Facebook Twitter Instagram YouTube
    ಕನ್ನಡ     English     తెలుగు
    Sunday, January 29
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home » ಕೊರೊನಾ 3ನೇ ಅಲೆಯ ಭೀತಿಯ ನಡುವೆ 358ಕ್ಕೂ ಹೆಚ್ಚು ಶಿಶುಗಳ ಸಾವು: ಎಚ್ಚೆತ್ತುಕೊಳ್ಳದ ಸರ್ಕಾರ

    ಕೊರೊನಾ 3ನೇ ಅಲೆಯ ಭೀತಿಯ ನಡುವೆ 358ಕ್ಕೂ ಹೆಚ್ಚು ಶಿಶುಗಳ ಸಾವು: ಎಚ್ಚೆತ್ತುಕೊಳ್ಳದ ಸರ್ಕಾರ

    ain userBy ain userDecember 28, 2021
    Share
    Facebook Twitter LinkedIn Pinterest Email

    ಬಳ್ಳಾರಿ: ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ  ಶಿಶು ಮರಣ ಹೆಚ್ಚಾಗುತ್ತಿದ್ದು, ಕೇವಲ 8 ತಿಂಗಳಲ್ಲಿ 358ಕ್ಕೂ ಅಧಿಕ ಶಿಶುಗಳ ಸಾವನಪ್ಪಿದೆ.  ಹಸುಗೂಸುಗಳ ಮರಣದಿಂದ ಹೆಚ್ಚಳದಿಂದ ತೀವ್ರ ಆತಂಕ ಶುರುವಾಗಿದೆ. ಬಳ್ಳಾರಿಯಲ್ಲಿ 293, ವಿಜಯನಗರದಲ್ಲಿ 65 ಶಿಶುಗಳು ಸಾವನಪ್ಪಿದ್ದು,  ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ 290ಕ್ಕೂ ಹೆಚ್ಚು ಶಿಶು ಮೃತ ಪಟ್ಟಿವೆ.  ಶಿಶುಗಳ ಸಾವಿನ ಪ್ರಮಾಣ ಹೆಚ್ಚಳದಿಂದ ಗಡಿ ಭಾಗದಲ್ಲಿ ಆತಂಕ ಹೆಚ್ಚಾಗಿದ್ದು,

    ದಿನಕ್ಕೆ ಸರಾಸರಿ  3 ಹಸುಗೂಸುಗಳ ಸಾವನ್ನಪ್ಪುತ್ತಿವೆ. ಅಪೌಷ್ಟಿಕತೆ, ಅವಧಿ ಪೂರ್ವ ಪ್ರಸವ, ಸೋಂಕಿನಿಂದ ಆಸ್ಪತ್ರೆಗೆ ಗರ್ಭಿಣಿಯರು ಬರುವ ಮುನ್ನವೇ ಶಿಶು ಸಾವನ್ನಪ್ಪುತ್ತಿದ್ದು, ಆಸ್ಪತ್ರೆಗಳ ಕೊರತೆಯಿಂದ ಸಾವು ಸಂಭವಿಸುತ್ತಿವೆ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಪ್ರತಿ ತಾಲೂಕಿನಲ್ಲಿ ಸೂಕ್ತ ವ್ಯವಸ್ಥೆಯ ಆಸ್ಪತ್ರೆ ತೆರೆಯುವಂತೆ ಆಗ್ರಹ ಮಾಡುತ್ತಿದ್ದಾರೆ.

    Demo

    ಶಿಶುಗಳ ಸಾವಿಗೆ ಕಾರಣ..!

    ಅಪೌಷ್ಟಿಕತೆ, ಕಡಿಮೆ ತೂಕ, ಪ್ರಿಮೆಚ್ಯೂರ್ ಸೇರಿದಂತೆ  ಹೆರಿಗೆ ಸಂದರ್ಭದ ತೊಂದರೆ, ಇನ್​ಫೆಕ್ಷನ್​​​​ನಿಂದಾಗಿ ಶೀಶು ಸಾವನಪ್ಪುತ್ತಿವೆ. ಗರ್ಭ ಧರಿಸಿದ ತಾಯಂದಿರ ಆರೈಕೆಯಲ್ಲಿ ನಿರ್ಲಕ್ಷ್ಯ, ಪೌಷ್ಟಿಕ ಆಹಾರ, ಟ್ಯಾಬ್ಲೆಟ್, ತಿಂಗಳಿಗೊಮ್ಮೆ ಚೆಕಪ್  ಮಾಡಿಸದಿರುವುದು, ಹೆರಿಗೆ ಸಂದರ್ಭದಲ್ಲಿ ತಾಯಂದಿರ ಆರೋಗ್ಯದಲ್ಲಿ ಏರುಪೇರು ಸಾವಿಗೆ ಕಾರಣವಾಗುತ್ತಿದೆ.ಹೆರಿಗೆ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯೂ ಒಂದು  ಕಾರಣವಾಗಿದ್ದು,

    ಪ್ರತಿ ತಾಲೂಕು ಘಟಕಗಳಲ್ಲಿ ಸುಸಜ್ಜಿತ ಹೆರಿಗೆ ಆಸ್ಪತ್ರೆ ಕೊರತೆ ಇದ್ದು, ಹಳ್ಳಿಗಳಿಂದ ಬಳ್ಳಾರಿಯಲ್ಲಿರುವ ವಿಮ್ಸ್ ಆಸ್ಪತ್ರೆಗೆ ಬರಬೇಕಾಗುತ್ತದೆ. ಆಸ್ಪತ್ರೆಗೆ ಬರುವ ಮೊದಲೇ  ಮಾರ್ಗ ಮದ್ಯದಲ್ಲೇ ಶಿಶುಗಳ ಸಾವು ಸಂಭವಿಸುವುದೇ ಹೆಚ್ಚಾಗಿದ್ದು, ಬಡವರು ಖಾಸಗಿ ಆಸ್ಪತ್ರೆಗಳಲ್ಲಿ ಟ್ರೀಟ್​ಮೆಂಟ್​ ಪಡೆಯುವುದು ಕಷ್ಟವಾಗಿದೆ. ಏನು ಅರಿಯದ ಕಂದಮ್ಮಗಳು ಪ್ರಪಂಚ ನೋಡುವುದಕ್ಕೂ ಮುನ್ನ ಸಾವನಪ್ಪುತ್ತಿರುವುದು ವಿಪರ್ಯಾಸ.

    Share. Facebook Twitter LinkedIn Email WhatsApp

    Related Posts

    BBC-ಬಿಬಿಸಿ ಸಾಕ್ಷ್ಯಚಿತ್ರವನ್ನು ಸಿದ್ದರಾಮಯ್ಯ ಅವರೂ ವಿರೋಧಿಸಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

    January 29, 2023

    ಶಿಕ್ಷಣ ಇಂದು ವ್ಯಾಪಾರೋದ್ಯಮವಾಗಿದೆ ಪತ್ರಕರ್ತ ಎಸ್. ಸಿದ್ದರಾಜು.

    January 29, 2023

    ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ: ಹೊತ್ತಿ ಉರಿದ ಕಾರು

    January 29, 2023

    ಟ್ರೆಕ್ಕಿಂಗ್ ಹೋಗೀ ನಂದಿಗಿರಿಧಾಮದ ಪ್ರಪಾತಕ್ಕೆ ಬಿದ್ದ ಯುವಕರು ರಕ್ಷಣೆಗಾಗಿ ಪೊಲೀಸರ ಮೊರೆ

    January 29, 2023

    ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಎಸ್‌ಟಿ ಮೀಸಲಾತಿಗಾಗಿ ಪಾದೆಯಾತ್ರೆ: ಕೆ.ಪಿ. ನಂಜುಂಡಿ ಭಾಗಿ

    January 29, 2023

    ಮೈಸೂರು ವಿವಿಯಲ್ಲಿ ರಾಜ್ಯ ಮಟ್ಟದ ಜಾನಪದ ಪ್ರಪಂಚ ಜಾನಪದ ಪ್ರಶಸ್ತಿ ಪ್ರದಾನ

    January 29, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.