ನೋವಿನ ಅಗ್ನಿಕುಂಡದಲ್ಲಿ ಬೆಂದು, ನೊಂದು ತಾವು ಉಳಿದು, ಮಗನನ್ನೂ ಉಳಿಸಿ ಬೆಳೆಸಿ ಇಲ್ಲೀವರೆಗೆ ಸಾಗಿಬಂದಿದ್ದ ಲೀಲಾವತಿಯವರು, ಈಗ ಕಾಲನ ಕರೆಗೆ ಓಗೊಟ್ಟು ಮಗನನ್ನು ಜಗತ್ತಿನ ಕೈಗಿಟ್ಟು ಹೊರಟು ಹೋಗಿದ್ದಾರೆ. ತಾಯಿಯನ್ನು ಕಳೆದುಕೊಂಡ ವಿನೋದ್ ರಾಜ್ ನೋವು ಕೇವಲ ಅವರೊಬ್ಬರದ್ದಲ್ಲ.. ಎಲ್ಲರದ್ದೂ..
ನಾಗಕನ್ನಿಕೆಯಾಗಿ ಚಂದನವಕ್ಕೆ ನಟಿಯ ಪದಾರ್ಪಣೆ
ರಂಗಭೂಮಿಯಲ್ಲಿದ್ದ ಲೀಲಾವತಿಯವರು 1949 ರಲ್ಲಿ, ಶಂಕರ್ ನಾಗ್ ಅಭಿನಯದ ನಾಗಕನ್ನಿಕೆ ಸಿನಿಮಾದಲ್ಲಿ ಸಖಿಯ ಪಾತ್ರದ ಮೂಲಕ ಚಂದನವನಕ್ಕೆ ಪ್ರವೇಶ ಮಾಡ್ತಾರೆ. ಬಟ್ ಇದು ಅವರ ನಟನಾ ಮೆರುಗಿನ ಆರಂಭವಷ್ಟೇ. ಅವರ ನಿಜವಾದ ಮೆರುಗು ಹೆಣ್ಣಿನ ಮಾಂಗಲ್ಯದ ಮಹತ್ವ ಸಾರುವುದರಿಂದ ಶುರುವಾಗುತ್ತೆ. ಹೌದು ಲೀಲಾವತಿಯವ್ರು ಮೊದಲು ನಾಯಕಿಯಾಗಿ ಕಾಣಿಸಿಕೊಂಡಿದ್ದ ಅಚ್ಚ ಕನ್ನಡದ ಚಿತ್ರ ‘ಮಾಂಗಲ್ಯ ಯೋಗ’.
ಮೇರು ನಟ ಕಿರೀಟ.. ಡಾ.ರಾಜ್ ಕುಮಾರ್ ಲೀಲಾವತಿ ಮ್ಯಾಜಿಕ್ ಅದು ನಟನೆಗೆ ಒಂದು ಭೂಷಣ. ಈ ಇಬ್ಬರ ಜೋಡಿ ಚಂದನವನಕ್ಕೆ ಅಂದ ತಂದವರು. ಡಾ. ರಾಜ್ ಮತ್ತು ಲೀಲಾವತಿ ಅವ್ರ ಮೊದಲ ಜೋಡಿ. ರಣಧೀರ ಕಂಠೀರವ. ಈ ಜೋಡಿಯ ಅಸಲಿ ಸಿನಿಮಾ ಅಂದ್ರೆ ರಾಣಿ ಹೊನ್ನಮ್ಮ. ಈ ಚಿತ್ರದ ಯಶಸ್ಸಿನ ನಂತರ ರಾಜ್ ಕುಮಾರ್ ಮತ್ತು ಲೀಲಾವತಿ ಅವರ ಜೋಡಿ ನಾಡಿನ ಮೂಲೆ ಮೂಲೇಗೂ ಖ್ಯಾತಿ ಗಳಿಸಿಬಿಡ್ತು.
ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಹೀಗೆ ಅವರ ಹಲವಾರು ಚಿತ್ರಗಳ ನಾಯಕಿಯಾದರು. ಅದೆಷ್ಟೋ ಸಿನಿಮಾಗಳಲ್ಲಿ ನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುವ ನಾಯಕಿಯಾಗಿ ಗುರುತಿಸಿಕೊಂಡಿದ್ದವರು ಲೀಲಾವತಿ.
ನಟನೆಯಲ್ಲಿ ಅಭಿನೇತ್ರಿ.. ನಟರಾಜನ ರೂಪಕ್ಕೆ ಸ್ತ್ರೀ ರೂಪ
ಆ ಮಹಾನಟಿಯ ‘ಲೀಲಾ’ ಜಾಲ ಬರೀ ಯೌನಕ್ಕೆ ನಿಲ್ಲುವಂತದ್ದಾಗಿರಲಿಲ್ಲ. 70ರ ದಶಕದ ಬಳಿಕ ಪೋಷಕ ಪಾತ್ರಗಳಲ್ಲಿ ಲೀಲಾವತಿಯವರು ಮತ್ತೊಂದು ಪಯಣ ಶುರು ಮಾಡಿದ್ರು. ನಾಯಕಿಯಾಗಿ, ಅಮ್ಮನಾಗಿ, ಅಜ್ಜಿಯಾಗಿ.. ಹೀಗೆ ಒಂದಲ್ಲ ಎರಡಲ್ಲ.. ನಾನಾ ಬಗೆಯ ಪೋಷಕ ಪಾತ್ರಗಳಲ್ಲಿ ನಟಿಸಿ ಅಮ್ಮ ನಿನಗೆ ಸಾಟಿ ಯಾರಿಲ್ಲ ಅನಿಸಿಕೊಂಡಿದ್ದವರು. ಗೆಜ್ಜೆ ಪೂಜೆ, ಸಿಪಾಯಿ ರಾಮು, ನಾಗರಹಾವು, ಭಕ್ತ ಕುಂಬಾರ ಸಿನಿಮಾಗಳಲ್ಲಿನ ಅವರ ನಟನೆ ಈಗಲೂ ಕಾಡುತ್ತಲೇ ಇರುತ್ತೆ. ಮುಂದೆಯೂ ಕಾಡುತ್ತೆ.
ಲೀಲಾವತಿ ಅವರು ಬರೀ ಕನ್ನಡ ಅಷ್ಟೇ ಅಲ್ಲ. ತಮಿಳು, ತೆಲಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600 ಸಿನಿಮಾಗಳಲ್ಲಿ ನಟಿಸಿದ್ದವರು. ಕನ್ನಡದಲ್ಲಿ ಮಾತ್ರವೇ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಅನೇಕ ನಟರನ್ನೇ ಮೀರಿಸಿದ್ದಾರೆ. ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ಯುನ್ನತ ಪ್ರಶಸ್ತಿ ‘ಡಾ.ರಾಜಕುಮಾರ್ ಪ್ರಶಸ್ತಿಯನ್ನ 1999-2000 ಸಾಲಿನಲ್ಲಿ ಲೀಲಾವತಿಗೆ ಕೊಟ್ಟಿದ್ದಾರೆ.
2008ರಲ್ಲಿ ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ನೀಡಲಾಗಿತ್ತು. 2006 ರ ರಲ್ಲಿ ಅವರ ಮಗ ವಿನೋದ್ ರಾಜ್ರ ಕನ್ನಡದ ಕಂದ ಎನ್ನುವ ಸಿನಿಮಾದಲ್ಲಿ ನಟಿಸಿ.. 2009 ರಲ್ಲಿ ಯಾರದು ಎಂಬ ಸಿನಿಮಾದಲ್ಲಿ ಅವರ ಕೊನೆಯ ನಟನೆ ಇತ್ತು. 50 ವರ್ಷಗಳ ಬಣ್ಣದ ಬದುಕನ್ನು ಮುಗಿಸಿ ನಂತರ ಮಗನೇ ಸರ್ವಸ್ವ ಅಂತ ದಿನಗಳನ್ನ ಸವೆಸಿ.. ಹಾಸಿಗೆ ಹಿಡಿದು.. ನಿನ್ನೆ ಇಹಲೋಕ ತ್ಯಜಿಸಿದ್ದಾರೆ.