೆ.
ಒಟ್ಟಾರೆ ಕೆಐಎಡಿಬಿಗೆ ಇದ್ದ ಜಮೀನು ಕಳೆದುಕೊಂಡು ರೈತರು ಇತ್ತ ಪರಿಹಾರವು ಇಲ್ಲದೆ ಜಮೀನು ಇಲ್ಲದೆ ಪರದಾಡ್ತಿದ್ದು ಅಧಿಕಾರಿಗಳ ವಿರುದ್ದ ಇಡಿ ಶಾಪ ಹಾಕ್ತಿದ್ದಾರೆ. ಇನ್ನೂ ಈ ಬಗ್ಗೆ ಕೆಐಎಡಿಬಿ ಅಧಿಕಾರಿಗಳು ಪರಿಶೀಲಿಸಿ ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಾಗಿದೆ..