ಚಾಲಕನ ನಿರ್ಲಕ್ಷ್ಯ: ಸರ್ಕಾರಿ ಬಸ್ ಹರಿದು 30 ಕುರಿಗಳು ಸಾವು!

ಗದಗ:- ಗಜೇಂದ್ರಗಡ-ರೋಣ ರಸ್ತೆ ಮಾರ್ಗದ ದಿಂಡೂರ ಗ್ರಾಮದ ಕ್ರಾಸ್ ನಲ್ಲಿ ಸರ್ಕಾರಿ ಬಸ್ ಹರಿದು 30 ಕುರಿಗಳು ಸಾವನ್ನಪ್ಪಿದ ಘಟನೆ ಜರುಗಿದೆ. ಮಕ್ಕಳಿಲ್ಲ ಅಂತ ಕೊರಗುತ್ತಿದ್ದೀರಾ!?, ಈ ಬೀಜಗಳನ್ನು ನೆನೆಸಿಟ್ಟು ತಿಂದ್ರೆ ಎಲ್ಲಾ ಸರಿಹೋಗುತ್ತೆ! ಓವರ್ ಟೆಕ್ ಮಾಡಲು ಹೋಗಿ ಮೂವತ್ತು ಕುರಿಗಳ ಮೇಲೆ ಬಸ್ ಚಾಲಕ ಹರಿಸಿದ್ದಾನೆ. ಬದಾಮಿ ಘಟಕದ ಸರ್ಕಾರಿ ಬಸ್ ಚಾಲಕನ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ. ಸುಮಾರು 4.5 ಲಕ್ಷ‌ ಮೌಲ್ಯದ ಕುರಿಗಳು ಸಾವನ್ನಪ್ಪಿದ್ದು, ಕುರಿಗಳನ್ನು ಕಳೆದುಕೊಂಡ ಕುರಿಗಾಹಿಗಳ ಗೋಳಾಟ ಹೇಳತ್ತೀರದ್ದಾಗಿದೆ.